Advertisement

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ಆವಶ್ಯಕತೆಗೆ ಸರಿಯಾಗಿ ಧನಾಗಮ

07:24 AM Feb 28, 2024 | Team Udayavani |

ಮೇಷ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಉದ್ಯೋಗಸ್ಥರ ಕೆಲವು ನಿರೀಕ್ಷೆಗಳು ಈಡೇರುವ ಸೂಚನೆ.ಉದ್ಯಮಿಗಳಿಂದ ಇನ್ನಷ್ಟು ಅವಕಾಶಗಳಿಗಾಗಿ ಶೋಧನೆ. ದೀರ್ಘ‌ಕಾಲದ ವ್ಯಾವಹಾರಿಕ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ನಿವಾರಣೆ.

Advertisement

ವೃಷಭ: ವೃತ್ತಿಜೀವನದ ಭವಿಷ್ಯದ ಕುರಿತು ಚಿಂತೆ ಬೇಡ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸಹಜ ಸ್ಪರ್ಧೆ. ಉತ್ಪನ್ನಗಳ ಗುಣ ಮಟ್ಟದ ಕಡೆಗೆ ಗಮನವಿರಲಿ. ಗುರುಸಮಾನರ ಅಕಸ್ಮಾತ್‌ ಭೇಟಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಗಣನೀಯ ಪ್ರಗತಿ.

ಮಿಥುನ: ನಿಶ್ಚಿಂತೆಯಿಂದ ಜೀವಿಸುವುದನ್ನು ಕಲಿಯಿರಿ. ಉದ್ಯೋಗದಲ್ಲಿ ಪ್ರತಿಭೆಗೆ ಗೌರವ. ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ. ಕುಟುಂಬದ ಮನೆಯಲ್ಲಿ ಶುಭಕಾರ್ಯ. ವಾಹನ ದುರಸ್ತಿ ಬಲ್ಲವರಿಗೆ ಉದ್ಯೋಗಾವಕಾಶ.

ಕರ್ಕಾಟಕ: ನಿಮ್ಮ ಕಾರ್ಯದಕ್ಷತೆ ಪೂರ್ಣ ಪ್ರಮಾಣದಲ್ಲಿ ಪ್ರಕಟವಾಗಲಿ. ಉದ್ಯೋಗದಲ್ಲಿ ತೃಪ್ತಿಯ ದಿನ. ವ್ಯವಹಾರ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿನಿಂದ ಸಮಾಜದಲ್ಲಿ ಗೌರವ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.

ಸಿಂಹ: ತತ್‌ಕ್ಷಣ ಸ್ಪಂದಿಸುವ ಗುಣದಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಉದ್ಯಮದಲ್ಲಿ ಇನ್ನಷ್ಟು ಅವಕಾಶಗಳ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ ಸಂಭವ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಂದ ಲಾಭ.

Advertisement

ಕನ್ಯಾ: ದೈಹಿಕ ಶ್ರಮದ ಕಾರಣದಿಂದ ಉತ್ಸಾಹ ಭಂಗ. ಆವಶ್ಯಕತೆಗೆ ಸರಿಯಾಗಿ ಧನಾಗಮ. ಸಣ್ಣ ಉದ್ಯಮ ಆರಂಭಕ್ಕೆ ವಿಘ್ನ. ದೂರದಿಂದ ಶುಭವಾರ್ತೆ. ನೂತನ ವಾಹನ ಖರೀದಿ..ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ.

ತುಲಾ: ನಿಮ್ಮ ರಾಶಿಗೆ ಸಹಜವಾದ ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಉದ್ಯೋಗ ಸ್ಥಾನ ದಲ್ಲಿ ಹೊಸ ಬಗೆಯ ಅವಕಾಶಗಳ ಸಾಧ್ಯತೆ. ಗುರುಹಿರಿಯರ ಸಕಾಲಿಕ ಮಾರ್ಗದರ್ಶನ ಲಭ್ಯ. ಮಕ್ಕಳ ಪ್ರತಿಭೆಗೆ ಶಿಕ್ಷಕರಿಂದ ಶ್ಲಾಘನೆ. ಆರೋಗ್ಯ ಉತ್ತಮ.

ವೃಶ್ಚಿಕ: ಸತ್ಕಾರ್ಯಗಳಿಗೆ ಸೂಕ್ತ ಪ್ರತಿಫಲ ಲಭಿಸುವ ಸಮಯ. ಉದ್ಯೋಗದಲ್ಲಿ ಪದೋ ನ್ನತಿ. ಉದ್ಯಮ ಕ್ಷೇತ್ರದಲ್ಲಿ ಜಯಭೇರಿ. ಹಿರಿಯರಿಗೆ ಉತ್ತಮ ದೇಹಾರೋಗ್ಯ. ವ್ಯವಹಾರದ ಸಂಬಂಧ ದಕ್ಷಿಣ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ.

ಧನು: ಅಂತರ್ವಾಣಿಯ ಮಾರ್ಗದರ್ಶನದಂತೆ ನಡೆದುಕೊಂಡರೆ ಸಕಲ ಕಾರ್ಯಸಿದ್ಧಿ. ವಸ್ತ್ರೋ ದ್ಯಮಿಗಳಿಗೆ ಮತ್ತು ಸ್ವರ್ಣೋದ್ಯಮಿಗಳಿಗೆ ಅಮಿತ ಲಾಭ. ಉದ್ಯೋಗಸ್ಥರಿಗೆ ಮಂದಗತಿಯಲ್ಲಿ ಮುನ್ನಡೆ. ನಿವೃತ್ತ ವೃತ್ತಿಪರರಿಗೆ ಹೊಸ ಅವಕಾಶ.

ಮಕರ: ಕೋಪ ವಿಜೃಂಭಿಸದಂತೆ ಎಚ್ಚರವಿರಲಿ. ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ದೈನಂದಿನ ವ್ಯವಹಾರದಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಧ್ಯಾನ, ದೇವತಾರ್ಚನೆಯಿಂದ ನೆಮ್ಮದಿ. ಸಣ್ಣ ಪ್ರಯಾಣದ ಸಾಧ್ಯತೆ.

ಕುಂಭ: ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಮುದ್ರಣ ಸಾಮಗ್ರಿ, ಸ್ಟೇಶನರಿ,ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ಗೃಹಿಣಿಯರಿಗೆ ದ್ರವ್ಯಲಾಭ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ.ಸಮಾಜ ಸೇವೆಯಲ್ಲಿ ಆಸಕ್ತಿ.

ಮೀನ: ಉದ್ಯೋಗದ ಸಂಬಂಧ ದೂರದ ಸ್ಥಳಕ್ಕೆ ಭೇಟಿ ಸಂಭವ. ಇಲಾಖೆಗಳಿಂದ ಉತ್ತಮ ಸ್ಪಂದನ.ಹೊಸ ಕಾರ್ಯಾರಂಭಕ್ಕೆ ತಾತ್ಕಾಲಿಕ ವಿಘ್ನ..ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಗ್ರಾಮೋದ್ಯೋಗಗಳಿಗೆ ಪ್ರೋತ್ಸಾಹ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ.

Advertisement

Udayavani is now on Telegram. Click here to join our channel and stay updated with the latest news.

Next