Advertisement

Daily Horoscope: ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ, ಆಪ್ತ ವರ್ಗದಲ್ಲಿ ವಿವಾಹ ನಿಶ್ಚಯ

07:17 AM Feb 23, 2024 | Team Udayavani |

ಮೇಷ: ಆನಂದದಲ್ಲಿ ದಿನಾರಂಭ. ಇಡೀ ದಿನ ಚಟುವಟಿಕೆಗಳಿಂದ ತುಂಬಿರುತ್ತದೆ. ಉದ್ಯೋಗ ರಂಗದಲ್ಲಿರುವವರಿಗೆ ಹೊಸ ಜವಾಬ್ದಾರಿ ಅನಿವಾರ್ಯ. ಹಿರಿಯರಿಗೆ ಸಮಾಜದಲ್ಲಿ ಗೌರವ ವೃದ್ಧಿ. ಕಿರಿಯ ಸಹಕಾರಿಗಳಿಗೆ ಮಾರ್ಗದರ್ಶನ. ಗೃಹಿಣಿಯರಿಗೆ ಸಂತಸದ ವಾತಾವರಣ.

Advertisement

ವೃಷಭ: ತಾತ್ಕಾಲಿಕ ಅಡಚಣೆಗಳಿಂದ ಮುಕ್ತಿ. ಪ್ರತ್ಯುಪಕಾರ ಮಾಡುವ ಅವಕಾಶವನ್ನು ಕಳೆದು ಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವೃದ್ಧಿ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ. ದೂರದಿಂದ ಶುಭ ಸಮಾಚಾರ. ಹಿರಿಯರಿಗೆ ಅಲ್ಪಕಾಲದ ಅನಾರೋಗ್ಯದಿಂದ ಬಿಡುಗಡೆ.

ಮಿಥುನ: ದೂರದಲ್ಲಿರುವ ಚಿಂತೆಗಳನ್ನು ಹತ್ತಿರಕ್ಕೆ ಕರೆಯಬೇಡಿ. ದೇವತಾ ಪ್ರಾರ್ಥನೆಯಿಂದ ಕ್ಷಿಪ್ರ ಫ‌ಲ ಪ್ರಾಪ್ತಿ. ರೋಗಗ್ರಸ್ತರ ಚಿಕಿತ್ಸೆಗೆ ಸಹಾಯ ಮಾಡುವ ಅವಕಾಶ. ದೇವರ ದರ್ಶನಕ್ಕಾಗಿ ಸಣ್ಣ ಪ್ರಯಾಣ ಸಂಭವ. ಆಪ್ತ ವರ್ಗದಲ್ಲಿ ವಿವಾಹ ನಿಶ್ಚಯ.

ಕರ್ಕಾಟಕ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿಯ ನಡುವೆ ಮುನ್ನಡೆ.. ಆತಂಕ ಸೃಷ್ಟಿಸಿ ಸಂತೋಷ ಪಡುವವರಿಗೆ ಹಿನ್ನಡೆ. ಆಸ್ತಿ ವ್ಯವಹಾರ ಮಾತುಕತೆಗೆ ಚಾಲನೆ. ಆಸ್ತಿ ವ್ಯಾಜ್ಯ ರಾಜಿಯಲ್ಲಿ ಪರಿಹಾರಕ್ಕೆ ಪ್ರಯತ್ನ. ಗೃಹೋದ್ಯಮಿಗಳಿಗೆ ಸಂತೋಷದ ದಿನ.

ಸಿಂಹ: ಆತಂಕಗಳನ್ನು ನಿರ್ಲಕ್ಷಿಸಿ ರಾಜಮಾರ್ಗದಲ್ಲಿ ಮುನ್ನಡೆಯುವ ನಿಮಗೆ ಯಶಸ್ಸು ಶತಃಸಿದ್ಧ. ಇನ್ನೊಂದು ಹೊಸ ಉದ್ಯಮಕ್ಕೆ ಕೈಹಾಕುವ ಯೋಚನೆ ಸದ್ಯಕ್ಕೆ ಬೇಡ. ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದ ಸಕಾಲಿಕ ಸ್ಪಂದನ. ಬಂಧುವರ್ಗದಲ್ಲಿ ವಿವಾಹ ಮಾತುಕತೆ.

Advertisement

ನ್ಯಾ: ಯುವಕರಿಗೆ ದೇಹದಾಡ್ಯì ವೃದ್ಧಿ, ಅಂಗಸಾಧನೆ, ಕ್ರೀಡೆಗಳಲ್ಲಿ ಗೆಲ್ಲುವ ಅವಕಾಶಗಳು ತಾವಾಗಿ ಒದಗುತ್ತವೆ. ಸೌಂದರ್ಯಸಾಧನಗಳ ವಿತರಕರಿಗೆ ಉತ್ತಮ ಲಾಭ. ಉದ್ಯೋಗ ರಂಗದಲ್ಲಿ ತೀವ್ರ ಪೈಪೋಟಿ. ಹಿರಿಯರಿಗೆ ಹವಾಮಾನ ವೈಪರೀತ್ಯದಿಂದ ಆರೋಗ್ಯ ಏರುಪೇರು.

ತುಲಾ: ಹುಡುಕುತ್ತಿದ್ದ ಅವಕಾಶ ತಾನಾಗಿ ಒದಗಿ ಬಂದು ಸಂತೃಪ್ತಿ. ದೇವತಾರಾಧನೆಯತ್ತ ವಿಶೇಷ ಒಲವು. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ನಿವೃತ್ತಿಯ ಹಂತದಲ್ಲಿರುವವರಿಗೆ ಶುಭಸಮಾಚಾರ. ರಾಜಕಾರಣಿಯೊಡನೆ ಭೇಟಿ ಸಂಭವ.

ವೃಶ್ಚಿಕ: ನಾಮಸ್ಮರಣೆ, ಸಂಗೀತ ಶ್ರವಣದಲ್ಲಿ ಆಸಕ್ತಿ. ಸಾಹಿತ್ಯ ಸಾಧಕರಿಗೆ ಸಾರ್ಥಕ ಭಾವ. ಉದ್ಯೋಗ, ವ್ಯವಹಾರಗಳಲ್ಲಿ ತೊಡಗಿರುವವರಿಗೆ ಯಶಸ್ಸು ಸಮಾಧಾನಕರ. ದೀರ್ಘಾವಧಿ ಹೂಡಿಕೆಗಳಲ್ಲಿ ಆಸಕ್ತಿ. ಅತಿಥಿ ಸತ್ಕಾರ ಯೋಗ. ಮಕ್ಕಳ ಅಧ್ಯಯನಕ್ಕೆ ಉತ್ತೇಜನ ಅವಶ್ಯ.

ಧನು: ಮುಖಸ್ತುತಿ ಮಾಡಿ ಬೇಳೆ ಬೇಯಿಸಿಕೊಳ್ಳುವವರಿಂದ ದೂರವಿರಿ. ಏಕಾ ಗ್ರತೆಯ ಪ್ರಯತ್ನದಿಂದ ಸುಲಭವಾಗಿ ಯಶಸ್ಸು. ಯೋಜಿತ ಕಾರ್ಯ ಮುಂದೂಡಿಕೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ.

ಮಕರ: ಮಹತ್ವಾಕಾಂಕ್ಷಿಗಳಿಗೆ ಕೊಂಚ ನೆಮ್ಮದಿಯ ದಿನ. ಕಾರ್ಯಸಾಧನೆಗೆ ಒದಗಿರುವ ವಿಘ್ನಗಳು ದೂರ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಶ್ಲಾಘನೆ. ಮಾತಿನಲ್ಲಿ ಜಾಣ್ಮೆ, ತಾಳ್ಮೆ ಎರಡೂ ಇರಲಿ. ವ್ಯವಹಾರ ಬದಲಾವಣೆಗೆ ಅವಸರ ಬೇಡ.

ಕುಂಭ: ಆರೋಗ್ಯದ ಕಡೆಗೆ ಗಮನ ಇರಲಿ. ಅನಿರೀಕ್ಷಿತ ಧನಲಾಭ ಯೋಗ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಲಾಭ. ದಕ್ಷಿಣ ದಿಕ್ಕಿನತ್ತ ಪ್ರಯಾಣ ಸಂಭವ. ಪಿತೃಸಮಾನರ ಮಾರ್ಗದರ್ಶನದಿಂದ ವ್ಯವಹಾರದಲ್ಲಿ ಲಾಭ. ಆಪ್ತ ಮಿತ್ರರ ಅಕಸ್ಮಾತ್‌ ಆಗಮನ.

ಮೀನ: ಉತ್ತಮ ಅವಕಾಶಗಳು ಒದಗಿ ಬಂದು ಹರ್ಷ. ಮಧ್ಯವರ್ತಿ ವ್ಯವಹಾರಸ್ಥರಿಗೆ ನೆಮ್ಮದಿ. ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಂದಾಣಿಕೆಯಿಂದ ಪ್ರಗತಿ.ನಿರೀಕ್ಷಿತ ಧನ ಕೈಸೇರುವ ಶುಭ ಸೂಚನೆ. ತಾಯಿ ಅಥವಾ ಮಾತೃಸಮಾನರ ಖನ್ನತೆ ತೊಲಗಿಸಲು ಪ್ರಯತ್ನಿಸಿ. ಮಕ್ಕಳ ವ್ಯಾಸಂಗ ಶೀಘ್ರಗತಿಯಲ್ಲಿ ಮುನ್ನಡೆ.

Advertisement

Udayavani is now on Telegram. Click here to join our channel and stay updated with the latest news.

Next