Advertisement

Horoscope: ಹಲವು ವಿಶಿಷ್ಟ ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ,ಅಲ್ಪಕಾಲಿಕ ಹೂಡಿಕೆಗಳ ಯೋಚನೆ ಬೇಡ

07:28 AM Feb 14, 2024 | Team Udayavani |

ಮೇಷ: ನಿಮ್ಮ ಇಷ್ಟಾರ್ಥಗಳಲ್ಲಿ ಹೆಚ್ಚಿನವು ಈಡೇರುವ ದಿನ. ಉದ್ಯೋಗ ಸ್ಥಾನದಲ್ಲಿ ನಿಮ್ಮ ಇಚ್ಛೆಯಂತೆ ವ್ಯವಸ್ಥೆಗಳು ಏರ್ಪಡಬಹುದು.ಉದ್ಯಮ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ಇಂದಿನ ಮಟ್ಟಿಗೆ ಅನುಕೂಲ.

Advertisement

ವೃಷಭ: ನಿಮ್ಮ ಪ್ರಾರ್ಥನೆಗಳು ಫ‌ಲಿಸುವ ದಿನ ಆಗಬೇಕಾಗಿದ್ದ ವೇತನಾದಿ ಸೌಲಭ್ಯ ಸುಧಾರಣೆ. ಸರಕಾರಿ ಅಧಿಕಾರಿಗಳಿಗೆ ಇಷ್ಟಾರ್ಥ ಸಿದ್ಧಿ. ಉದ್ಯಮದ ಉತ್ಪನ್ನಗಳ ಗ್ರಾಹಕರ ಸಂಖ್ಯೆ ಏರಿಕೆ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ.

ಮಿಥುನ: ಹಲವು ವಿಶಿಷ್ಟ ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಮತ್ತೆ ವಿಭಾಗ ಬದಲಾವಣೆ. ಸ್ವಂತ ಉದ್ಯಮದ ಪರಿಸ್ಥಿತಿ ಸುಧಾರಣೆ.ವಸ್ತ್ರ, ಆಭರಣಾದಿ ಉದ್ಯಮಗಳಿಗೆ ಮುನ್ನಡೆ. ಅಲ್ಪಕಾಲಿಕ ಹೂಡಿಕೆಗಳ ಯೋಚನೆ ಬೇಡ.

ಕರ್ಕಾಟಕ: ಅಪವಾದಗಳ ಸುಳಿಯಲ್ಲಿ ಸಿಲುಕದಂತೆ ಎಚ್ಚರವಾಗಿರಿ. ಉದ್ಯೋಗ ಸ್ಥಾನ ದಲ್ಲಿ ಹಿತಶತ್ರುಗಳ ಬಾಧೆ. ಉದ್ಯಮಗಳ ಕಾನೂನು ಸಮಸ್ಯೆ ನಿವಾರಣೆ. ನೌಕರರ ಕ್ಷೇಮಾಭಿವೃದ್ಧಿ ಯೋಜನೆ ಜಾರಿ. ಖಾದಿ, ಗ್ರಾಮೋದ್ಯೋಗಗಳಿಗೆ ಅಭಿವೃದ್ಧಿಯ ಕಾಲ.

ಸಿಂಹ: ಇದುವರೆಗಿನ ಕಾರ್ಯಗಳ ಹಿನ್ನೋಟ ದಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳ ಗುಣಮಟ್ಟದಿಂದಾಗಿ ಹೊರಗಿನ ರಾಜ್ಯಗಳಿಂದ ಬೇಡಿಕೆ ಹೆಚ್ಚಳ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

Advertisement

ಕನ್ಯಾ: ಉದ್ಯೋಗ, ವ್ಯವಹಾರಗಳಲ್ಲಿ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಯೋಗ. ದೀರ್ಘಾವಧಿ ಉಳಿತಾಯ ಯೋಜನೆಗಳಿಂದ ಲಾಭ.

ತುಲಾ: ದೈವಾನುಗ್ರಹದ ಸಮಯ ಸನ್ನಿಹಿತ. ಉದ್ಯೋಗದಲ್ಲಿ ಕೊಂಚ ಸಮಾಧಾನ. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿ ವೃದ್ಧಿಗೆ ಸಹಾಯ.ಉದ್ಯೋಗ ಸ್ಥಾನಕ್ಕೆ ಗಣ್ಯರ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ವ್ಯವಹಾರಾರ್ಥ ಸಣ್ಣ ಪ್ರಯಾಣ ನಿರೀಕ್ಷೆ.

ವೃಶ್ಚಿಕ: ಬದಲಾಗುವ ಬದುಕಿಗೆ ಹೊಂದಿ ಕೊಂಡ ಸಮಾಧಾನ. ಉದ್ಯೋಗ ಸ್ಥಾನ ದಲ್ಲಿ ಕೊಂಚ ಮುನ್ನಡೆಯ ನಿರೀಕ್ಷೆ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಯೊಂದಿಗೆ ನಿಧಾನಗತಿಯಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.

ಧನು: ಬದುಕಿನ ನಿತ್ಯ ಹೋರಾಟದಲ್ಲಿ ಅನಾಯಾಸ ವಿಜಯ. ಉದ್ಯೋಗದಲ್ಲಿ ಲಭಿಸಿದ ಹಿರಿಯ ಸ್ಥಾನ ಭದ್ರ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ವಸ್ತ್ರ, ಸಿದ್ಧ ಉಡುಪು ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಊರಿನ ದೇವಾಲಯಕ್ಕೆ ಸಂದರ್ಶನ.

ಮಕರ: ವೃದ್ಧಿಯಾದ ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಹೆಚ್ಚುವರಿ ಜವಾಬ್ದಾರಿಗಳು. ಉದ್ಯಮಕ್ಕೆ ಹೊಸ ನೌಕರರ. ಸೇರ್ಪಡೆ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸತ್ಕರ್ಮಗಳಿಗೆ ಭಗವಂತನಿಂದ ಫ‌ಲ ನೀಡಿಕೆ. ಉದ್ಯೋಗಸ್ಥಾನದಲ್ಲಿ ಮುಂದುವರಿದ ಗುರುಸ್ಥಾನ.. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳಿಗೆ ಅಧಿಕ ಬೇಡಿಕೆ.

ಮೀನ: ದಿನಗಳು ಉರುಳಿದಂತೆ ಏರುತ್ತಿರುವ ಕೆಲಸದ ಹೊರೆಯನ್ನು ಕಂಡು ಗಾಬರಿಯಾಗದಿರಿ.ವೃತ್ತಿ ಬಾಂಧವರ ಸರ್ವವಿಧ ಸಹಾಯ. ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಕೃಷಿ ಭೂಮಿ ಖರೀದಿಗೆ ಚಿಂತನೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next