Advertisement

Daily Horoscope: ಉದ್ಯೋಗದಲ್ಲಿ ಸ್ಥಾನಕ್ಕೆ ಸರಿಯಾದ ಗೌರವ ಹಾಗೂ ವೇತನ

07:29 AM Dec 28, 2023 | Team Udayavani |

ಮೇಷ: ಏಕಾಗ್ರತೆ ವೃದ್ಧಿಗೆ ಸಾಧನೆ ಅವಶ್ಯ. ಲಭಿಸಿರುವ. ಉದ್ಯೋಗದಲ್ಲಿ ಸ್ಥಿರವಾಗುವ ಪ್ರಯತ್ನ ಸಫ‌ಲ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಎದುರಾಳಿಗಳ ಪೈಪೋಟಿ ಎದುರಿಸಲು ಉದ್ಯಮಿಗಳು ಸಜ್ಜು. ನ್ಯಾಯಾಲಯದಲ್ಲಿರುವ ವ್ಯಾಜ್ಯ ಮುಂದೂಡಿಕೆ.

Advertisement

ವೃಷಭ: ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅವಶ್ಯ. ಪಾಲುದಾರಿಕೆ. ವ್ಯವಹಾರದಲ್ಲಿ ಅಭಿವೃದ್ಧಿ ಕುಂಠಿತ. ಉದ್ಯೋಗಸ್ಥರಿಗೆ ವೇತನ, ಭತ್ತೆ ಏರಿಕೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಆರೋಗ್ಯ ಉತ್ತಮ.

ಮಿಥುನ: ಚಿತ್ತಚಾಂಚಲ್ಯದಿಂದ ಮುಕ್ತರಾಗುವ ಪ್ರಯತ್ನ. ಉದ್ಯೋಗದಲ್ಲಿ ಸ್ಥಾನಕ್ಕೆ ಸರಿಯಾದ ಗೌರವ ಹಾಗೂ ವೇತನ. ಬಂಧುವರ್ಗದಲ್ಲಿ ಶುಭ ಕಾರ್ಯ. ಉದ್ಯಮ ಅಭಿವೃದ್ಧಿಗೆ ಪಾಲುದಾರರೊಂದಿಗೆ ಸಮಾಲೋಚನೆ. ಹಿರಿಯರ ಆಸ್ತಿಯ ವಿವಾದ ಮುಕ್ತಾಯ.

ಕರ್ಕಾಟಕ: ನಿಯೋಜಿತ ಕಾರ್ಯಗಳು ಶೀಘ್ರ ಗತಿಯಲ್ಲಿ ಮುನ್ನಡೆ. ಸಣ್ಣ ಹಾಗೂ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ಉತ್ತಮ ಆದಾಯ. ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಸಂಸಾರ ನಿರ್ವಹಣೆಯ ಚಿಂತೆ. ಉದ್ಯಮ ಸುಧಾರಣೆಗೆ ಬ್ಯಾಂಕ್‌ ನೆರವು ಲಭ್ಯ.

ಸಿಂಹ: ಹೆಚ್ಚಿನ ನಿಯೋಜಿತ ಕಾರ್ಯಗಳು ವಾರದ ಮಧ್ಯದÇÉೇ ಮುಕ್ತಾಯ. ಉದ್ಯೋ ಗಸ್ಥರಿಗೆ ಎಂದಿನಂತೆ ಕೆಲಸದ ಒತ್ತಡ . ಉದ್ಯಮದ ಹೊಸೊ ವಿಭಾಗಕ್ಕೆ ನೌಕರರ ಸೇರ್ಪಡೆ. ಮನೆಯಲ್ಲಿ ದೇವತಾ ಕಾರ್ಯ. ಎಲ್ಲರಿಗೂ ಸಂಭ್ರಮ.

Advertisement

ಕನ್ಯಾ: ವೃತ್ತಿ ಪರಿಣತರಿಗೆ ಸ್ಥಿರ ಉದ್ಯೋಗ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ವ್ಯಾಪಾರಿಗಳಿಗೆ ಒಳ್ಳೆಯ ದಿನ. ಸಂಜೆಯ ಹೊತ್ತು ಕುಟುಂಬದ ಸದಸ್ಯರ ಸೌಹಾರ್ದಸಮ್ಮಿಲನ. ಪ್ರಾಪ್ತ ವಯಸ್ಕ ಹುಡುಗ- ಹುಡುಗಿಯರಿಗೆ ಸರಿಯಾದ ಜೋಡಿ ಅನ್ವೇಷಣೆ.

ತುಲಾ: ಹದಗೆಟ್ಟಿದ್ದ ದೇಹಾರೋಗ್ಯ ಸುಧಾರಣೆ. ದೇವತಾ ಕಾರ್ಯ ಮುಗಿಸಿ ಉದ್ಯೋಗಕ್ಕೆ ಸೇರ್ಪಡೆ. ಉದ್ಯಮಿದಲ್ಲಿ ಮಾಲಕ – ನೌಕರರ ನಡುವೆ ಸಾಮರಸ್ಯ. ನ್ಯಾಯಾಲಯದಲ್ಲಿರುವ ವಿವಾದ ಶೀಘ್ರ ಇತ್ಯರ್ಥ ವಾಗುವ ಸೂಚನೆ. ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಂದ ಲಾಭ.

ವೃಶ್ಚಿಕ: ಎಲ್ಲ ದೃಷ್ಟಿಯಿಂದಲೂ ಸಮಾಧಾನ, ಸಂತೃಪ್ತಿಯ ದಿನ. ಉದ್ಯೋಗಸ್ಥಾನದಲ್ಲಿ ಮೇಲಿನವರಿಂದ ಪ್ರಶಂಸೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಏರಿಕೆಯಿಂದ ವ್ಯಾಪಾರ ಸುಧಾರಣೆ. ಆಭರಣ ಅಂಗಡಿಗಳಲ್ಲಿ ತುಂಬಿದ ಗ್ರಾಹಕರು.

ಧನು: ಉದ್ಯೋಗಸ್ಥ ಮಹಿಳೆಯರಿಗೆ ಹಲವು ಬಗೆಯ ಸವಾಲುಗಳ ಸನ್ನಿವೇಶ. ಉದ್ಯೋಗಸ್ಥ ಪುರುಷರಿಗೆ ಜವಾಬ್ದಾರಿ ಬದಲಾವಣೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಯಂತ್ರೋದ್ಯಮಗಳಿಗೆ ಸರಕಾರದಿಂದ ಸಮಸ್ಯೆ.

ಮಕರ: ಸಾತ್ವಿಕ- ತಾಮಸಿಕ ಶಕ್ತಿಗಳ ನಡುವೆ ನಿಲ್ಲದ ಹೋರಾಟ. ನ್ಯಾಯದ ಪರವಾಗಿ ಹೋರಾಡುವವರ ತೇಜೋವಧೆಗೆ ಸಂಚು. ಉದ್ಯೋಗ ಸ್ಥಾನದಲ್ಲಿ ಮಾಮೂಲು ಒತ್ತಡ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಕುಂಭ: ಹಲವು ಮೂಲಗಳಿಂದ ಆದಾಯ ಹೆಚ್ಚಳ. ಉದ್ಯೋಗದಲ್ಲಿ ಜವಾಬ್ದಾರಿ ವಿಸ್ತರಣೆ. ಹೊಸ ಕಟ್ಟಡದಲ್ಲಿ ವ್ಯವಹಾರಕ್ಕೆ ಸಿದ್ಧತೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸರಕಾರಿ ನೌಕರಿ ಸಿಗುವ ಸಾಧ್ಯತೆ. ವ್ಯವಹಾರದ ಸಂಬಂಧ ಅರ್ಧದಿನದ ಪ್ರಯಾಣ ಸಂಭವ.

ಮೀನ: ನಿಯೋಜಿತ ಕಾರ್ಯಗಳು ತ್ವರಿತ ಗತಿಯಲ್ಲಿ ಮುನ್ನಡೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸೇವಾರೂಪದ ಕಾರ್ಯಗಳಿಗೆ ಪ್ರಾಶಸ್ತ್ಯ ಖಾದ್ಯ ಪದಾರ್ಥ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ನೂತನ ವಾಹನ ಖರೀದಿಗೆ ಚಿಂತನೆ. ಉದ್ಯೋಗ ಅರಸುವ ಯುವಜನರಿಗೆ ಮಾರ್ಗದರ್ಶಕರಾಗುವ ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next