Advertisement

Daily Horoscope: ಕಷ್ಟದ ದಿನಗಳ ಅಂತ್ಯ, ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯದ ಭರವಸೆ

07:16 AM Dec 20, 2023 | Team Udayavani |

ಮೇಷ: ಸ್ವಂತ ಉದ್ಯಮಕ್ಕೆ ಹೊಸ ರೂಪ ನೀಡುವ ಬಗ್ಗೆ ಚಿಂತನೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ದೇವತಾ ಸ್ಥಳಕ್ಕೆ ಭೇಟಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಬಂಧುಗಳ ಆಗಮನ.

Advertisement

ವೃಷಭ: ವಾರದ ಕೊನೆಯಲ್ಲಿ ಸರ್ವತೋಮುಖ ಅಭಿವೃದ್ಧಿಯ ಸೂಚನೆ. ಉದ್ಯೋಗಸ್ಥರಿಗೆ ನಿಗದಿತ ಕಾರ್ಯ ಮುಗಿಸಿದ ತೃಪ್ತಿ. ಸ್ವಂತ ಉದ್ಯಮದ ಬೆಳವಣಿಗೆ ಸ್ಥಿರ. ಮಕ್ಕಳ ಸಾಮಾನ್ಯಜ್ಞಾನ ವೃದ್ಧಿಗೆ ಪ್ರಯತ್ನ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ , ಸಾಮರಸ್ಯವೃದ್ಧಿ.

ಮಿಥುನ: ಕಷ್ಟದ ದಿನಗಳ ಅಂತ್ಯ. ಉದ್ಯೋಗದಲ್ಲಿ ಪ್ರತಿಭೆ, ಅರ್ಹತೆಗೆ ಗೌರವ ಲಭಿಸಿದ ಸಮಾಧಾನ. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಯಶಸ್ವಿ. ಉದ್ಯಮಿಗಳಿಗೆ ಯಶಸ್ಸು ಪ್ರಾಪ್ತಿಯಾಗಿ ಹರ್ಷ. ಮನೆಯವರ ಆರೋಗ್ಯ ಉತ್ತಮ.

ಕರ್ಕಾಟಕ: ಕಾರ್ಯಸಾಮರ್ಥ್ಯ ವೃದ್ಧಿಗೆ ವಿಶೇಷ ಪ್ರಯತ್ನ.ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ಉದ್ಯಮ ಸಂಸ್ಥೆಯಲ್ಲಿ ಒಡೆಯರು- ನೌಕರರ ನಡುವೆ ಸಾಮರಸ್ಯ ವೃದ್ಧಿ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯದ ಭರವಸೆ. ಬಂಧುಗಳ ಆಗಮನ.

ಸಿಂಹ: ಸಪ್ತಾಹವಿಡೀ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯ ಸಕಾಲದಲ್ಲಿ ಮುಕ್ತಾಯ. ಸರಕಾರಿ ನೌಕರರಿಗೆ ಸಮಾಧಾನದ ಅನುಭವ. ಸೊÌàದ್ಯೋಗಿ ಮಹಿಳೆಯರಿಗೆ ಆನಂದಾನುಭವ. ಮನೆಯಲ್ಲಿ ದೇವತಾ ಕಾರ್ಯ.

Advertisement

ಕನ್ಯಾ: ಸಕಾಲದಲ್ಲಿ ಕಾರ್ಯ ಪೂರೈಸಿದ ಸಮಾಧಾನ. ಉದ್ಯೋಗದಲ್ಲಿ ಶಿಸ್ತು, ಸಮಯ ಪಾಲನೆಗೆ ಆದ್ಯತೆ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸ. ಬಂಧುಗಳ ಮನೆಯಲ್ಲಿ ಶುಭ ಕಾರ್ಯದ ಸಿದ್ಧತೆ. ಮನೆಯ ವಾಸ್ತು ಸುಧಾರಣೆಗೆ ಕಾಮಗಾರಿ ಆರಂಭ.

ತುಲಾ: ವಾರದ ಕೊನೆಯಲ್ಲಿ ಸ್ಥಳಾಂತರ ಯೋಗ. ಉದ್ಯೋಗಕ್ಕೆ ವಿರಾಮ ತೆಗೆದುಕೊಳ್ಳುವ ಸಾಧ್ಯತೆ. ಹುಟ್ಟು ಬೋಧಕರಾಗಿರುವ ನಿಮಗೆ ಹೊಸಬರಿಗೆ ಮಾರ್ಗ ದರ್ಶನ ಮಾಡುವ ಅವಕಾಶ ಪ್ರಾಪ್ತಿ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿಯ ದಿನ. ಉದ್ಯಮದಲ್ಲಿ ಸಾಧಿಸಿದ ಯಶಸ್ಸಿಗೆ ಪುರಸ್ಕಾರ. ಲೇವಾದೇವಿ ವ್ಯವಹಾರದಿಂದ ದೂರವಿರಿ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಒಳ್ಳೆಯದು. ಸಂಗೀತ ಶ್ರವಣಕ್ಕೆ ಸಮಯ ಹೊಂದಾಣಿಕೆ.

ಧನು: ಸತತ ಪರಿಶ್ರಮದ ನಡೆಯಿಂದ ಜೀವನಕ್ಕೆ ಭದ್ರತೆ ಪ್ರಾಪ್ತಿ. ಉದ್ಯೋಗಕ್ಕೆ ಸಂಬಂಧಪಟ್ಟಂತೆ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಪಾಲುದಾರಿಕೆ ಉದ್ಯಮ ಆರಂಭ ವಿಳಂಬ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ.

ಮಕರ: ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಯಥಾಪ್ರಕಾರ ಒತ್ತಡ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ತರಾತುರಿ. ದೇವತಾ ಕಾರ್ಯಕ್ಕೆ ಸಿದ್ಧತೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ.

ಕುಂಭ: ಕಿರಿಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹದ ಮಾತುಗಳಿಂದ ಕೆಲಸಕ್ಕೆ ಉತ್ತೇಜನ. ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ.ಯಂತ್ರೋಪಕರಣಗಳ ಖರೀದಿ ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಸಂಸಾರದಲ್ಲಿ ಎಲ್ಲರ ನಡುವೆ ಸಾಮರಸ್ಯ ವೃದ್ಧಿ.

ಮೀನ: ಸಪ್ತಾಹ ಅಂತ್ಯದೊಳಗೆ ನಿಯೋಜಿತ ಕಾರ್ಯಗಳು ಮುಕ್ತಾಯ. ಉದ್ಯೋಗದ ವ್ಯಾಪ್ತಿ ವಿಸ್ತರಣೆಯ ಸೂಚನೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಸಿದ್ಧತೆ. ಹಿರಿಯರ ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next