Advertisement

Daily Horoscope: ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ ಮಗ್ನರಾಗಿರಿ, ಆರೋಗ್ಯ ಉತ್ತಮ

07:11 AM Aug 16, 2023 | Team Udayavani |

ಮೇಷ: ಎಣಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಅತಿಥಿ ಸತ್ಕಾರ ಯೋಗ. ಸಂಗಾತಿಯ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು. ದೇವತಾ ಸ್ಥಳಕ್ಕೆ ಭೇಟಿ. ಶುಭ ದಿನ. ಏಕಾಗ್ರತೆ ಯಿಂದ ಕಾರ್ಯಸಿದ್ಧಿ. ಹತ್ತಿರದ ಕ್ಷೇತ್ರ ದರ್ಶನದಿಂದ ಶುಭ.

Advertisement

ವೃಷಭ: ಅನಿರೀಕ್ಷಿತ ಶುಭವಾರ್ತೆ. ಪೂರ್ವ ದಿಕ್ಕಿನತ್ತ ಪಯಣ. ಆರೋಗ್ಯ ಗಮನಿಸಿ. ಹಿರಿಯರ ಪ್ರಾರ್ಥನೆ ಫಲಿಸಿ ಶುಭಕಾರ್ಯ ಸನ್ನಿಹಿತ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಪಾಲುಗಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ಮಿಥುನ: ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ ಮಗ್ನರಾಗಿರಿ.ಆರೋಗ್ಯ ಉತ್ತಮ. ಲೇಖಕರಿಗೆ, ಅಧ್ಯಯನಾಸಕ್ತರಿಗೆ ಅನುಕೂಲದ ವಾತಾವರಣ. ದಂಪತಿಗಳ ನಡುವೆ ವಿರಸ ಮುಕ್ತಾಯ. ಮಕ್ಕಳಿಂದ ಸಂತೋಷ.

ಕರ್ಕ: ಹಳೆಯ ಬಂಧುಮಿತ್ರರ ಭೇಟಿ. ಕಳೆದು ಹೋಗಿದ್ದ ವಸ್ತು ಮರಳಿ ಕೈಸೇರುವ ಸಾಧ್ಯತೆ. ದೈವ ಚಿಂತನೆಯಿಂದ ಕಷ್ಟ ದೂರ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ಉದ್ಯಮದ ಕುರಿತು ಚಿಂತನೆಗೆ ಸಕಾಲ.

ಸಿಂಹ: ಹೆಸರಿಗೆ ತಕ್ಕಂತೆ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಚಿತ. ವಿರೋಧಿಗಳ ಯತ್ನಕ್ಕೆ ಸೋಲು. ಮನೆಯಲ್ಲಿ ಸಂತಸದ ವಾತಾವರಣ. ಕಷ್ಯುತ್ಪನ್ನಗಳಿಂದ ಲಾಭ ತೃಪ್ತಿಕರ. ದೇಹಾರೋಗ್ಯ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ.

Advertisement

ಕನ್ಯಾ: ವ್ಯವಹಾರದಲ್ಲಿ ಅಲ್ಪ ಲಾಭ. ದೂರದಿಂದ ಶುಭವಾರ್ತೆ. ಗೃಹಾಲಂಕಾರಕ್ಕೆ ಖರ್ಚು. ಹಿರಿಯರ ಆರೋಗ್ಯ ಸುಧಾರಣೆ.ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವ ಸಾಧ್ಯತೆ ಸಂಶಯ ಪ್ರವೃತ್ತಿಯಿಂದ ಕಾರ್ಯದಲ್ಲಿ ಹಿನ್ನಡೆ. ಸಂಗಾತಿಯ ಸಂತುಷ್ಟಿಯಿಂದ ಗಮನವಿರಲಿ.

ತುಲಾ: ತಕ್ಕಡಿಯಂತೆ ಏರುಪೇರಾಗಿ ತೂಗುವ ಮನಸ್ಸು. ದೈವಾನುಗ್ರಹ ಉತ್ತಮ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ಆರೋಗ್ಯಸೂತ್ರಗಳನ್ನು ಪಾಲಿಸಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಧಾರದಲ್ಲಿ ಸ್ಥಿರವಾಗಿರುವುದರಿಂದ ಯಶಸ್ಸು.

ವೃಶ್ಚಿಕ: ತಪ್ಪು ಮಾಡಿದವರನ್ನು ಚುಚ್ಚುಮಾತುಗಳಿಂದ ನೋಯಿಸದಿರಿ. ಸಾಲ ನೀಡುವಾಗ ಎಚ್ಚರ. ಬಂಧುವರ್ಗದಿಂದ ಶುಭವಾರ್ತೆ. ಮಕ್ಕಳ ಅಧ್ಯಯನದಲ್ಲಿ ಸುಧಾರಣೆ. ಹಿರಿಯರಿಗೆ ಸಂತೋಷ.

ಧನು: ಬಿಲ್ಲಿನಂತೆ ಬಾಗಿದರೂ ಸ್ವಾಭಿಮಾನ ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಣಕಾಸು ಮುಗ್ಗಟ್ಟು ಮುಕ್ತಾಯ. ಹಳೆಯ ಪರಿಚಿತರಿಂದ ಸಹಾಯ.ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ .ದೂರದಿಂದ ಶುಭವಾರ್ತೆ.

ಮಕರ: ಎಟುಕದ ವಸ್ತುವಿಗಾಗಿ ಆಶೆ ಬೇಡ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ತೃಪ್ತಿಕರ. ಹೊಸ ಹೂಡಿಕೆಯ ಚಿಂತನೆ. ನೂತನ ಗೃಹ ನಿರ್ಮಾಣ ಯೋಜನೆ. ಅಪರೂಪದ ವ್ಯಕ್ತಿಯ ಭೇಟಿಯಿಂದ ಲಾಭ. ಸಂತೋಷವನ್ನು ಹಂಚಿಕೊಂಡರೆ ಅನ್ಯರ ಪ್ರೀತಿ.

ಕುಂಭ: ಆಸ್ತಿ ರಕ್ಷಣೆ, ವಿಸ್ತರಣೆಗೆ ಹೊಸ ಯೋಜನೆ. ಹಿರಿಯರ ಆರೋಗ್ಯಕ್ಕಾಗಿ ಖರ್ಚು. ಗೃಹೋಪಯೋಗಿ ವಸ್ತುಗಳ ಖರೀದಿ. ಸಂಸಾರ ಜೀವನದಲ್ಲಿ ತೃಪ್ತಿ.ಮಕ್ಕಳ ಸಾಧನೆಯಿಂದ ಆನಂದ ಧನ ಸಂಚಯದಿಂದ ಹರ್ಷ. ಕ್ಷೇಮ.

ಮೀನ: ಫಲಿತಾಶಕ್ಕಾಗಿ ಚಡಪಡಿಕೆ ಸಲ್ಲದು. ಸರ್ವತ್ರ ಯಶಸ್ಸು. ದೇವಾರಾಧನೆಯಿಂದ ಮನಸ್ಸಿಗೆ ನೆಮ್ಮದಿ. ಸಂಸಾರದಲ್ಲಿ ತೃಪ್ತಿ. ಅವಿವಾಹಿತರಿಗೆ ಶುಭವಾರ್ತೆ. ಉದ್ಯೋಗ ಬದಲಾವಣೆಗೆ ಚಿಂತನೆ.ಪಾಲುಗಾರಿಕೆ ವ್ಯವಹಾರದಲ್ಲಿ ಲಾಭ. ದೀರ್ಘ‌ಕಾಲದ ಸಮಸ್ಯೆಗೆ ಪರಿಹಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಪ್ರಗತಿ. ದೇವತಾ ಸ್ಥಳ ಸಂದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next