Advertisement

Daily Horoscope: ಆರೋಗ್ಯ ಉತ್ತಮ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ

07:32 AM Aug 10, 2024 | Team Udayavani |

ಮೇಷ: ಏಳೂವರೆ ಶನಿಯ ಪ್ರಭಾವ ಕಾಣದಿರದು. ಆದರೂ ಉದ್ಯೋಗದಲ್ಲಿ ಗೌರವಕ್ಕೆ ಚ್ಯುತಿ ಇಲ್ಲ. ಸರಕಾರಿ ನೌಕರರಿಗೆ ನಿಶ್ಚಿಂತೆಯ ವಾತಾವರಣ. ಮಹಿಳೆಯರ ನೇತೃತ್ವದ ಗೃಹೋದ್ಯಮಗಳಿಗೆ ಶುಭಕಾಲ. ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ.

Advertisement

ವೃಷಭ: ಶಿಸ್ತುಬದ್ಧ ನಡೆಯಿಂದ ಯಶಸ್ಸು ಶತಃ ಸಿದ್ಧ. ಸರಕಾರಿ ಅಧಿಕಾರಿಗಳಿಗೆ ಬಯಸಿದ ಸ್ಥಾನಕ್ಕೆ. ವರ್ಗಾವಣೆ. ಕೃಷಿಕ್ಷೇತ್ರದಲ್ಲಿ ಬೆಳೆ ಪರಿಸ್ಥಿತಿ ಸುಧಾರಣೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದಂಪತಿಗಳ ನಡುವೆ ಅನುರಾಗ ವೃದ್ಧಿ.

ಮಿಥುನ: ಈ ರಾಶಿಯ ಎಲ್ಲರಿಗೂ ದೈಹಿಕ ಆರೋಗ್ಯ ಉತ್ತಮ. ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ಸರಕಾರಿ ನೌಕರರಿಗೆ ಅನುಕೂಲ ಸ್ಥಳಕ್ಕೆ ವರ್ಗಾವಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ. ಉದ್ಯೋಗ ಅರಸುವವರಿಗೆ ಅವಕಾಶ ಗೋಚರ.

ಕರ್ಕಾಟಕ: ಕುಗ್ಗದ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯರಂಗ ಪ್ರವೇಶ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆಯಿಂದ ಲಾಭ. ಮಕ್ಕಳ ಅನುಕೂಲಕ್ಕೋಸ್ಕರ ವೆಚ್ಚ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ. ವಿದೇಶದಿಂದ ಶುಭ ಸಮಾಚಾರ.

ಸಿಂಹ: ಪುನರಾರಂಭವಾದ ಅಭಿವೃದ್ಧಿ ಕಾರ್ಯ ಗಳ ವೀಕ್ಷಣೆ. ಸ್ವಂತ ಉದ್ಯಮದ ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ. ಉದ್ಯೋಗಸ್ಥರಿಗೆ ಆಯಕಟ್ಟಿನ ಸ್ಥಾನದಲ್ಲಿ ಜವಾಬ್ದಾರಿ. ಯಂತ್ರಗಳ ಬಿಡಿಭಾಗ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯಾಪಾರ ವೃದ್ಧಿ.

Advertisement

ಕನ್ಯಾ: ಎದುರಾದ ತೊಂದರೆಗಳನ್ನು ಬದಿಗೆ ಸರಿಸಿ ಸಾಗುವ ಛಾತಿ. ನಿತ್ಯದ ಕೆಲಸಗಳೊಂದಿಗೆ ಅನ್ಯ ವಿಭಾಗಗಳ ಹೊಣೆಗಾರಿಕೆ. ಸ್ವಂತ ವ್ಯವಹಾರದ ಪ್ರಗತಿ ಅಬಾಧಿತ. ವ್ಯವಹಾರದ ಸಂಬಂಧ ಸ್ವಲ್ಪ ದೂರಕ್ಕೆ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮ ನೋಡಿ.

ತುಲಾ: ಅಸಾಧ್ಯವೆಂದುಕೊಂಡದ್ದು ಸಾಧ್ಯವಾದ ಅನುಭವ. ಉದ್ಯೋಗ ಸ್ಥಾನದಲ್ಲಿ ಕೊಂಚ ಏರುಪೇರು ಸಂಭವ. ಹಿರಿಯರ ಕ್ಷೇಮ ಸಮಾಚಾರ ತಿಳಿದು ಸಮಾಧಾನ. ಬಾಲ್ಯದ ಒಡನಾಡಿಯೊಂದಿಗೆ ಹತ್ತಿರದ ದೇವಾಲಯ ಸಂದರ್ಶನ.

ವೃಶ್ಚಿಕ: ಅನಿರೀಕ್ಷಿತವಾಗಿ ನಡೆದ ಒಳ್ಳೆಯ ಘಟನೆಗಳು. ಉದ್ಯೋಗ ಸ್ಥಾನದಲ್ಲಿ ಮೇಲಿನವ ರಿಂದ ಪ್ರಶಂಸೆ . ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ.

ಧನು: ಕ್ರಿಯಾಶೀಲತೆಯಿಂದಾಗಿ ಸಣ್ಣಪುಟ್ಟ ಹಿನ್ನಡೆಗಳು ಕಂಗೆಡಿಸವು. ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ. ಸಮಾಜೋದ್ಧಾರ, ಪರಿಸರ ರಕ್ಷಣೆಯ ಕಾರ್ಯಗಳಲ್ಲಿ ಆಸಕ್ತಿ. ಕೃಷಿ ಸಂಬಂಧಿ ಉದ್ಯಮ ಪ್ರಗತಿ .ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಳ.

ಮಕರ: ಬೆಂಬಿಡದ ಹಿತಶತ್ರುಗಳ ಬಾಧೆ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಆಪ್ತ ಸಲಹೆಯಿಂದ ವ್ಯಕ್ತಿತ್ವ ಬೆಳವಣಿಗೆಗೆ ಸಾಧನೆ. ತಂದೆಯ ಕಡೆಯ ಬಂಧುಗಳಿಂದ ಶುಭ ಸಮಾಚಾರ.

ಕುಂಭ: ಕೆಲಸದÇÉೇ ಆನಂದ ತರುವ ನಿರಂತರ ಕ್ರಿಯಾಶೀಲತೆ. ದಿನಕ್ಕೊಂದರಂತೆ ಹೊಸ ಹೊಣೆಗಾರಿಕೆಗಳು.ಸ್ವಂತ ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ. ಗೃಹಿಣಿಯರ ಸೊÌàದ್ಯೋಗ ಯೋಜನೆಗಳು ಯಶಸ್ವಿ.

ಮೀನ: ಸರ್ವತೋಮುಖ ಪ್ರಗತಿಯ ವೇಗ ವರ್ಧನೆ. ವೃತ್ತಿಬಾಂಧವರ ಸಕ್ರಿಯ ಸಹಕಾರ. ಸರಕಾರಿ ನೌಕರರ ಸಕಾಲಿಕ ಸ್ಪಂದನದಿಂದ ಸುಲಭವಾದ ಕೆಲಸಗಳು. ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ. ದಾಂಪತ್ಯ ಜೀವನ ಸುಖಮಯ.

Advertisement

Udayavani is now on Telegram. Click here to join our channel and stay updated with the latest news.

Next