Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

07:30 AM Jan 11, 2022 | Team Udayavani |

ಮೇಷ:

Advertisement

ಆರೋಗ್ಯ ಉತ್ತಮ. ಸುಖಮಯ ಅಸ್ತಿತ್ವ. ಶಾರೀರಿಕ ಬಲ. ವರ್ಚಸ್ಸು ವೃದ್ಧಿ . ಜನಪದರಿಂದ ಗೌರವ ಆದರಾದಿ ಸುಖ. ಅನಿರೀಕ್ಷಿತ ಧನಾಗಮ. ಉತ್ತಮ ವಾಕ್‌ಚತುರತೆ. ಸರ್ವ ವರ್ಗದವರಿಂದಲೂ ಸಹಾಯ ಸಹಕಾರ ಪ್ರಾಪ್ತಿ.

ವೃಷಭ:

ಎಲ್ಲರಿಂದಲೂ ಮಾನ್ಯತೆ. ಆರ್ಥಿಕ ಅಧಿಕ ಧನಸಂಪತ್ತು ವೃದ್ಧಿ. ವಿದ್ಯಾರ್ಜನೆ ಯಲ್ಲಿ ಆಸಕ್ತಿ. ಆಚಾರ ವಿಚಾರದಲ್ಲಿ ಸ್ಪಷ್ಟತೆಯ ವರ್ತನೆ. ಸರ್ವ ಕಾರ್ಯಗಳಲ್ಲಿ ಸಫ‌ಲತೆ. ಗೃಹದಲ್ಲಿ ಸಂತಸದ ವಾತಾವರಣ.

ಮಿಥುನ:

Advertisement

ಸುಪುಷ್ಟತೆಯಿಂದ ಕೂಡಿದ ಶಾರೀರಿಕ ಮಾನಸಿಕ ಸ್ಥಿತಿ. ವಿದ್ಯಾರ್ಜನೆಯಲ್ಲಿ ಯಶಸ್ಸು ಲಭಿಸಿದ ತೃಪ್ತಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಜಯ. ಹಿರಿಯರ ಆರೋಗ್ಯ ಗಮನಿಸಿ.

ಕಟಕ:

ಗೃಹದಲ್ಲಿ ಸಂಭ್ರಮದ ವಾತಾವರಣ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ. ದೂರದ ಬಂಧುಮಿತ್ರರ ಭೇಟಿ. ಉದ್ಯೋಗ ದೂರದ ವ್ಯವಹಾರಗಳಲ್ಲಿ ಮುನ್ನಡೆ. ಹಿರಿಯರಿಂದ ಸುಖ ಸರಕಾರಿ ಕಾರ್ಯಗಳಲ್ಲಿ ಪ್ರಗತಿ.

ಸಿಂಹ:

ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ತಾಳ್ಮೆ ಸಹನೆ ಅಗತ್ಯ. ಆಳವಾದ ಜ್ಞಾನ ಸಂಪಾದನೆಯಲ್ಲಿ ಅಭಿರುಚಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ಪ್ರಗತಿ.

ಕನ್ಯಾ:

ಗುರುಹಿರಿಯರ ಸಂಪೂರ್ಣ ಪ್ರೀತಿ ಸಹಕಾರ ಲಭ್ಯ. ಸರಕಾರಿ ಕೆಲಸಗಳಲ್ಲಿ ಯಶಸ್ಸು .ಕೀರ್ತಿ ಸಂಪಾದನೆ. ಜನಮನ್ನಣೆ. ದಾಂಪತ್ಯದಲ್ಲಿ ಹೆಚ್ಚಿದ ಅನುರಾಗ. ಸ್ವಸಾಮರ್ಥ್ಯದಿಂದ ನಿರೀಕ್ಷೆಗೂ ಮೀರಿದ ಧನಸಂಪತ್ತು ಪ್ರಾಪ್ತಿ.

ತುಲಾ:

ಆರೋಗ್ಯ ವೃದ್ಧಿ. ಮನೋರಂಜನೆ ಯಿಂದ ಕೂಡಿದ ದಿನ. ಅನಿರೀಕ್ಷಿತ ಧನಾಗಮನ ಹೆಚ್ಚಿದ ಲಾಭ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದ ಮುನ್ನಡೆ.

ವೃಶ್ಚಿಕ:

ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಸರಕಾರಿ ಉದ್ಯೋಗಗಳಲ್ಲಿ ಸಫ‌ಲತೆ. ದೂರದ ವ್ಯವಹಾರಗಳಲ್ಲಿ ನಿರೀಕ್ಷಿತ ಧನಲಾಭ. ಮಿತ್ರರ ಸಹಾಯ. ಗುರುಹಿರಿಯರ ಪ್ರೋತ್ಸಾಹ ಆಶೀರ್ವಾದ. ವಿದ್ಯಾರ್ಥಿಗಳಿಗೆ ಪ್ರಯಾಣ ಸಂಭವ.

ಧನು:
ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದೇ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧನೆ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲಿ ದುಡುಕು ನಿರ್ಧಾರ ಮಾಡದಿರಿ.
ಮಕರ:
ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಗೌರವ ಆದರಾದಿ ಸುಖ. ಅಧಿಕ ಧನಾರ್ಜನೆ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಚರ್ಚೆಗೆ ಅವಕಾಶ ನೀಡದಿರಿ.
ಕುಂಭ:
ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ. ದೂರದ ವ್ಯವಹಾರಗಳಿಂದ ಧನ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಸಹಕಾರ. ನಿರೀಕ್ಷಿತ ಗುರಿ ಸಾಧನೆ. ಮನೆಯಲ್ಲಿ ಸಂತಸದ ವಾತಾವರಣ.
ಮೀನ:
ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಗೃಹ ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಶ್ರೇಯಸ್ಸು. ಧನಾರ್ಜನೆಗೆ ಕೊರತೆಯಾಗದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ.
Advertisement

Udayavani is now on Telegram. Click here to join our channel and stay updated with the latest news.

Next