Advertisement

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

07:17 AM Apr 19, 2024 | Team Udayavani |

ಮೇಷ: ಉದ್ಯೋಗಸ್ಥರ ಕೆಲವು ನಿರೀಕ್ಷೆಗಳು ಈಡೇರುವ ಸೂಚನೆ. ಉದ್ಯಮಿಗಳಿಂದ ಇನ್ನಷ್ಟು ಅವಕಾಶಗಳಿಗಾಗಿ ಶೋಧನೆ. ದೀರ್ಘ‌ಕಾಲದ ವ್ಯಾವಹಾರಿಕ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ನಿವಾರಣೆ.

Advertisement

ವೃಷಭ: ಗುರು ಸಮಾನರ ಅಕಸ್ಮಾತ್‌ ಭೇಟಿ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸಹಜ ಸ್ಪರ್ಧೆ ಉತ್ಪನ್ನಗಳ ಗುಣಮಟ್ಟದ ಕಡೆಗೆ ಗಮನ ವಿರಲಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಸಂಸಾರದ ಭವಿಷ್ಯಕ್ಕೆ ಕ್ಷೇಮ.

ಮಿಥುನ: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ. ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ. ಕುಟುಂಬದ ಮನೆಯಲ್ಲಿ ಶುಭ ಕಾರ್ಯ. ವಾಹನ ದುರಸ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.

ಕರ್ಕಾಟಕ: ಉದ್ಯೋಗದಲ್ಲಿ ತೃಪ್ತಿಯ ದಿನ. ವ್ಯವಹಾರ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿನಿಂದ ಸಮಾಜದಲ್ಲಿ ಗೌರವ. ದಾಂಪತ್ಯ ಜೀವನದಲ್ಲಿ ಸಂತೃಪ್ತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟದ ಪಾಲೇ ದೊಡ್ಡದು.

ಸಿಂಹ: ತತ್‌ಕ್ಷಣ ಸ್ಪಂದಿಸುವ ಗುಣಕ್ಕೆ ಎಲ್ಲರ ಮೆಚ್ಚುಗೆ. ಉದ್ಯಮದಲ್ಲಿ ಇನ್ನಷ್ಟು ಅವಕಾಶಗಳ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ ಸಂಭವ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಂದ ಲಾಭ.

Advertisement

ಕನ್ಯಾ: ಆವಶ್ಯಕತೆಗೆ ಸರಿಯಾಗಿ ಧನಾಗಮ. ಸಣ್ಣ ಉದ್ಯಮ ಆರಂಭಕ್ಕೆ ವಿಘ್ನ. ದೂರದಿಂದ ಶುಭವಾರ್ತೆ. ಲಘುಪಾನೀಯಾದಿ ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ.

ತುಲಾ: ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಉದ್ಯೋಗ ಸ್ಥಾನದಲ್ಲಿ ಹೊಸ ಬಗೆಯ ಅವಕಾಶಗಳ ಸಾಧ್ಯತೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಆದಾಯ ವೃದ್ಧಿ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗುರುಹಿರಿಯರ ಸಕಾಲಿಕ ಮಾರ್ಗದರ್ಶನ ಲಭ್ಯ.

ವೃಶ್ಚಿಕ: ಸತ್ಕಾರ್ಯಗಳಿಗೆ ಸೂಕ್ತ ಪ್ರತಿಫ‌ಲ. ಉದ್ಯೋಗದಲ್ಲಿ ಪದೋನ್ನತಿ. ಉದ್ಯಮ ಕ್ಷೇತ್ರದಲ್ಲಿ ಜಯಭೇರಿ. ಹಿರಿಯರಿಗೆ ಉತ್ತಮ ದೇಹಾರೋಗ್ಯ. ವ್ಯವಹಾರದ ಸಂಬಂಧ ದಕ್ಷಿಣ ದಿಕ್ಕಿಗೆ ಪಯಣ ಸಂಭವ.

ಧನು:ಅಂತರ್ವಾಣಿಯ ಮಾರ್ಗದರ್ಶನ ದಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿ ಗಳಿಗೆ ಮತ್ತು ಸ್ವರ್ಣೋದ್ಯಮಿಗಳಿಗೆ ಅಮಿತ ಲಾಭ. ಉದ್ಯೋಗಸ್ಥರಿಗೆ ಮಂದಗತಿಯಲ್ಲಿ ಮುನ್ನಡೆ. ನಿವೃತ್ತ ವೃತ್ತಿಪರರಿಗೆ ಹೊಸ ಅವಕಾಶ.

ಮಕರ: ಕೋಪ ವಿಜೃಂಭಿಸದಂತೆ ಎಚ್ಚರ ವಿರಲಿ. ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ದೈನಂದಿನ ವ್ಯವಹಾರದಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಧ್ಯಾನ, ದೇವತಾರ್ಚನೆಯಿಂದ ನೆಮ್ಮದಿ.

ಕುಂಭ: ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಮುದ್ರಣ ಸಾಮಗ್ರಿ, ಸ್ಟೇಶನರಿ, ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ಸಮಯ. ಹಿರಿಯರಿಗೆ, ಮಕ್ಕಳಿಗೆ ಸಂತಸ. ಸಮಾಜ ಸೇವೆಯಲ್ಲಿ ಆಸಕ್ತಿ.

ಮೀನ: ಉದ್ಯೋಗದ ಸಂಬಂಧ ದೂರದ ಸ್ಥಳಕ್ಕೆ ಭೇಟಿ ಸಂಭವ. ಇಲಾಖೆಗಳಿಂದ ಉತ್ತಮ ಸ್ಪಂದನ. ಹೊಸ ಕಾರ್ಯಾರಂಭಕ್ಕೆ ತಾತ್ಕಾಲಿಕ ವಿಘ್ನ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಗ್ರಾಮೋದ್ಯೋಗಗಳಿಗೆ ಪೋ›ತ್ಸಾಹ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ.

Advertisement

Udayavani is now on Telegram. Click here to join our channel and stay updated with the latest news.

Next