Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು.

07:40 AM Feb 27, 2021 | Team Udayavani |

27-02-2021

Advertisement

ಮೇಷ: ವೃತ್ತಿರಂಗದಲ್ಲಿ ಆಗಾಗ ಭಿನ್ನಾಭಿಪ್ರಾಯಗಳು ಕಂಡುಬಂದಾವು. ತಾಳ್ಮೆ ಸಂಯಮದಿಂದ ಬಗೆಹರಿಸಿ ಕೊಳ್ಳಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬಂದೀತು.

ವೃಷಭ: ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಶುಭ ಮಂಗಲ ಕಾರ್ಯಗಳಿಂದ ಮನಸ್ಸಿಗೆ ಶಾಂತಿ, ಸಮಾಧಾನವು ದೊರಕಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲವು ದೊರಕಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳೇ ಹೆಚ್ಚಾಗಿರುತ್ತವೆ.

ಮಿಥುನ: ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿರಿ. ವೃತ್ತಿರಂಗದಲ್ಲಿ ಒತ್ತಡಗಳಿಂದ ಸಮಾಧಾನವು ಸಿಗಲಾರದು. ಶುಭ ಮಂಗಲ ಕಾರ್ಯಗಳ ಚಿಂತನೆ ಮುಂದೂಡಲಿವೆ. ದೈಹಿಕವಾಗಿ ಹೆಚ್ಚಿನ ಗಮನಹರಿಸಿರಿ. ದಿನಾಂತ್ಯ ಅತಿಥಿಗಳು ಬಂದಾರು.

ಕರ್ಕ: ದೇವತಾನುಗ್ರಹದಿಂದ ನಿರೀಕ್ಷಿತ ಕಾರ್ಯಸಾಧನೆಯಾದೀತು. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫ‌ಲವನ್ನು ಪಡೆಯಲಿದ್ದಾರೆ. ಕಾರ್ಮಿಕ ವರ್ಗದವರಿಗೆ ಉತ್ತಮ ಫ‌ಲವಿದೆ. ವಾಹನ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಶುಭವಿದೆ.

Advertisement

ಸಿಂಹ: ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಲಿವೆ. ಜಾಗ ಯಾ ನಿವೇಶನ ಖರೀದಿಗೆ ಈಗ ಉತ್ತಮ ಕಾಲವಾಗಿದೆ. ಆರ್ಥಿಕವಾಗಿ ಎಷ್ಟು ದುಡಿದರೂ ಸಾಲದೆಂಬಂತಿರುತ್ತದೆ.

ಕನ್ಯಾ: ಉದ್ಯೋಗಸ್ಥರಿಗೆ ಅಡೆತಡೆಗಳು ಕಂಡುಬಂದಾವು. ಸಾಂಸಾರಿಕವಾಗಿ ನೆಮ್ಮದಿಯ ಜೀವನವಿರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಮುಂಭಡ್ತಿ ಯೋಗವಿದೆ. ಕೋರ್ಟುಕಚೇರಿಯ ಕಾರ್ಯಭಾಗದಲ್ಲಿ ಹಿನ್ನಡೆ ಕಂಡುಬರಲಿದೆ.

ತುಲಾ: ಈಗ ನಿಮಗೆ ಮಿಶ್ರಫ‌ಲದಾಯಕ ವಾತಾವರಣ. ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ದೈಹಿಕ ವಾಗಿ ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ಅಶುಭ.

ವೃಶ್ಚಿಕ: ಅಡೆತಡೆಗಳಿಂದ ಕಾರ್ಯಸಾಧನೆಯಾಗಲಿದೆ. ಮನೆಯ ವಾತಾವರಣ, ಸಾಂಸಾರಿಕ ಜೀವನ ಉತ್ತಮವಿರುತ್ತದೆ. ಕೂಲಿ ಕಾರ್ಮಿಕರಿಗೆ ಉತ್ತಮ ಆದಾಯವಿರುತ್ತದೆ. ರೈತ ವರ್ಗದವರಿಗೂ ಉತ್ತಮ ಫ‌ಲ ದೊರಕೀತು.

ಧನು: ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಆದರೂ ಹಿರಿಯ ಅಧಿಕಾರಿಗಳ ಕಿರಿಕಿರಿ ಮನಸ್ಸನ್ನು ನೋಯಿಸಲಿದೆ. ವಿದ್ಯಾರ್ಥಿಗಳು ವಿದ್ಯಾಸಂಪನ್ನರಾದಾರು. ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ದೂರ ಸಂಚಾರವಿದೆ.

ಮಕರ: ಅನಿರೀಕ್ಷಿತವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಯಶಸ್ಸು ಪಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕಾದೀತು. ಕಿರು ಸಂಚಾರವಿದೆ.

ಕುಂಭ:ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ಆಗಲಾರದು. ಸಾಂಸಾರಿಕ ಜೀವನವು ಅಸ್ತವ್ಯಸ್ತ ವಾದೀತು. ಕ್ರೀಡಾಗಾರರಿಗೆ ಯಶಸ್ಸು ಕಂಡುಬರಲಿದೆ. ದೂರ ಸಂಚಾರದಲ್ಲಿ ಆರೋಗ್ಯ ಕೆಡಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ.

ಮೀನ: ಆಗಾಗ ಅಡೆತಡೆಗಳಿಗೆ ನಿಮ್ಮ ಉದಾಸೀನವೇ ಕಾರಣವಾಗಲಿದೆ. ಬಂದ ಅವಕಾಶವನ್ನು ಪಡೆದು ಕೊಳ್ಳಿರಿ. ಅನಿರೀಕ್ಷಿತ ದೂರ ಸಂಚಾರದ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಹೊಂದಲಿದ್ದಾರೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next