Advertisement

ಇಂದಿನ ಗ್ರಹಬಲ: ಈ ರಾಶಿಯ ವೃತ್ತಿರಂಗದಲ್ಲಿ ಹೊಸ ಹೊಸ ಅವಕಾಶಗಳು ತೋರಿ ಬರಲಿದೆ

07:44 AM Feb 25, 2021 | Team Udayavani |

25-02-2021

Advertisement

ಮೇಷ: ವೃತ್ತಿರಂಗದಲ್ಲಿ ಸಮಾಧಾನವು ಇರಲಾರದು. ದೈಹಿಕವಾಗಿ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಆರ್ಥಿಕವಾಗಿ ಏರುಪೇರು ಕಂಡುಬಂದೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನದ ಅವಶ್ಯಕತೆ ಕಂಡುಬರಲಿದೆ.

ವೃಷಭ: ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿಯು ಕಂಡುಬರಲಿದೆ. ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ನೆರವೇರಲಿದೆ. ಶ್ರೀ ದೇವತಾ ಕಾರ್ಯಗಳಿಗಾಗಿ ಖರ್ಚು ಬಂದೀತು. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ.

ಮಿಥುನ: ದೇಹಾರೋಗ್ಯದ ಬಗ್ಗೆ ಗಮನಹರಿಸುವುದು. ವೃತ್ತಿರಂಗದಲ್ಲಿ ನಿರೀಕ್ಷಿತ ಫ‌ಲ ಸಿಗಲಾರದು. ಶುಭಮಂಗಲ ಕಾರ್ಯಗಳಿಗೆ ಅಡೆತಡೆಗಳಿದ್ದರೂ ಕಾರ್ಯಾನುಕೂಲವಾಗಲಿದೆ. ಹೊಸ ವ್ಯಾಪಾರ ವ್ಯವಹಾರಕ್ಕೆ ಕೈಹಾಕದಿರಿ.

ಕರ್ಕ: ಅನಿರೀಕ್ಷಿತ ರೀತಿಯಲ್ಲಿ ಕಾರ್ಯಾನುಕೂಲವಾಗಿ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸಿಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯನ್ನು ತರಲಿದೆ. ವೃತ್ತಿರಂಗದಲ್ಲಿ ಸಮಾಧಾನ ಸಿಗಲಾರದು.

Advertisement

ಸಿಂಹ: ಆಗಾಗ ಅಡೆತಡೆಗಳಿಂದಲೇ ಕಾರ್ಯಾನುಕೂಲವಾಗಲಿದೆ. ಆರ್ಥಿಕವಾಗಿ ಆದಾಯಕ್ಕಿಂತ ಖರ್ಚುವೆಚ್ಚ ಗಳೇ ಅಧಿಕವಾದಾವು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಶುಭಮಂಗಲ ಕಾರ್ಯಕ್ಕೆ ಅನುಕೂಲ.

ಕನ್ಯಾ: ಪಂಚಮದ ಶನಿ ಆಗಾಗ ಖರ್ಚುವೆಚ್ಚಗಳನ್ನು ಅಧಿಕವಾಗಿ ನೀಡಿಯಾನು. ಉದ್ಯೋಗ, ವ್ಯವಹಾರ ಗಳಲ್ಲಿ ಕಿರಿಕಿರಿಯೇ ಹೆಚ್ಚಾಗಿ ಕಂಡುಬಂದೀತು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಗಮನಹರಿಸುವ ಅಗತ್ಯವಿರುತ್ತದೆ.

ತುಲಾ: ದೇಹಾರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಸಂಬಂಧಿಕರು ನಿಮ್ಮ ಸಹಕಾರವನ್ನು ಪಡೆಯಲಿದ್ದಾರೆ. ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಇರುತ್ತದೆ. ವಿದ್ಯಾರ್ಥಿಗಳಿಗೆ ಉದಾಸೀನವೇ ಕಂಡುಬರಲಿದೆ. ದಿನಾಂತ್ಯ ಶುಭವಿದೆ.

ವೃಶ್ಚಿಕ: ಅನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯಲಿವೆ. ವ್ಯಾಪಾರ, ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆದು ಲಾಭವನ್ನು ತರಲಿದೆ. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ದೂರ ಸಂಚಾರದಲ್ಲಿ ಜಾಗ್ರತೆ.

ಧನು: ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯು ಕಂಡುಬರುವುದು. ಕೆಲಸಕಾರ್ಯಗಳಲ್ಲಿ ಒತ್ತಡವು ಹೆಚ್ಚಾಗಲಿದೆ. ದೇಹಾರೋಗ್ಯವು ಉತ್ತಮ ರೀತಿಯಲ್ಲಿ ಇದ್ದರೂ ಜಾಗ್ರತೆ ಅಗತ್ಯವಿದೆ. ವಾಹನ ಸಂಚಾರದಲ್ಲಿ ಖರ್ಚು ತರಲಿದೆ.

ಮಕರ: ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ನಡೆಯಲಿದೆ. ವೃತ್ತಿರಂಗದಲ್ಲಿ ಹೊಸ ಹೊಸ ಅವಕಾಶಗಳು ತೋರಿ ಬರಲಿದೆ. ಪ್ರಯತ್ನಬಲದ ಅಗತ್ಯವಿದೆ. ಸಾಂಸಾರಿಕವಾಗಿ ಸುಖ, ಶಾಂತಿ, ಸಮಾಧಾನವಿದೆ. ತಾಳ್ಮೆ ಅಗತ್ಯವಿದೆ.

ಕುಂಭ: ಆಗಾಗ ಅಡೆತಡೆಗಳು ತೋರಿಬಂದು ಕಾರ್ಯ ಸಾಧನೆಗೆ ಅಡ್ಡಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶವು ದೊರಕಿ ಸಂತಸವಾಗಲಿದೆ.

ಮೀನ: ವ್ಯಾಪಾರ, ವ್ಯವಹಾರಗಳು ಉತ್ತಮ ರೀತಿಯಲ್ಲಿ ಞನಡೆದು ಆದಾಯವನ್ನು ಹೆಚ್ಚಿಸಲಿದೆ. ಸಾಂಸಾರಿಕವಾಗಿ ಸಮಾಧಾನಕರವಲ್ಲದ ವಾತಾವರಣ ಆತಂಕ ವನ್ನು ತರಬಲ್ಲದು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆಯುವರು.

 

ಎನ್‌.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next