Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಬೇಡಿಕೆ ಈಡೇರಿಸುವ ತಾಕಲಾಟದಿಂದ ಕಿರಿಕಿರಿ ತಂದೀತು!

07:12 AM Jun 13, 2021 | Team Udayavani |

13-06-2021

Advertisement

ಮೇಷ: ಅವಿವಾಹಿತರಿಗೆ ಕಂಕಣಭಾಗ್ಯ ಒದಗಿ ಬರಲಿದೆ. ಸಹೋದ್ಯೋಗಿಗಳ ದುರ್ವ್ಯವಹಾರದಿಂದ  ಅಭಿವೃದ್ಧಿಗೆ ಮಾರಕವಾದೀತು. ಎಚ್ಚರಿಕೆ ಇರಲಿ. ಅವಿರತವಾದ ಸಂಚಾರ ದೇಹಾಯಾಸಕ್ಕೆ ಕಾರಣವಾಗಲಿದೆ.

ವೃಷಭ: ಆರ್ಥಿಕವಾಗಿ ನಿಮ್ಮ ಪರಿಸ್ಥಿತಿಯು ಸುಧಾರಿಸಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲಾಗುವುದಿಲ್ಲ . ಹಿರಿಯರ ಮಾತಿಗೆ ಬೆಲೆ ಇರಲಿ. ತಾಳ್ಮೆ, ಎಚ್ಚರಿಕೆಯಿಂದ ಹೊಸ ಕಾರ್ಯದಲ್ಲಿ ಹೆಜ್ಜೆ ಇರಿಸುವುದು ಅಗತ್ಯವಿದೆ.

ಮಿಥುನ: ಸ್ವರ್ಣ, ಲೋಹ, ಗೃಹೋಪಕರಣಗಳ ವ್ಯವಹಾರದಲ್ಲಿ ಚೇತರಿಕೆ. ಹೊಸ ಯೋಜನೆಯ ಯೋಚನೆಯು ಕಾರ್ಯಗತವಾಗಲಿದೆ. ವಿವೇಚನೆಯಿಂದ ಕಾರ್ಯವೆಸಗಿರಿ. ಜಯ ನಿಮ್ಮ ಪಾಲಿಗಿದೆ.

ಕರ್ಕ: ನೂತನ ಧನದಾಯದ ಮೂಲಕ  ಭಾಗ್ಯಾಭಿವೃದ್ಧಿ ತಂದೀತು. ನೂತನ ವಸ್ತ್ರಾಭರಣ ಯಾ ನಿವೇಶನ ಖರೀದಿಯಿಂದ ಸಂತಸ ತಂದೀತು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Advertisement

ಸಿಂಹ: ಈ ವಾರ ಶುಭದಾಯಕ ಹಾಗೂ ಆಶಾದಾಯಕವಾದೀತು. ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ ದೊರೆತು ನೆಮ್ಮದಿ ಕಂಡೀತು. ಕ್ರೀಡಾರಂಗದಲ್ಲಿ ಕ್ರೀಡಾಗಾರರಿಗೆ ವಂಚನೆಯ ಆರೋಪ-ಪ್ರತ್ಯಾರೋಪಗಳು ತೋರಿ ಬಂದಾವು.

ಕನ್ಯಾ: ಕಳೆದುದ್ದನ್ನು ಗಳಿಸುವ ಪ್ರಯತ್ನ ಸಾಗಲಿ. ತೃಪ್ತಿ ಸಿಕ್ಕೀತು. ಮಾತೃಸೇವಾ, ಶೂಶ್ರಷೆಗಾಗಿ ಖರ್ಚು ತರಲಿದೆ. ಆರೋಗ್ಯಭಾಗ್ಯ ಸುಧಾರಿಸಿದರೂ ಉದಾಸೀನ ಮಾಡದಿರಿ. ಸಾಂಸಾರಿಕವಾಗಿ ಹುಸಿ ಅಪವಾದದ ಚಿಂತೆ ಕಾಡಲಿದೆ.

ತುಲಾ: ನೂತನ ವಸ್ತು ಖರೀದಿ ಧನ ಹಾನಿ ಕೊಟ್ಟೀತು. ಸಹೋದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇದ್ದಲ್ಲಿ ಮೂಲಧನ ಇಮ್ಮಡಿಯಾದೀತು. ಆಗಾಗ  ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿರಿ.

ವೃಶ್ಚಿಕ: ಬೇಡಿಕೆ ಈಡೇರಿಸುವ ತಾಕಲಾಟದಿಂದ ಕಿರಿಕಿರಿ ತಂದೀತು. ಕೌಟುಂಬಿಕವಾಗಿ ಆಕ್ಷೇಪ, ಭಿನ್ನಾಭಿಪ್ರಾಯದಿಂದ ಮನೋವ್ಯಾಕುಲ ಹೆಚ್ಚಾದೀತು. ಹಿರಿಯರ ಸಲಹೆಗೆ ಕಿವಿಕೊಡಿರಿ. ಸಮಾಧಾನ ಸಿಗಲಿದೆ.

ಧನು: ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಸ್ಥಾನ ಬದಲಾವಣೆಯ ಸೂಚನೆ ತೋರಿಬಂದೀತು. ವಾರಾಂತ್ಯದಲ್ಲಿ ಶುಭವಾರ್ತೆ ಇರುತ್ತದೆ. ಸಾರ್ಥಕತೆಯಿಂದ ಶತ್ರು ಭಯ ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಬಿಡದು.

ಮಕರ: ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ಆಗಾಗ ವ್ಯಯಾಧಿಕ್ಯವಾಗಿ ವ್ಯಾಪಾರ, ವ್ಯವಹಾರಗಳಲ್ಲಿ ಹೊಸ ಹೂಡಿಕೆಯಿಂದ ಅಲ್ಪಸ್ವಲ್ಪ ಆದಾಯವನ್ನು ತಂದುಕೊಟ್ಟೀತು. ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದೀತು.

ಕುಂಭ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣ ಗೋಚರಕ್ಕೆ ಬರುತ್ತದೆ. ದೂರ ಸಂಚಾರದಲ್ಲಿ ಉತ್ತಮ ಫ‌ಲಗಳು ಅನುಭವಕ್ಕೆ ಬರುತ್ತದೆ. ಉದ್ಯೋಗ ರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದ ಮೂಡಿ ಬರುತ್ತದೆ.

ಮೀನ: ವಿದ್ಯಾರ್ಥಿಗಳು ಮುನ್ನಡೆಯನ್ನು ಸಾಧಿಸಲಿದ್ದಾರೆ. ಹಾಗೆದು ಉದಾಸೀನತೆ ಮಾಡದಿರಿ. ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದೇ ಉತ್ತಮ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next