Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಈ ವಾರಾಂತ್ಯ ಶುಭದಾಯಕವಾಗಿರಲಿದೆ

07:01 AM Jun 12, 2021 | Team Udayavani |

12-06-2021

Advertisement

ಮೇಷ: ರಾಜಕೀಯ ವಲಯದಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ವಿದ್ಯಾರ್ಥಿಗಳ ಅಭ್ಯಾಸಬಲ ಸಫ‌ಲವಾದರೂ ಆಗಾಗ ಉದಾಸೀನತೆ ಕಾಡಲಿದೆ. ಶುಭದ ಆಶಾಕಿರಣ ತೋರಿಬರಲಿದೆ.

ವೃಷಭ: ಎಚ್ಚರಿಕೆಯಿಂದ ಹೆಜ್ಜೆ ಇರಿಸಿದಲ್ಲಿ ಖರ್ಚು- ವೆಚ್ಚವೂ ಸಮತೋಲನದಲ್ಲಿ ಇದ್ದೀತು. ಯಾತ್ರೆ, ಪ್ರವಾಸ, ಧರ್ಮಕಾರ್ಯಗಳು ನಡೆದಾವು. ಅವಿವಾಹಿತರ ನೆಂಟಸ್ತಿಕೆಯ ವಿಚಾರದಲ್ಲಿ ಮಧ್ಯವರ್ತಿಗಳು ನಡೆದಾವು.

ಮಿಥುನ: ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬಂದು ಹಿನ್ನಡೆಯನ್ನು ಅನುಭವಿಸುವಂತಾದೀತು. ಉದ್ಯೋಗಿಗಳಿಗೆ ವರ್ಗಾವಣೆಯ ಕಹಿ ಸುದ್ದಿ ಆತಂಕ ತಂದೀತು. ಅವಿರತವಾದ ಚಟುವಟಿಕೆಗೆ ದೇಹಾರೋಗ್ಯದಲ್ಲಿ ಪರಿಣಾಮ ತಂದೀತು.

ಕರ್ಕ: ಮನೆಯಲ್ಲಿ ಮಂಗಲ ಮಹೋತ್ಸವದ ಸಂಭ್ರಮದ ಚಿಂತೆ ಕಾರ್ಯಗತವಾಗಲಿದೆ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣವಾಗಲಿವೆ. ವ್ಯಾಪಾರಿ ವರ್ಗ ಹಾಗೂ ಉದ್ಯಮಿಗಳ ಶ್ರಮಕ್ಕೆ ಫ‌ಲ ಸಿಗಲಿದೆ.

Advertisement

ಸಿಂಹ: ಅವಿವಾಹಿತರು ವಿವಾಹದ ಬಗ್ಗೆ ಮನಸ್ಸು ಮಾಡುವುದು ಉತ್ತಮ. ಅತಿಥಿ ಅಭ್ಯಾಗತರ ಆಗಮನ, ನೆರೆಹೊರೆಯವರಿಂದ ದ್ವೇಷ ಸಾಧನೆ, ನೂತನ ಬಾಂಧವ್ಯ ವೃದ್ಧಿ ಮುಂತಾದ ಮಿಶ್ರ ಫ‌ಲವಿದೆ.

ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿ ಇತರರಿಗೆ ಅಸೂಯೆಗೆ ಕಾರಣವಾದೀತು. ವಿವಿಧ ಮೂಲಗಳಿಂದ ಧನಾಗಮನವಿದ್ದು, ಆದಾಯಕ್ಕೆ ಕೊರತೆ ಬಾರದು. ವಾರಂತ್ಯ ಶುಭವಾಗಲಿದೆ.

ತುಲಾ: ನಿರೀಕ್ಷಿತ ಸ್ಥಾನವಲ್ಲದಿದ್ದರೂ ಸ್ಥಿತಿಗೆ ಮೋಸವಿಲ್ಲ. ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ನಿಷ್ಠುರತೆಗೆ ಕಾರಣರಾಗುವಿರಿ. ಕಾಳಜಿ ವಹಿಸಿರಿ. ಕೈಗಾರಿಕೆ, ಬ್ಯಾಂಕಿಂಗ್‌ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರದವರಿಗೆ ಮುಂಭಡ್ತಿಯ ಯೋಗವಿದೆ.

ವೃಶ್ಚಿಕ: ಧನ ಭಾಗ್ಯ ವೃದ್ಧಿಯಾಗಲಿದೆ. ಶುಭ ಕಾರ್ಯದ ಸಮಾಲೋಚನೆಗಳು ಮನೆಯಲ್ಲಿ ನಡೆದಾವು. ನ್ಯಾಯಾಲಯದ ಕಡತಗಳ ವಿಲೇವಾರಿಯಲ್ಲಿ ವಿಳಂಬ ತೋರಿಬಂದರೂ ಸದ್ಯದಲ್ಲೇ ಮುಕ್ತಾಯ ಹಂತವನ್ನು ತಲುಪೀತು.

ಧನು: ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಪಡೆಯುವರು. ಗೃಹದಲ್ಲಿ ಗೃಹಿಣಿಯ ಬೇಡಿಕೆಗೆ ಸ್ಪಂದಿಸಬೇಕಾದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ತೋರಿಬಂದು ಆಗಾಗ ಮುಜುಗರವನ್ನು ಅನುಭವಿಸುವಂತಾಗಲಿದೆ.

ಮಕರ: ಹೊಸ ಹೂಡಿಕೆಗೆ ಇದು ಸಕಾಲವಲ್ಲ. ಗೆಳೆತನದಲ್ಲಿ ವಿರಸವಿದೆ. ವ್ಯರ್ಥ ದುರಾಭಿಮಾನಕ್ಕೆ ಒಳಗಾಗಿ ಉನ್ನತಿಯನ್ನು ಕಳೆದುಕೊಂಡೀರಿ ಜೋಕೆ ! ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಲಾಭದಿಂದ ಕೊಂಚ ಆಸರೆ ತಂದೀತು.

ಕುಂಭ: ಸಾರ್ಥಕತೆಯಿಂದ ಶತ್ರು ಭಯ ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಬಿಡದು. ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಹೂಡಿಕೆಯಿಂದ ಅಲ್ಪಸ್ವಲ್ಪ ಆದಾಯವನ್ನು ತಂದುಕೊಟ್ಟೀತು.

ಮೀನ: ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಸ್ಥಾನ ಬದಲಾವಣೆಯ ಸೂಚನೆ ತೋರಿಬಂದೀತು. ವಾರಾಂತ್ಯದಲ್ಲಿ ಶುಭವಾರ್ತೆ ಇರುತ್ತದೆ. ಈ ವಾರ ಶುಭದಾಯಕ ಹಾಗೂ ಆಶಾದಾಯಕವಾದೀತು.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next