Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಶುಭವಾರ್ತಾ ಶ್ರವಣ ಯೋಗ

07:05 AM May 23, 2021 | Team Udayavani |

23-05-2021

Advertisement

ಮೇಷ: ಗೃಹಕೃತ್ಯ ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಗೋಚರಿಸಲಿದೆ. ಕಾರ್ಯಕ್ಷೇತ್ರದಲ್ಲಿ ಉದ್ವೇಗ, ಹಸ್ತಕ್ಷೇಪಕ್ಕೆ ಎಡೆಯಾಗುವುದು. ನೀಚ ಜನರ ಸಹವಾಸ ಬೇಡ.

ವೃಷಭ: ಇದ್ದ ಆರ್ಥಿಕ ಸ್ಥಿತಿಯಲ್ಲಿ ನೀವು ಸುಧಾರಿಸುವುದು ಅವಶ್ಯಕವಾಗಿದೆ. ಖರ್ಚುವೆಚ್ಚವನ್ನು ಜಾಗ್ರತೆಯಿಂದ ಮಾಡಿರಿ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿಬಂದು ದೇವತಾ, ಮಂಗಲಕಾರ್ಯಗಳಿಗೆ ಅನುಕೂಲ.

ಮಿಥುನ: ಹೆಚ್ಚಿನ ದುಡಿಮೆ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಗೆ ಕೊಂಡೊಯ್ಯಲಿದೆ. ಬಂದ ಉತ್ತಮ ಅವಕಾಶಗಳನ್ನು ಅನುಕೂಲ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಬಂದ ಹೆಚ್ಚಿನ ಕಷ್ಟನಷ್ಟಗಳು ಉಪಶಮನವಾಗಲಿದೆ.

ಕರ್ಕ: ಅವಿವಾಹಿತರಿಗೆ ಕಂಕಣಬಲದ ಯೋಗವಿದ್ದರೂ ಪ್ರಯತ್ನಬಲಕ್ಕೆ ಹೆಚ್ಚಿನ ಗಮನಹರಿಸಬೇಕಾದೀತು. ಆರ್ಥಿಕ ವಿಚಾರದಲ್ಲಿ ಮಾತ್ರ ಲೆಕ್ಕಾಚಾರ ಸರಿ ಇದ್ದಲ್ಲಿ ಸಮಾಧಾನವಾದೀತು. ಗುರುಗಳ ಭೇಟಿಯ ಸಂದರ್ಭ ಬರಬಹುದು.

Advertisement

ಸಿಂಹ: ಹಲವಾರು ಸಮಸ್ಯೆಗಳಿಂದ ಮಾನಸಿಕ ಸಮತೋಲನ ಕಳೆದುಕೊಂಡ ನಿಮಗೆ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಆತ್ಮವಿಶ್ವಾಸ, ಪ್ರಯತ್ನಬಲ, ಸಹಕಾರ ಸದ್ಯದಲ್ಲೇ ಸಿಗಲಿದೆ. ವಿಶ್ವಾಸ ಹಾಗೂ ತಾಳ್ಮೆ ಅಗತ್ಯವಿದೆ.

ಕನ್ಯಾ: ಹಲವಾರು ಸಮಸ್ಯೆಗಳಿದ್ದರೂ ನಿಮಗೆ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಲು ಆತ್ಮವಿಶ್ವಾಸ, ಸಹಕಾರ ಮತ್ತು ಪ್ರಯತ್ನಬಲ ಸದ್ಯದಲ್ಲೇ ಸಿಗಲಿದೆ. ಶುಭವಾರ್ತಾ ಶ್ರವಣ ಯೋಗ.

ತುಲಾ: ಸ್ವಜನ ಬಂಧುಗಳಿಂದಲೂ, ಸ್ನೇಹಿತ ವರ್ಗದವರಿಂದಲೂ ಮಾನಸಿಕ ಒತ್ತಡ, ಮನಸ್ತಾಪದ ಸಂಭವ ತೋರಿಬಂದರೂ ನಿಮ್ಮ ಸಂಯಮ ನಿಮ್ಮನ್ನು ಕಾಪಾಡಲಿದೆ. ಮುನ್ನಡೆಗೆ ಬೇರೆ ದಾರಿಯನ್ನು ಕಂಡುಕೊಳ್ಳಿರಿ.

ವೃಶ್ಚಿಕ: ದೈವಬಲ ಉತ್ತಮವಿದ್ದು ಹಿಂದಿನ ತಪ್ಪುಗಳ ಪುನರಾವರ್ತನೆಯಾಗದಂತೆ ಹೆಚ್ಚಿನ ಜಾಗ್ರತೆಯಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿದ್ದಲ್ಲಿ ಜವಾಬ್ದಾರಿ ತೋರಿದಲ್ಲಿ ಯಶಸ್ಸು ದೊರೆಯಲಿದೆ. ತಾಳ್ಮೆ ಇರಲಿ.

ಧನು: ಧಾರ್ಮಿಕ ವಿಚಾರದಲ್ಲಿ ಗಮನಹರಿಸಿದಲ್ಲಿ ಶಾಂತಿ, ಸಮಾಧಾನ ತೋರಿಬರುತ್ತದೆ. ಕುಟುಂಬದಲ್ಲಿ ಮಂಗಲಕಾರ್ಯ, ದೇವತಾ ಕಾರ್ಯಗಳಿಗೆ ಸಕಾಲವಾದ ಕಾರಣ ಆಸಕ್ತಿ ವಹಿಸಿದಲ್ಲಿ ಅನುಗ್ರಹ ಕಂಡುಬರಲಿದೆ.

ಮಕರ: ಗ್ರಹಗಳ ಪ್ರತಿಕೂಲತೆಯಿಂದ ವ್ಯವಹಾರಿಕವಾಗಿ, ಸಾಮಾಜಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಆಗಾಗ ವಾದ ವಿವಾದ ಅನಾವಶ್ಯಕ ಭಾವೋದ್ವೇಗಗಳಿಗೆ ಬಲಿ ಬೀಳದಂತೆ ಜಾಗ್ರತೆ ಇರಲಿ. ಸಂಚಾರದಲ್ಲಿ ಆಸಕ್ತಿ ವಹಿಸದಿರಿ.

ಕುಂಭ: ಅನಿರೀಕ್ಷಿತ ಆರೋಗ್ಯ ಹಾನಿ ತೋರಿ ಬರುವುದರಿಂದ ಆದಷ್ಟು ಗಮನ ಇರಲಿ. ಕಾರ್ಯಕ್ಷೇತ್ರದಲ್ಲಿ ಅಸಹಕಾರ, ವಿಳಂಬದಿಂದ ಕಿರಿಕಿರಿ ಇರುತ್ತದೆ. ವಿರೋಧಿಗಳ ಉಪಟಳವಿದ್ದರೂ ಕಾರ್ಯಕ್ಷೇತ್ರದಲ್ಲಿ ಮುನ್ನಡೆ.

ಮೀನ: ಕುಟುಂಬ ಸ್ಥಾನದಲ್ಲಿ ಪ್ರೀತಿ ವಿಶ್ವಾಸ, ಸಹಕಾರ ತೋರಿಬರುತ್ತದೆ. ಸುಖೋಪಕರಣಗಳ ಖರೀದಿ, ಕೋರ್ಟುಕಚೇರಿ ಕಾರ್ಯದಲ್ಲಿ ಯಶಸ್ಸು. ಮಂಗಲ ಕಾರ್ಯಗಳಲ್ಲಿ ಆಸಕ್ತಿ ತೋರಿಬರಲಿದೆ. ಶುಭವಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next