Advertisement

ಈ ರಾಶಿತವರಿಗಿಂದು ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ

07:19 AM May 06, 2021 | Team Udayavani |

6-5-2021

Advertisement

ಮೇಷ: ನೀವು ಶ್ರಮಜೀವಿಗಳು. ಅಲಸಿಗರಲ್ಲ . ನಿಮ್ಮ ಪರಿಶ್ರಮದ ಪ್ರಭಾವ ವೃತ್ತಿರಂಗದಲ್ಲಿ ಮುನ್ನಡೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಆಗಾಗ ಸಣ್ಣಪುಟ್ಟ ಸಮಸ್ಯೆಗಳು ಕಂಡುಬರುವುದು. ಅತೀ ಚಿಂತಿಸದಿರಿ.

ವೃಷಭ: ಆಕಸ್ಮಿಕವಾಗಿ ದೂರ ಪ್ರಯಾಣವು ಕಂಡು ಬಂದೀತು. ಆರೋಗ್ಯ ಭಾಗ್ಯದಲ್ಲಿ ಸುಧಾರಣೆ ತೋರಿ ಬಂದರೂ ಉದಾಸೀನತೆ ಸಲ್ಲದು. ದೇವತಾನುಗ್ರಹವು ನಿಮ್ಮನ್ನು ಕಾಪಾಡಲಿದೆ. ಧನಾತ್ಮಕವಾಗಿ ಆಲೋಚನೆ ಮಾಡಿದರೆ ಉತ್ತಮ.

ಮಿಥುನ: ಕ್ರೀಡಾಪಟುಗಳಿಗೆ ನಿರೀಕ್ಷಿತ ಯಶಸ್ಸು ಸಿಗಲಾರದು. ವಿದ್ಯಾರ್ಥಿಗಳ ಪರಿಶ್ರಮವು ಸಾರ್ಥಕವೆನಿಸಲಿದೆ. ಸರಕಾರೀ ಕೆಲಸ ಕಾರ್ಯಗಳು ಸುಲಭ ರೂಪದಲ್ಲಿ ಕೈಗೂಡಲಿದೆ. ಆಕಸ್ಮಿಕ ಖರ್ಚುಗಳು ಆತಂಕ ತರಬಹುದು.

ಕರ್ಕ: ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತರಾಗುವ ಸಂಭವವಿರುತ್ತದೆ. ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಏರ್ಪಡಲಿದೆ. ಸಾಮಾಜಿಕವಾಗಿ ಉತ್ತಮ ಹೆಸರು ಗಳಿಸಿ ಸೂಕ್ತ ಸ್ಥಾನಮಾನಗಳು ದೊರೆತು ಸಂಭ್ರಮಿಸುವಿರಿ.

Advertisement

ಸಿಂಹ: ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯೋಗವು ಕಂಡುಬರುವುದು. ಕಾಂಟ್ರಾಕ್ಟ್ವೃ ತ್ತಿಯವರಿಗೆ ಧನಾಗಮನವು ನಿರಂತರವಿರುತ್ತದೆ. ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ. ಹಿಂಜರಿಯದಿರಿ.

ಕನ್ಯಾ: ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಹೊಸ ಉತ್ಸಾಹದಿಂದ ವರ್ಧಿಸಲಿದೆ. ನೂತನ ವಾಹನ ಲಾಭವೂ ಇದ್ದೀತು. ಕಾರ್ಯಶೀಲರಾದ ನಿಮ್ಮ ಪ್ರಯತ್ನ ಕಾರ್ಯಸಾಧನೆಗೆ ನಾಂದಿ.

ತುಲಾ: ಸಾಂಸಾರಿಕವಾಗಿ ಸುಖ, ಶಾಂತಿ ಒಳ್ಳೆಯ ಅಭಿವೃದ್ಧಿ ಇರುತ್ತದೆ. ಆಗಾಗ ನಿರಾಶಾ ಮನೋಭಾವ ದಿಂದ ಕೊರಗದಿರಿ. ಮುಖ್ಯವಾಗಿ ನಿಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ಮರೆಯದಿರಿ. ಅಧಿಕ ಖರ್ಚು ಆತಂಕ ತಂದೀತು.

ವೃಶ್ಚಿಕ: ಆಗಾಗ ಧನಾಗಮನದಿಂದ ಚೇತರಿಕೆ ಕಂಡು ಬರಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು ತೋರಿಬಂದರೂ ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಯೋಗ್ಯ ನೆಂಟಸ್ತಿಕೆಗಳು ಕೂಡಿಬರುವುದು.

ಧನು: ವಾಹನಾದಿ ಖರೀದಿ ಹಾಗೂ ಸಂಚಾರದಲ್ಲಿ ಜವಾಬ್ದಾರಿ ಇರಲಿ. ಆರ್ಥಿಕ ಸ್ಥಿತಿಯಲ್ಲಿ ಆಗಾಗ ಏರುಪೇರಾದರೂ ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ. ಆತ್ಮೀಯರ ಸಹಕಾರದಿಂದ ಕಾರ್ಯ ಸಿದ್ಧಿ.

ಮಕರ: ಚಿನ್ನಾಭರಣಗಳ ಸಂಗ್ರಹದಿಂದ ಬಾಳ್ವೆ ಯಶಸ್ವೀ ಎನಿಸಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ  ಕೂಡಿಬರಲಿದೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಹಾಗೇ ನೀವಿಟ್ಟ ವಿಶ್ವಾಸವೆಲ್ಲ ಸಫ‌ಲತೆ ಕಾಣಲಿದೆ. ಧೈರ್ಯದಿಂದ ಮುನ್ನಡೆಯಿರಿ.

ಕುಂಭ: ಸಾಮಾಜಿಕ ಕ್ಷೇತ್ರದಲ್ಲಿ ಜನಾನುರಾಗದ ಅನುಭವವಾಗುತ್ತದೆ. ಹಾಗೇ ದೇವತಾರ್ಚನೆಯಿಂದ ಪುಣ್ಯ ಕಾರ್ಯಸಿದ್ಧಿ . ಎಲ್ಲಾ ವಿಚಾರಗಳಲ್ಲಿ ಸಮಚಿತ್ತದಿಂದ ವ್ಯವಹರಿಸಿದರೆ ನಿಮ್ಮ ಹಾದಿಯು ಸುಗಮವಾಗಿ ಸಾಗುತ್ತದೆ. ಶುಭವಿದೆ.

ಮೀನ: ಗೃಹ ನಿರ್ಮಾಣ ಕಾರ್ಯಗಳು ಅಡೆತಡೆ ಗಳಿಂದ ನಡೆಯುತ್ತವೆ. ಶುಭಕಾರ್ಯಗಳಿಗಾಗಿ ಹಿರಿಯರೊಡನೆ ಸಮಾಲೋಚನೆ ಅಗತ್ಯವಿರುತ್ತದೆ. ದುಡುಕದಿರಿ. ಈ ದಿನ ಒಳಿತಲ್ಲಾ ಎಂಬ ಮನೋಭಾವ ಬಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಿರಿ

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next