Advertisement

ಸರ್ಕಾರಿ ಶಾಲೆ ಹೊಸ್ತಿಲಲ್ಲಿ ನಿರೀಕ್ಷೆಗಳ ಕನವರಿಕೆ

02:08 PM Dec 27, 2020 | Suhan S |

ಬೆಳಗಾವಿ: ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರ ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳ ವ್ಯಾಪ್ತಿಯನ್ನು ಹೊಂದಿದೆ. ಬೆಳಗಾವಿ ಜಿಲ್ಲಾ ಕೇಂದ್ರ ಸಹ ಅತೀ ಸಮೀಪದಲ್ಲೇ ಇದೆ. ಆದರೆ, ನಿರೀಕ್ಷೆಗೆ ತಕ್ಕಂತೆ ಇಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸಹ ಹಲವಾರು ಸಮಸ್ಯೆಗಳು ಈಗಲೂ ಕಾಡುತ್ತಿವೆ.

Advertisement

ಸರಕಾರಿ ಶಾಲೆಗಳ ದುರವಸ್ಥೆ ಕಂಡಿರುವಶಾಸಕ ಸತೀಶ ಜಾರಕಿಹೊಳಿ ಈಗ ಉಳ್ಳಾಗಡ್ಡಿ ಖಾನಾಪುರದ ಕರ್ನಾಟಕ ಪಬ್ಲಿಕ್‌ ಶಾಲೆ ಹಾಗು ಗುಟಗುದ್ದಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನುಅಭಿವೃದ್ಧಿ ಪಡಿಸುವ ಉದ್ದೇಶದಿಂದದತ್ತು ಪಡೆದುಕೊಂಡಿದ್ದಾರೆ. ಕ್ಷೇತ್ರದ ಪ್ರಗತಿಗೆ ಶಿಕ್ಷಣವೇ ಮೂಲಮಂತ್ರ ಎಂಬುದನ್ನುಬಲವಾಗಿ ನಂಬಿರುವ ಶಾಸಕ  ಸತೀಶ ಜಾರಕಿಹೊಳಿ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ಎರಡೂ ಶಾಲೆಗಳಿಗೆ ಒಟ್ಟು253.25 ಲಕ್ಷ ರೂ. ಅಂದಾಜು ವೆಚ್ಚದಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಇದರಲ್ಲಿ ಗುಟಗುದ್ದಿ ಶಾಲೆಗೆ 163.85 ಲಕ್ಷದ ಯೋಜನೆ ಸಿದ್ಧವಾಗಿದೆ.

ಕರ್ನಾಟಕ ಪಬ್ಲಿಕ್‌ ಶಾಲೆ, ಉಳ್ಳಾಗಡ್ಡಿ ಖಾನಾಪುರ :

ಒಂದರಿಂದ 12ನೇ ತರಗತಿ ಹೊಂದಿರುವ ಉಳ್ಳಾಗಡ್ಡಿ ಖಾನಾಪುರದ ಕರ್ನಾಟಕ ಪಬ್ಲಿಕ್‌ ಶಾಲೆ ಸೌಲಭ್ಯಗಳ ದೃಷ್ಟಿಯಲ್ಲಿಇನ್ನೂ ಬಹಳ ಸುಧಾರಣೆಯಾಗಬೇಕಿದೆ. 783 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.ಮುಖ್ಯವಾಗಿ ಈ ಶಾಲೆಗೆ ಕೊಠಡಿಗಳ ಕೊರತೆ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂತಕ್ಷಣಕ್ಕೆ 15 ಕೊಠಡಿಗಳು ಬೇಕು. ಆದರೆಇದು ಒಂದೇ ಹಂತದಲ್ಲಿ ಪೂರ್ಣಗೊಳ್ಳುವಬೇಡಿಕೆ ಅಲ್ಲ. ಶಾಲಾ ಶಿಕ್ಷಕ ವರ್ಗದ ಬೇಡಿಕೆಗೆಸ್ಪಂದಿಸಿರುವ ಶಾಸಕರು ಈಗ 44 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ. ಇದಲ್ಲದೆ ಶಾಲೆಯ ವಿವಿಧಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 89.40 ಲಕ್ಷರೂ. ಕ್ರಿಯಾ ಯೋಜನೆ ರೂಪಿಸಿರುವ ಶಾಸಕ ಸತೀಶ ಜಾರಕಿಹೊಳಿ ಈ ಹಣದಲ್ಲಿ ಗ್ರಂಥಾಲಯ ಕಟ್ಟಡ, ಪುಸ್ತಕಗಳ ಖರೀದಿ, ಕುಡಿವ ನೀರಿನ ಘಟಕ, ಆಟದ ಮೈದಾನದ ಸಮತಟ್ಟು ಮಾಡುವುದು, ಸಿಸಿ ಕ್ಯಾಮೆರಾ ಅಳವಡಿಕೆ, ಪ್ರಯೋಗಾಲಯ, ಆರು ಗಣಕ ಯಂತ್ರ, ಪೀಠೊಪಕರಣಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ.

ಶಾಲೆಗೆ ಮುಖ್ಯವಾಗಿ ಕೊಠಡಿಗಳ ಅಗತ್ಯತೆ ಇದೆ. ವಿದ್ಯಾರ್ಥಿಗಳಸಂಖ್ಯೆ ಏರಿಕೆಯಾಗುತ್ತಿರುವುದರಿಂದಕೊಠಡಿಗಳ ಜೊತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯದ,ಕುಡಿಯುವ ನೀರು ಹಾಗೂಶೌಚಾಲಯದ ಅವಶ್ಯಕತೆ ಇದೆ. ಈಎಲ್ಲ ಅಂಶಗಳನ್ನು ಶಾಸಕರ ಗಮನಕ್ಕೆತರಲಾಗಿದೆ. 1ರಿಂದ 12ನೇ ತರಗತಿಇರುವುದರಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಕೊಡಬೇಕು ಎಂಬುದು ನಮ್ಮ ಉದ್ದೇಶ. ಬಸವರಾಜ ಮಠಪತಿ, ಮುಖ್ಯ ಶಿಕ್ಷಕ

Advertisement

ಹಿರಿಯ ಪ್ರಾಥಮಿಕ ಶಾಲೆ, ಗಟಗುದ್ದಿ  :

ಒಟ್ಟು 718 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ 1ರಿಂದ 10ರ ವರೆಗೆ ತರಗತಿಗಳಿವೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಶಾಲೆಯಲ್ಲಿ ಈಗ ಕೊಠಡಿಗಳಕೊರತೆ ಎದ್ದುಕಾಣುತ್ತಿದೆ. ಶಾಲೆಯ ಅಭಿವೃದ್ಧಿಗೆ ಬೇಕಾಗಿರುವ ಬೇಡಿಕೆಗಳದೊಡ್ಡ ಪಟ್ಟಿಯನ್ನು ಶಿಕ್ಷಕರು ಶಾಸಕರು ಹಾಗೂ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ. ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿಸ್ಪಂದಿಸಿರುವ ಯಮಕನಮರಡಿ ಶಾಸಕಸತೀಶ ಜಾರಕಿಹೊಳಿ ಅವರು 163.85ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಶಾಸಕರಪ್ರದೇಶಾ ಭಿವೃದ್ಧಿ ಯೋಜನೆಯಡಿ ಇದರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಮುಖ್ಯವಾಗಿ ಶಾಲೆಗೆ ಐದು ಹೈಟೆಕ್‌ ಕೊಠಡಿಗಳು, ಸಭಾಭವನ, ಶೌಚಾಲಯ, ಕುಡಿಯುವ ನೀರು, ಶಾಲಾ ಆವರಣದ ಗೋಡೆ, ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಕೊಠಡಿಗಳು ಹಾಗೂ ನಾಲ್ಕು ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಾಣ ಮಾಡಲು ಶಾಸಕರು ಯೋಜನೆ ರೂಪಿಸಿದ್ದಾರೆ.ಸರಕಾರದಿಂದ ಹಣ ಬಿಡುಗಡೆಯಾಗಿಕಾಮಗಾರಿ ನಡೆದರೆ ಈ ಶಾಲೆ ಸಮಸ್ಯೆಗಳಿಗೆಪರಿಹಾರ ಕಂಡುಕೊಳ್ಳಬಹುದು.

ಶಾಲೆಗೆ ಈಗ ಕೊಠಡಿಗಳ ಅಗತ್ಯತೆ ಬಹಳ ಇದೆ. ಇದೇ ಕಾರಣದಿಂದಎಂಟು ಕೊಠಡಿಗಳ ಬೇಡಿಕೆಯನ್ನುಶಾಸಕರಿಗೆ ಸಲ್ಲಿಸಲಾಗಿದೆ. ಇದರಜೊತೆಗೆ ಶೌಚಾಲಯದ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಸಹ ಮನವಿ ಮಾಡಲಾಗಿದೆ. ಗಂಗಪ್ಪ ಬುಡಕಿ, ಮುಖ್ಯಾಧ್ಯಾಪಕ

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next