Advertisement

ಹೊಳಲ್ಕೆರೆ: ಬಿಜೆಪಿಯ 70 ಕಾರ್ಯಕರ್ತರಿಂದ ರಕ್ತದಾನ

08:01 PM Sep 18, 2020 | Suhan S |

ಹೊಳಲ್ಕೆರೆ: ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ರಕ್ತದಾನ. ಹಾಗಾಗಿ ಪ್ರಧಾನಿ ಮೋದಿಯವರ 70ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಯುವಕರಿಂದ ರಕ್ತದಾನ ಶಿಬಿರವನ್ನುಆಯೋಜಿಸಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ 70ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 70 ಯುವಕರು ರಕ್ತದಾನ ಮಾಡಿದ್ದಾರೆ. ತಾಲೂಕಿನ ವಿವಿಧೆಡೆ ಸ್ವತ್ಛತಾಆಂದೋಲನ, ಸಸಿ ನೆಡುವುದು, ರೋಗಿಗಳಿಗೆ ಹಾಲು ಹಣ್ಣು ವಿತರಣೆ, ವಿಕಲಚೇತನರಿಗೆ ಅಗತ್ಯ ಪರಿಕರ ವಿತರಣೆ, ಅಂಧರಿಗೆ ಕನ್ನಡ ನೀಡುವುದು, ಮನೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಕಾರ್ಯಕರ್ತರ ಮೂಲಕ ಇಡೀ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ರುದ್ರಮ್ಮ, ವೈದ್ಯಾಧಿ ಕಾರಿ ಡಾ| ತಿಪ್ಪೇಸ್ವಾಮಿ, ಟಿಎಚ್‌ಒ ಡಾ| ಜಯಸಿಂಹ, ಡಾ| ಆನಂದ್‌, ರೂಪಾ ಬಾಬು, ಪಪಂ ಸದಸ್ಯರಾದ ಕೆ.ಸಿ. ರಮೇಶ್‌, ಎಚ್‌.ಆರ್‌. ನಾಗರತ್ನ ವೇದಮೂರ್ತಿ, ಗುಂಜಿಗನೂರು ಇಂದ್ರಪ್ಪ, ರೆಡ್‌ಕ್ರಾಸ್‌ ಸದಸ್ಯ ಗಿರೀಶ್‌, ಸಾವಿತ್ರಿ ಬಾಯಿ, ಕೆ.ಆರ್‌.ರಾಜಪ್ಪ, ಬಸವರಾಜ್‌, ಫಣಿಯಪ್ಪ ಮತ್ತಿತರರು ಇದ್ದರು. ಪಪಂ ಸದಸ್ಯರಾದ ಡಿ.ಎಸ್‌. ವಿಜಯ್‌, ಪಿ.ಆರ್‌.ಮಲ್ಲಿಕಾರ್ಜುನ್‌, ಅಶೋಕ್‌, ಪಿ.ಎಚ್‌. ಮುರುಗೇಶ್‌, ನಗರಾಧ್ಯಕ್ಷ ಪ್ರವೀಣ್‌, ಕಾರ್ಯದರ್ಶಿ ದರ್ಶನ್‌, ಮಂಜುಳಾ ಸೇರಿದಂತೆ 70 ಜನರು ರಕ್ತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next