Advertisement

ಶಿವಾಜಿನಗರ ಪೆಟ್ರೋಲ್‌ ಬಂಕ್‌ನಲ್ಲಿ ಗೂಂಡಾಗಿರಿ:BJP ಲೀಡರ್‌ ಅರೆಸ್ಟ್‌

01:36 PM Mar 24, 2018 | Team Udayavani |

ಬೆಂಗಳೂರು:ಶಿವಾಜಿನಗರದ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕಾಂಗ್ರೆಸ್‌ ಪಕ್ಷದ ಬ್ಯಾನರ್‌ ಹಾಕಿರುವುದನ್ನು ತೆರವುಗೊಳಿಸಬೇಕು ಎಂದು ಆಮಾಯಕ ಬಂಕ್‌ ಸಿಬಂದಿಗೆ ಥಳಿಸಿ ಗೂಂಡಾಗಿರಿ ಪ್ರದರ್ಶಿಸಿದ್ದ  ಬಿಜೆಪಿ ನಾಯಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಬಂಧಿತ ಆರೋಪಿ ಬಾಲಕೃಷ್ಣ  ಪೆಟ್ರೋಲ್‌ ಬಂಕ್‌ಗೆ ತೆರಳಿ ಕ್ಯಾಷಿಯರ್‌ ದೊಣ್ಣೆಯಿಂದ ಥಳಿಸಿ ಅವಾಜ್‌ ಹಾಕಿದ್ದಾನೆ. ಗೂಂಡಾಗಿರಿ ಪ್ರದರ್ಶಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. 

ಶಿವಾಜಿನಗರ ಠಾಣೆಗೆ ಬಂಕ್‌ನವರು ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕೃಷ್ಣನನ್ನು ಬಂಧಿಸಿದ್ದಾರೆ.

ಬಾಲಕೃಷ್ಣ ಬಿಬಿಎಂಪಿ ಚುನಾವಣೆಗೆ ಜಯಮಹಲ್‌ ವಾರ್ಡ್‌ನಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next