Advertisement

ಹೊನ್ನಾವರ ಬಂದರಿನಿಂದ ಎಂಟು ಜಿಲ್ಲೆಗಳ ಅಭಿವೃದ್ಧಿ

04:10 PM Oct 14, 2021 | Team Udayavani |

ಹೊನ್ನಾವರ: ಇಲ್ಲಿನ ಬಂದರು ನಿರ್ಮಾಣದಿಂದಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಧಾರವಾಡ,ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸಹಿತ 8ಜಿಲ್ಲೆಗಳ ಅಭಿವೃದ್ಧಿಗೆ ಬಲ ಬರಲಿದ್ದು ಈ ಜಿಲ್ಲೆಗಳಿಗೆ ಸಂಬಂಧಿಸಿದ ಸಾಮಗ್ರಿಗಳ ನಿರ್ಯಾತ, ಅಗತ್ಯವಸ್ತುಗಳ ಆಯಾತಕ್ಕೆ ಕಾರಣವಾಗಲಿದ್ದು ಸಾವಿರಾರುಉದ್ಯೋಗ ಸೃಷ್ಟಿಯಾಗಲಿದೆ.

Advertisement

ಅಲ್ಲದೆ, ಇಲ್ಲಿ ಬಂದರುನಿರ್ಮಾಣದಿಂದ ಯಾರಿಗೂ ತೊಂದರೆಯಿಲ್ಲ ಎಂದುಹೊನ್ನಾವರ ಬಂದರಿನ ಸಿಇಒ ಕ್ಯಾಪ್ಟನ್‌ ಸೂರ್ಯಪ್ರಕಾಶಗುಟ್ಟಾ ಹೇಳಿದ್ದಾರೆ.ಮೀನುಗಾರರ ಪ್ರತಿಭಟನೆ ನಡೆಯುತ್ತಿದೆ. ಬಂದರುನಿರ್ಮಾಣ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ,ವಾಸ್ತವ ಏನು ಎಂಬ ಉದಯವಾಣಿ ಪ್ರಶ್ನೆಗೆ ಅವರುಹೀಗೆ ಹೇಳಿದ್ದಾರೆ.

ಮೀನುಗಾರಿಕೆ ನಡೆಸುವ ಬಂದರುಬೇರೆ, ವಾಣಿಜ್ಯ ಬಂದರಿಗೆ ಆಯ್ಕೆಯಾದ ಸ್ಥಳ ಬೇರೆ.ಮೀನುಗಾರಿಕಾ ಬಂದರು ಹಾಗೂ ಮೀನುಗಾರರವಸತಿ ಪ್ರದೇಶಕ್ಕೆ ಗಡಿ ಹಾಕಿಕೊಂಡು ಹೊಸದಾಗಿನಿರ್ಮಾಣವಾದ ಭೂ ಭಾಗವನ್ನು ನಾವು ಆಯ್ಕೆಮಾಡಿಕೊಂಡಿದ್ದೇವೆ.

ಹೆಚ್ಚಿನ ಭೂಮಿ ಬೇಕಾದರೆಸಮುದ್ರದಲ್ಲಿ ವಿಸ್ತರಿಸುತ್ತೇವೆ. ಮೀನುಗಾರರಿಗೆತೊಂದರೆ ಮಾಡಲು ನಾವು ಬಂದಿಲ್ಲ ಎಂದು ಅವರುಹೇಳಿದರು. ಇದಲ್ಲದೆ 200ಕೋಟಿ ರೂ. ವೆಚ್ಚದಲ್ಲಿಸಾಗರಮಾಲಾ ಯೋಜನೆಯಡಿ ಬಂದರಿಗೆ ಸಮುದ್ರಕ್ಕೆಹೊಂದಿಕೊಂಡು ಚತುಷ್ಪಥ ನಿರ್ಮಾಣವಾಗುವುದರಿಂದಇದು ಬಂದರು ಸಹಿತ ಮೀನುಗಾರಿಕಾ ಪ್ರದೇಶಕ್ಕೆ ಚಂಡಮಾರುತದಿಂದ ರಕ್ಷಣೆ ನೀಡಲಿದೆ.

ಮೀನುಗಾರಿಕೆಗೆ ತೊಂದರೆಯಾಗಲಿದೆಯೇ ಎಂಬಪ್ರಶ್ನೆಗೆ ಅವರು ಶರಾವತಿ ಅಳವೆಯ ಹೂಳೆತ್ತುವಜವಾಬ್ದಾರಿಯನ್ನು ಬಂದರು ಕಮೀಟಿ ವಹಿಸಿಕೊಂಡಿದೆಮತ್ತು 3ಕಿಮೀ ಬ್ರೇಕ್‌ವಾಟರ್‌ ನಿರ್ಮಾಣ ಮಾಡಲಿದೆ.ಕಾಲಕಾಲಕ್ಕೆ ಡ್ರೆಜ್ಜಿಂಗ್‌ ಕೆಲಸವನ್ನು ಬಂದರು ಕಂಪನಿಮಾಡಲಿದೆ. ಹಡಗುಗಳು ಬಂದು ಹೋಗುವುದರಿಂದವಿಶಾಲವಾದ ಅಳವೆ ನಿರ್ಮಾಣವಾಗಬೇಕಿದ್ದು,ಇದನ್ನು ಬಳಸಿಕೊಂಡು ಎಲ್ಲ ಕಾಲದಲ್ಲಿಯೂಮೀನುಗಾರಿಕೆ ನಡೆಸಬಹುದಾಗಿದೆ ಎಂದು ಅವರುಸ್ಪಷ್ಟಪಡಿಸಿದ್ದಾರೆ.

Advertisement

ಇದರಿಂದ ಅಳವೆ ಸಮಸ್ಯೆ ಶಾಶ್ವತವಾಗಿನಿವಾರಣೆಯಾಗಲಿದೆ. ನಾವು ಮೀನುಗಾರರವಿರೋಧಿಗಳಲ್ಲ, ಪ್ರತಿಭಟಿಸುವ ಅಧಿಕಾರ ಅವರಿಗೆಇದೆ. ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ.ಪ್ರತಿಭಟನೆ ವಿಧಾಯಕವಾಗಿರಬೇಕು. ಯಾರದೋಪ್ರಚೋದನೆಯಿಂದ ನಡೆಯಬಾರದು. ನಾವುನ್ಯಾಯಾಲಯದ ತೀರ್ಮಾನಗಳನ್ನು ಒಪ್ಪಿಕೊಂಡಿದ್ದೇವೆ.

ಕಾನೂನು ಪ್ರಕಾರವೇ ನಾವು ಮುಂದುವರಿದಿದ್ದೇವೆ.ಮೀನುಗಾರರಿಗೂ ಅನುಕೂಲ ಮಾಡಿಕೊಡುವಹಲವು ಯೋಜನೆಗಳು ನಮ್ಮಲ್ಲಿವೆ. ಮೀನುಗಾರರನ್ನುಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಮಾಲಿನ್ಯನಿಯಂತ್ರಣಕ್ಕೆ ಹಲವು ಯೋಜನೆ ಕೈಗೊಂಡಿದ್ದೇವೆ.ಮೀನುಗಾರರಿಗೆ ತಪ್ಪು ಕಲ್ಪನೆ ಉಂಟುಮಾಡುವಕೆಲಸ ನಡೆದಿದೆ. ಮೀನುಗಾರರು ಯೋಜನೆಯನ್ನುಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next