Advertisement

ಮರೆಯಾದ ಸಾಮಾಜಿಕ ಅಂತರ

01:03 PM Jun 03, 2020 | Naveen |

ಹೊನ್ನಾಳಿ: ಲಾಕ್‌ಡೌನ್‌ ಸಡಿಲಿಕೆ ಆದ ದಿನಗಳಿಂದ ಪಟ್ಟಣದಲ್ಲಿ ಜನರು ಸಾಗರೋಪಾದಿಯಲ್ಲಿ ಸಂಚರಿಸುತ್ತಿರುವುದು ಕೋವಿಡ್ ಮುಂದಿನ ದಿನಗಳಲ್ಲಿ ಯಾವ ರೀತಿ ತಗಲಿಕೊಳ್ಳಲಿದೆ ಎನ್ನುವ ಆತಂಕ ಸೃಷ್ಟಿಯಾಗಿದೆ.

Advertisement

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮಾರ್ಚ್‌ ಕೊನೆ ವಾರದಿಂದ ಮೇ 31ರವರೆಗೆ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿತ್ತು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಜನ, ವಾಹನ ಸಂಚಾರ ಹಿಡಿತದಲ್ಲಿತ್ತು. ಜೂನ್‌ 1ರಿಂದ ಲಾಕ್‌ಡೌನ್‌ ಸಡಿಲವಾದ ಕಾರಣ ಜನರು ಪಟ್ಟಣದಲ್ಲಿ ವ್ಯಾಪಕವಾಗಿ ಸಂಚಾರ ಪ್ರಾರಂಭಿಸಿದ್ದಾರೆ. ಪಟ್ಟಣದಲ್ಲಿ ಇದುವರೆಗೂ ತೆರೆಯದ ಬಟ್ಟೆ ಅಂಗಡಿಗಳು, ಸೆಲೂನ್‌ ಶಾಪ್‌ ಗಳು ತೆರೆದಿವೆ. ಜೂನ್‌ 8ರಿಂದ ಹೋಟೆಲ್‌ಗ‌ಳು ತೆರೆಯಲು ಅವಕಾಶ ನೀಡುವುದರಿಂದ ಜನದಟ್ಟಣೆ ಇನ್ನೂ ಹೆಚ್ಚಾಗಲಿದೆ. ರಸ್ತೆಯಲ್ಲಿ ಜನರು ಓಡಾಡುವಾಗ ಬಹಳಷ್ಟು ಜನರು ಮಾಸ್ಕ್ ಧರಿಸದೇ ಅಂತರ ಕಾಪಾಡದೇ ಸಂಚರಿಸುತ್ತಿದ್ದಾರೆ. ಇದು ಅವಘಡಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next