Advertisement

ಕ್ಯಾನ್ಸರ್‌ ರೋಗಿ ಸಮಸ್ಯೆಗೆ ಸ್ಪಂದನೆ

03:42 PM Apr 19, 2020 | Naveen |

ಹೊನ್ನಾಳಿ: ಸೂಕ್ತ ಚಿಕಿತ್ಸೆ ಮತ್ತು ಮಾತ್ರೆಗಳು ಸಕಾಲಕ್ಕೆ ಲಭಿಸದೆ ವೇದನೆಯಿಂದ ನರಳುತ್ತಿದ್ದ ತಾಲೂಕಿನ ಮಲೇಕುಂಬಳೂರು ಗ್ರಾಮದ ಕ್ಯಾನ್ಸರ್‌ ರೋಗಿ ಹನುಮಂತಪ್ಪ ಅವರಿಗೆ ಶುಕ್ರವಾರ ದಾವಣಗೆರೆಯ ಎಸ್ಸೆಸ್‌ ಹೈಟೆಕ್‌ ಆಸ್ಪತ್ರೆಯ ಆಂಕಾಲಜಿ ವಿಭಾಗದ ಡಾ| ಅರುಣ್‌ ಅಜ್ಜಪ್ಪ ಚಿಕಿತ್ಸೆ ನೀಡಿ ಸದ್ಯಕ್ಕೆ 10 ಎಂಜಿ ಮಾರ್ಫಿನ್‌ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

Advertisement

ಹನುಮಂತಪ್ಪ ಅವರು ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯಲ್ಲಿ ನಿಯಮಿತವಾಗಿ ರೇಡಿಯೋ ಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ರೇಡಿಯೋ ಥೆರಪಿ ಚಿಕಿತ್ಸೆಗೆ ಅವಶ್ಯಕವಾಗಿದ್ದ ರೇಡಿಯೋ ಆ್ಯಕ್ಟೀವ್‌ ಸಿಐ ಎಲ್‌ಯು-177 ಡೊಟಾಟಾ ಎಂಬ ರಾಸಾಯನಿಕವನ್ನು ಮುಂಬೈನಿಂದ ತರಿಸಬೇಕು. ಆದರೆ ದೇಶಾದ್ಯಂತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾಗೂ ಔಷಧ ಸಂಗ್ರಹಣೆ ಇಲ್ಲದಿರುವ ಕಾರಣಕ್ಕೆ ತರಿಸಲಾಗಿಲ್ಲ.

ಹಾಗಾಗಿ ಮುಂದಿನ ಚಿಕಿತ್ಸೆಯವರೆಗೆ 10 ಎಂಜಿ ಮಾμìನ್‌ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಡಾ| ಅರುಣ್‌ ಅಜ್ಜಪ್ಪ ಸಲಹೆ ಮಾಡಿದರು. ಮುಂಬೈನ ಬಾಬಾ ಅಟಾಮಿಕ್‌ ರಿಸರ್ಚ್‌ ಸೆಂಟರ್‌(ಬಾರ್ಕ್‌), ಐಸೋಟೋಪ್‌ ರೇಡಿಯೇಷನ್‌ ಔಷಧಿಯನ್ನು ಮಣಿಪಾಲ್‌ನ
ಕಸ್ತೂರಬಾ ಆಸ್ಪತ್ರೆಗೆ ಪೂರೈಸುತ್ತಿತ್ತು. ಆದರೆ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪೂರೈಕೆ ಸ್ಥಗಿತಗೊಂಡಿದೆ. ಮಲೇಕುಂಬಳೂರು ಗ್ರಾಮದ ಕ್ಯಾನ್ಸರ್‌ ರೋಗಿ ಹನುಮಂತಪ್ಪ ಆರೋಗ್ಯದಿಂದ ಇದ್ದಾರೆ ಎಂದು ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next