Advertisement

ಕಾಂಗ್ರೆಸ್‌ ಮುಳುಗಿದ ಹಡಗು

07:13 PM Mar 27, 2022 | Team Udayavani |

ಹೊನ್ನಾಳಿ: ಈ ಹಿಂದೆ ಕಾಂಗ್ರೆಸ್‌ ಮುಳುಗುತ್ತಿರುವಹಡಗು ಎನ್ನಲಾಗುತ್ತಿತ್ತು. ಆದರೆ ಈಗ ಆ ಪಕ್ಷ ಸಂಪೂರ್ಣಮುಳುಗಿದ ಹಡಗು ಎಂದು ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯಟೀಕಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ,ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವಿರಾಜಕಾರಣಿ. ಅಂತವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ಜನರದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ ತೀರ್ಪುನೀಡಿದ್ದರೂ ಹಿಜಾಬ್‌ ಧರಿಸಲು ಅವಕಾಶ ಕೊಟ್ಟು ಪರೀಕ್ಷೆಬರೆಸುವಂತೆ ಒತ್ತಾಯಿಸುತ್ತಿರುವುದು ಅಲ್ಪಸಂಖ್ಯಾತರನ್ನುಓಲೈಸುತ್ತಿರುವ ತಂತ್ರ ಎಂದು ದೂರಿದರು.

ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕುಎಂದು ರಾಜ್ಯ ಉತ್ಛ ನ್ಯಾಯಾಲಯ ತೀರ್ಪು ನೀಡಿದೆ. ಆದರೆಕೆಲ ಕಾಂಗ್ರೆಸ್‌ ಮುಖಂಡರು ಹಿಜಾಬ್‌ ಧರಿಸಲು ಅವಕಾಶನೀಡಬೇಕೆಂದು ಒತ್ತಾಯಿಸುತ್ತಿರುವುದು ಖಂಡನೀಯ.ನ್ಯಾಯಾಲಯ ತೀರ್ಪು ಕೊಟ್ಟ ಮೇಲೂ ಕೆಲ ಸಂಘಟನೆಗಳುಹಾಗೂ ವಿದ್ಯಾರ್ಥಿನಿಯರು ತೀರ್ಪಿನ ಬಗ್ಗೆ ಅಸಮಾಧಾನವ್ಯಕ್ತಪಡಿಸಿ ರಾಜ್ಯ ಬಂದ್‌ಗೆ ಕರೆ ಕೊಟ್ಟಿದ್ದು ಎಷ್ಟು ಸರಿ?ಕಾಂಗ್ರೆಸ್‌ ಪಕ್ಷ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆಎಂದು ಆರೋಪಿಸಿದರು.

ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಗಬೇಕು.ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾಗಿ ಮದರಸಾಗಳನ್ನು ಸ್ಥಾಪಿಸಿಶಿಕ್ಷಣ ನೀಡುವುದು ಸಲ್ಲದು. ತಕ್ಷಣ ರಾಜ್ಯದಲ್ಲಿ ಮದರಸಾಶಿಕ್ಷಣಕ್ಕೆ ತಡೆ ನೀಡಿ ಎಲ್ಲಾ ಅಲ್ಪಸಂಖ್ಯಾತ ಮಕ್ಕಳೂಒಂದೇ ಸೂರಿನಡಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿಕಲಿಯುವಂತಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next