Advertisement

ಕೋವಿಡ್ ನಿಯಂತ್ರಣ ವಿಷಯದಲ್ಲಿ ರಾಜಕಾರಣ ಸಲ್ಲ: ರೇಣುಕಾಚಾರ್ಯ

12:04 PM May 18, 2020 | Naveen |

ಹೊನ್ನಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಮೆಗಾ ಪ್ಯಾಕೇಜ್‌ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡುವುದನ್ನು ಬಿಟ್ಟು ನಮಗೆ ಸಹಕಾರ ನೀಡಬೇಕು. ಕೋವಿಡ್ ಮಹಾಮಾರಿ ವ್ಯಾಪಿಸಿರುವ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಯಕ್ಕನಹಳ್ಳಿ, ಬನ್ನಿಕೋಡು ಹಾಗೂ ಕೂಲಿಂಬಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಮಗಳ ಬಡವರಿಗೆ ಭಾನುವಾರ ವೈಯಕ್ತಿಕವಾಗಿ ಆಹಾರ ಕಿಟ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಿಸಿ ಅವರು ಮಾತನಾಡಿದರು. ಬಡವರಿಗೆ ನೀಡುತ್ತಿರುವ ಈ ಕಿಟ್‌ ಯಾವುದೇ ಸರ್ಕಾರದ ಅನುದಾನದಿಂದ ಅಥವಾ ದೇಣಿಗೆಯಿಂದ ಪಡೆದಿದ್ದಲ್ಲ. ವೈಯಕ್ತಿಕವಾಗಿ ನೀಡುತ್ತಿದ್ದೇನೆ ಎಂದರು. ಜಿಪಂ ಸದಸ್ಯೆ ದೀಪಾ ಜಗದೀಶ್‌, ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌, ಸುಮಾ ರೇಣುಕಾಚಾರ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next