Advertisement

ಹಪ್ಪಳ, ಜೇನುತುಪ್ಪ ಭರ್ಜರಿ ಮಾರಾಟ

09:46 AM Aug 17, 2019 | mahesh |

ನವದೆಹಲಿ: ಯಾವ ವಸ್ತುವಿಗೂ ಬೇಡಿಕೆಯೇ ಇಲ್ಲ ಎಂದು ಉದ್ಯಮಗಳು ಆರೋಪಿಸುತ್ತಿರುವ ಮಧ್ಯೆಯೇ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉತ್ಪನ್ನಗಳ ಮಾರಾಟ 2018-19 ರಲ್ಲಿ ಶೇ.25ರಷ್ಟು ಏರಿಕೆಯಾಗಿ ಅಚ್ಚರಿ ಮೂಡಿಸಿದೆ. ಅದರಲ್ಲೂ ವಿಶೇಷವೆಂದರೆ ಖಾದಿ ಮತ್ತು ಗ್ರಾಮೋದ್ಯೋಗದ ಒಟ್ಟು 75 ಸಾವಿರ ಕೋಟಿ ರೂ. ವಹಿವಾಟಿನಲ್ಲಿ ಅತಿ ಹೆಚ್ಚಿನ ಪಾಲು ಹಪ್ಪಳ, ಜೇನುತುಪ್ಪ ಮತ್ತು ಪ್ರಸಾಧನ ಸಾಮಗ್ರಿಗಳದ್ದಾಗಿದೆ.

Advertisement

ಆದರೆ, ಇಷ್ಟು ವಹಿವಾಟು ನಡೆಸಿದರೂ ಖಾದಿ ಮತ್ತು ಗ್ರಾಮೋದ್ಯೋಗ ಕೇವಲ 15 ಕೋಟಿ ರೂ. ಲಾಭ ಮಾಡಿದೆ. ಬದಲಿಗೆ ಕೆವಿಐಸಿಗಿಂತ ಅರ್ಧದಷ್ಟು ವಹಿವಾಟು ನಡೆಸುವ ಹಿಂದುಸ್ತಾನ್‌ ಯೂನಿಲಿವರ್‌ 6000 ಕೋಟಿ ರೂ. ಲಾಭ ಮಾಡುತ್ತಿದೆ. ಖಾಸಗಿ ಕಂಪನಿಗಳ ಜೊತೆ ಸಹಭಾಗಿತ್ವ, ಹೆಚ್ಚು ಪ್ರಚಾರ ಮತ್ತು ನರೇಂದ್ರ ಮೋದಿ ಸರ್ಕಾರದ ಸಹಭಾಗಿತ್ವದಿಂದ ಐದು ವರ್ಷದಲ್ಲಿ ದುಪ್ಪಟ್ಟು ವಹಿವಾಟು ನಡೆಸಲು ಸಾಧ್ಯವಾಗಿದೆ ಎಂದು ಕೆವಿಐಸಿ ಮುಖ್ಯಸ್ಥ ವಿನಯ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next