Advertisement

ಪ್ರಾಮಾಣಿಕತೆ ಮೆರೆದ ಬಸ್‌ ಚಾಲಕ-ನಿರ್ವಾಹಕ

12:11 PM Nov 28, 2019 | Suhan S |

ಕಲಘಟಗಿ: ಗಂಜೀಗಟ್ಟಿ-ಹುಬ್ಬಳ್ಳಿ ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಕಳೆದುಕೊಂಡ ಚಿನ್ನಾಭರಣವಿದ್ದ ಪರ್ಸ್‌ ಅನ್ನು ನಿರ್ವಾಹಕ ಮತ್ತು ಚಾಲಕ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗ್ರಾಮದ ನಿವಾಸಿ ಅಂಬಿಕಾ ಹಿರೇಮಠ ಎಂಬುವವರು ಮರಳಿ ಪರ್ಸ್‌ ಪಡೆದವರು.

Advertisement

ಇವರು ಹುಬ್ಬಳ್ಳಿಯಿಂದ ಗಂಜಿಗಟ್ಟಿಗೆ ಸಾರಿಗೆ ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಂಗಾರದ ತಾಳಿ ಸರ್‌ ಇಟ್ಟಿರುವ ಪರ್ಸ್‌ನ್ನು ಬಸ್‌ನಲ್ಲಿಯೇ ಬೀಳಿಸಿಕೊಂಡಿದ್ದರು. ನಂತರ ಮನೆಗೆ ಹೋಗಿ ನೋಡುತ್ತಿದ್ದಂತೆ ಚೀಲದಲ್ಲಿದ್ದ ಪರ್ಸ್‌ ಇರಲಿಲ್ಲ. ತಿರುಗಿ ಗ್ರಾಮದ ಬಸ್‌ ನಿಲ್ದಾಣಕ್ಕೆ ಬಂದರೆ ಬಸ್‌ ಹುಬ್ಬಳ್ಳಿಗೆ ಹೋಗಿತ್ತು. ಫೋನ್‌ಮೂಲಕ ಚಾಲಕ ಮತ್ತು ನಿರ್ವಾಹಕರಿಗೆ ವಿಷಯ ತಿಳಿಸಿದ್ದಾರೆ.

ಅವರು ಬಸ್‌ನಲ್ಲಿ ಹುಡುಕಿದಾಗ ಪರ್ಸ್‌ ದೊರಕಿದೆ. ಮರುದಿನ ಮಹಿಳೆಗೆ ಪರ್ಸ್‌ನ್ನು ಹಿಂತಿರುಗಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ನಿರ್ವಾಹಕ ರಮೇಶ ಹಡಪದ ಹಾಗೂ ಚಾಲಕ ಶಿವಪ್ಪ ಮಂಕಣಿ ಅವರನ್ನು ಗ್ರಾಮದ ನಾಗಲಿಂಗಯ್ಯ ಹಿರೇಮಠಹಾಗೂ ಗ್ರಾಪಂ ಸದಸ್ಯ ಅಶೋಕ ಅರಳಿ ಸತ್ಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next