Advertisement

ಸೀಲ್‌ ಇದ್ದವರ ತಿರುಗಾಟ?

01:57 PM Apr 20, 2020 | Suhan S |

ಹುಬ್ಬಳ್ಳಿ: ಇಲ್ಲಿನ ಮುಲ್ಲಾ ಓಣಿಯಲ್ಲಿ ಕೋವಿಡ್ 19 ಸೋಂಕಿತರಿಂದ ಆಹಾರ ಧಾನ್ಯ ಪಡೆದ ಕುಟುಂಬದವರು ಯಾರಾದರೂ ಇದ್ದಲ್ಲಿ ಕೋವಿಡ್ 19 ವೈರಸ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಅದರಲ್ಲಿ ಕೆಲವೊಬ್ಬರು ಬಂದು ತಪಾಸಣೆ ಮಾಡಿಸಿಕೊಂಡು ಕ್ವಾರಂಟೈನ್‌ ಸೀಲ್‌ ಹಾಕಿಸಿಕೊಂಡು ಹೊರಗಡೆ ತಿರುಗುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಇದು ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

Advertisement

ಮಾರ್ಚ್‌ 27 ರಂದು ಕೋವಿಡ್ 19  ವೈರಸ್‌ ಸೋಂಕಿತರು ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ ಧಾನ್ಯ ವಿತರಿಸಿದ್ದು, ಅದರಲ್ಲಿ ಬಹಳಷ್ಟು ಜನರು ದವಸ ಧಾನ್ಯ ಪಡೆದಿದ್ದಾರೆ. ಇದಾದ ಕೆಲ ದಿನಗಳ ನಂತರ ಆಹಾರ ಧಾನ್ಯ ಹಂಚಿದವರಿಗೆ ಕೋವಿಡ್ 19 ವೈರಸ್‌ ಬಂದಿದ್ದು ತಪಾಸಣೆಯಿಂದ ಕಂಡು ಬಂದಿದ್ದರಿಂದ, ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್‌ ಪ್ರದೇಶವೆಂದು ಘೋಷಿಸಿ ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಕಲ್ಪಿಸಿತು. ತದ ನಂತರ ಆಹಾರ ಧಾನ್ಯ ಹಂಚಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸುತ್ತಮುತ್ತ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿ ಅಂತಹವರು ಯಾರಾದರೂ ಇದ್ದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿರೆಂದು ಸೂಚನೆ ನೀಡಿತು. ಪ್ರದೇಶದ ಕೆಲ ಜನರ ಮೇಲೆ ನಿಗಾ ಇಟ್ಟ ಜಿಲ್ಲಾಡಳಿತ ಕೆಲವರಿಗೆ ಸೀಲ್‌ ಹಾಕಿ ಕ್ವಾರಂಟೈನ್‌ ಮಾಡಿ ಮನೆಯಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತು. ಆದರೆ ಇದರಲ್ಲಿ ಕೆಲವರು ಹೊರಗಡೆ ತಿರುಗುತ್ತಿರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next