Advertisement

ನಾನು ಯಾರ ಮನೆ ಬಾಗಿಲನ್ನೂ ತಟ್ಟಿದವನಲ್ಲ: ಎಂ.ಬಿ.ಪಾಟೀಲ್‌

09:52 AM May 09, 2019 | Team Udayavani |

ವಿಜಯಪುರ: ಬಸವನ ಗೌಡ ಪಾಟೀಲ್‌ ಯತ್ನಾಳ್‌ ಅವರು ಬಿಜೆಪಿಗೆ ಬಂದರೆ ಡಿಸಿಎಂ ಮಾಡುತ್ತೇವೆ ಎನ್ನುವ ಹೇಳಿಕೆಗೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಇದುವರೆಗೆ ಯಾರ ಮನೆಯ ಬಾಗಿಲನ್ನೂ ತಟ್ಟಿದವನಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಸಚಿವ ಪಾಟೀಲ್‌, ಸ್ನೇಹವೆ ಬೇರೆ,ರಾಜಕಾರಣವೆ ಬೇರೆ ಯತ್ನಾಳ್‌ ಹೇಳಿಕೆಗೆ ನೋ ಕಮೆಂಟ್ಸ್‌ ಮತ್ತು ಅವರ ಆಹ್ವಾನಕ್ಕೆ ನೋ ಥ್ಯಾಂಕ್ಸ್‌ ಎಂದರು.

ಸ್ನೇಹ ಬೇರೆ, ಮಾತನಾಡುವುದು ಬೇರೆ, ನಾನು ಯಾವತ್ತೂ
ಮನಸ್ಸಿಗೆ ನೋವು ಇದ್ದಾಗಲೂ ಬೇರೆ ಪಕ್ಷದ ಕುರಿತು ಯೋಚಿಸಿರಲಿಲ್ಲ ಎಂದರು.

ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್‌ ಅವರು ಎಂ.ಬಿ.ಪಾಟೀಲ್‌ ಬಿಜೆಪಿ ಗೆ ಬರುವಂತೆ ಬಹಿರಂಗ ಆಹ್ವಾನ ನೀಡಿದ್ದರು. ಪಕ್ಷಕ್ಕೆ ಬಂದರೆ ಅವರನ್ನ ಡಿಸಿಎಂ ಮಾಡುವುದಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next