Advertisement

ಬೆಂಗಳೂರು ಗಲಭೆಯ ಹಿಂದೆ ಎಸ್ ಡಿಪಿಐ ಪಾತ್ರವಿದೆ ಎಂದು ಬೆಳಕಿಗೆ ಬರುತ್ತಿದೆ: ಬೊಮ್ಮಾಯಿ

04:27 PM Aug 13, 2020 | keerthan |

ಬೆಂಗಳೂರು: ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಗಳಲ್ಲಿ ನಡೆದ ಗಲಭೆಯ ಹಿಂದೆ ಏನೆಲ್ಲಾ ರಾಜಕೀಯ ನಡೆದಿದೆ? ಯಾರ ಕೈವಾಡ ಇದೆ? ಯಾವ ಸಂಘಟನೆ ಕೈವಾಡವಿದೆ? ಕೆಲ ಮುಖಂಡರ ನಡುವಿನ ವೈ ಮನಸ್ಸು ಇದೆ? ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗಲಭೆಗೆ ಕಾರಣರಾದವರು ಯಾರೇ ಆಗಲಿ, ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಮುಖ್ಯವಾಗಿ ಎಸ್ ಡಿಪಿ ಐ ಪಾತ್ರ ಈ ಗಲಭೆ ಹಿಂದೆಯಿದೆ ಎಂದು ಬೆಳಕಿಗೆ ಬರುತ್ತಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೂಡಲೇ ಎಲ್ಲಾ ಕ್ರಮ ಜರುಗಿಸಲು ಸನ್ನದ್ದರಾಗಿದ್ದೇವೆ ಎಂದರು.

ಇದನ್ನೂ ಓದಿ: ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ, ಬೊಮ್ಮಾಯಿ ನಾಲಾಯಕ್ ಸಚಿವ: ಕಾಂಗ್ರೆಸ್ ನಾಯಕ ಮನೋಹರ್

ಬುಧವಾರ ರಾತ್ರಿ ನಡೆದ ಗಲಭೆ, ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮೂರು ಜನ ಅಸುನೀಗಿದ್ದರು. ನಿನ್ಮೆ ಇಡೀ ದಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಓಡಾಡಿ ಬಂದಿದ್ದೇನೆ. ಹಲವು ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿವೆ. ಆದರೆ ಎಲ್ಲವನ್ನೂ ಮಾದ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಮುಂದೆ ಒಂದು ದಿನ ಹೇಳುತ್ತೇನೆ ಎಂದು ಗೃಹ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next