Advertisement

ಗೃಹರಕ್ಷಕರಲ್ಲೂ ದೈಹಿಕ ಕ್ಷಮತೆ ಅಗತ್ಯ: ಡಾ|ಪದ್ಮರಾಜ ಹೆಗ್ಡೆ

11:49 AM Dec 17, 2017 | Team Udayavani |

ಉಡುಪಿ: ಪೊಲೀಸ ರಂತೆಯೇ ವಿಶ್ವಾಸಾರ್ಹ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸಿಬಂದಿಯೂ ಅತ್ಯಂತ ಸಮರ್ಪಕ ವಾದ ದೈಹಿಕ ಕ್ಷಮತೆ ಕಾಯ್ದುಕೊಳ್ಳ ಬೇಕು ಎಂದು ಮಣಿಪಾಲ ಕೆಎಂಸಿಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ| ಪದ್ಮರಾಜ ಹೆಗ್ಡೆ ಹೇಳಿದರು.

Advertisement

ಅವರು ನಗರದ ಚಂದೂ ಮೈದಾನ ದಲ್ಲಿ ಉಡುಪಿ, ದ.ಕ., ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಗೃಹರಕ್ಷಕ ದಳ ಸಿಬಂದಿಗಾಗಿ ಆರಂಭವಾದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ದರು. ಬ್ರಹ್ಮಾವರ ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ನ ಚೇರ್‌ಮನ್‌ ಪ್ರಕಾಶಚಂದ್ರ ಶೆಟ್ಟಿ, ಮೆಡಿಕಲ್‌ ಪ್ರಾಕ್ಟಿಷನರ್ ಫೋರಂನ ಮಾಜಿ ಅಧ್ಯಕ್ಷ ಡಾ| ಯೋಗೀಶ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. 

ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಡಾ| ಪ್ರಶಾಂತ್‌ ಶೆಟ್ಟಿ ಸ್ವಾಗತಿಸಿದರು. ಸೆಕೆಂಡ್‌ ಇನ್‌ ಕಮಾಂಡ್‌ ಕೆ.ಸಿ. ರಾಜೇಶ್‌ ಪ್ರಮಾಣವಚನ ಬೋಧಿ ಸಿದರು. ಡೆಪ್ಯುಟಿ ಕಮಾಂಡೆಂಟ್‌ ರಮೇಶ್‌ ವಂದಿಸಿ ದರು. ಹೈಟೆಕ್‌ ಪ್ಯಾರಾ ಮೆಡಿಕಲ್‌ ಕಾಲೇಜಿನ ಮ್ಯಾನೇಜರ್‌ ಸಾಯಿನಾಥ ಉದ್ಯಾವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next