Advertisement

Holiday ಸಂಭ್ರಮ ತಂದ ಆಪತ್ತು: ನಂಜನಗೂಡಿನಲ್ಲಿ ಯುವಕ ನೀರು ಪಾಲು

08:16 PM Mar 09, 2024 | Team Udayavani |

ನಂಜನಗೂಡು: ಹಾಲಿಡೇ ಸಂಭ್ರಮದಲ್ಲಿದ್ದ ಯುವಕ ಈಜಲು ತೆರಳಿ ನೀರುಪಾಲಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಹತ್ವಾಳು ಕಟ್ಟೆಯಲ್ಲಿ ನಡೆದಿದೆ.

Advertisement

ಮೈಸೂರಿನ ನಗರದ ಅಶೋಕಪುರಂ ನಿವಾಸಿಯಾದ ತೇಜಸ್ ಕುಮಾರ್(24) ವರ್ಷದ ಮೃತ ಯುವಕ. ಮಹಾ ಶಿವರಾತ್ರಿ ಹಬ್ಬ ಹಾಗೂ ವೀಕೆಂಡ್ ಹಿನ್ನಲೆ ತೇಜಸ್ ಕುಮಾರ್ ತನ್ನ ಸ್ನೇಹಿತ ನೊಂದಿಗೆ ಹುಲ್ಲಹಳ್ಳಿ ಸಮೀಪದ ಹತ್ವಾಳ್ ಕಟ್ಟೆ ಬಳಿ ಕಾಲುವೆಯ ಕಟ್ಟೆ ಮೇಲೆ ಮಾತಾನಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆ ಬಿದ್ದಿದ್ದಾನೆ ಸಹಾಯಕ್ಕೆ ಅಕ್ಕಪಕ್ಕದ ರೈತರು ಹಗ್ಗ ನೀಡಿ ಕಾಪಾಡಲು ಯತ್ನಿಸಿದರು ನೀರಿನ ರಭಸಕ್ಕೆ ಕಾಪಾಡಲು ಸಾಧ್ಯವಾಗದೆ ನೀರು ಪಾಲಾಗಿದ್ದಾನೆ.

ತೇಜಸ್ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಸಿಬ್ಬಂದಿಗಳಾದ ದೊಡ್ಡಯ್ಯ, ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮೈಸೂರು ಶವಗಾರಕ್ಕೆ ಕೊಂಡೊಯ್ಯಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next