Advertisement

Holehonnur :ಬಸ್ ನಿಲ್ದಾಣದಲ್ಲೇ ಮಹಿಳೆಯ 81 ಗ್ರಾಂ ಚಿನ್ನಾಭರಣ ಮಾಯ!!

08:07 PM Feb 29, 2024 | Vishnudas Patil |

ಹೊಳೆಹೊನ್ನೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಖತರ್ನಾಕ್ ಗಳಿಬ್ಬರು ಮಹಿಳೆಯೊಬ್ಬರ 81 ಗ್ರಾಂ ಚಿನ್ನಾಭರಣವನ್ನು ಲೂಟಿ ಮಾಡಿದ ಘಟನೆ ಫೆ.27 ರಂದು ನಡೆದಿದೆ.

Advertisement

ಹಾರಹಳ್ಳಿಯ ಗೃಹಿಣಿ ಕುಸುಮ ಅರಹತೊಳಲು ಗ್ರಾಮಕ್ಕೆ ಹೋಗಲು ಶಿವಮೊಗ್ಗಕ್ಕೆ ಬಂದು ಕೈಮರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಾಗ ಇಬ್ಬರು ಅಪರಿಚಿತರು ಬಂದು ನಾವು ಪೊಲೀಸರು ಎಂದು ಹೇಳಿಕೊಂದು, ಇಲ್ಲಿ ತುಂಬಾ ಕಳ್ಳರು ಇದ್ದಾರೆ. ಇಷ್ಟೊಂದು ಒಡವೆ ಹಾಕಿಕೊಂಡು ಬಂದಿದ್ದೀರಿ. ಒಡವೆಯನ್ನು ಬಿಚ್ಚಿ ಬ್ಯಾಗಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಆಗ ಮಹಿಳೆ ತನ್ನ ಕೊರಳಲ್ಲಿದ್ದ 43 ಗ್ರಾಂ. ಮಾಂಗಲ್ಯಸರ, ಚೈನು ಮತ್ತು ಇನ್ನೊಂದು 38 ಗ್ರಾಂ ನ ಸರ  ಬಿಚ್ಚಿ ಕೊಟ್ಟಿದ್ದು, ಅಪರಿಚಿತರು ಈ ಪೇಪರಿಗೆ ಹಾಕಿ ಎಂದು ಮಡಚಿ ದುಂಡುಗೆ ಮಾಡಿ ಕೊಟ್ಟಿದ್ದಾರೆ.

ಅಹರತೊಳಲು ಕಡೆ ಬಸ್ಸನ್ನು ಹತ್ತಿ ಕುಸುಮ ಸರವನ್ನು ಕೊರಳಿಗೆ ಹಾಕಿ ಕೊಳ್ಳೋಣ ಎಂದು ಪೇಪ‌ರ್ ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಸಣ್ಣ ಸಣ್ಣ ಕಲ್ಲುಗಳು ಇರುವುದು ಕಂಡು ಗಾಬರಿಗೊಂಡಿದ್ದಾರೆ. ಎಲ್ಲಾ ಕಡೆ ನೋಡುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ. ಬ್ಯಾಗನ್ನೆಲ್ಲಾ ಹುಡುಕಾಡಿದರೂ ಸರಗಳು ಕಾಣಿಸಲಿಲ್ಲ.

ಆಭರಣಗಳನ್ನು ಬಿಚ್ಚಿಸಿ ಪೇಪರ್ ನಲ್ಲಿ ಹಾಕುವ ರೀತಿ ನಟನೆ ಮಾಡಿ ಮಹಿಳೆಗೆ ಮೋಸ ಮಾಡಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟು 3,28,000 ರೂ. ಮೌಲ್ಯದ 81 ಗ್ರಾಂ ಚಿನ್ನಾಭರಣವನ್ನ ಪೊಲೀಸರಂತೆ ನಟಿಸಿ ವಂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next