Advertisement

ಬಡ ಪ್ರತಿಭಾನ್ವಿತ ಹುಡುಗಿಗೆ ಹೃದಯಲ್ಲಿ ರಂಧ್ರ: ಶಸ್ತ್ರಚಿಕಿತ್ಸೆ ನೆರವಿಗೆ ಮನವಿ

04:54 PM Oct 23, 2022 | Team Udayavani |

ಕಲಬುರಗಿ: ಇಲ್ಲಿನ ಬಸವ ನಗರದ ನಿವಾಸಿ ಆಟೋ ಚಾಲಕನ ಮಗಳು ಹನ್ನೇರಡು ವರ್ಷದ ಸಂಜನಾ ಶ್ರೀಮಂತ ವಿದ್ಯಾರ್ಥಿನಿಗೆ ಹೃದಯದಲ್ಲಿ ರಂಧ್ರವಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ.

Advertisement

ಬೆಂಗಳೂರು ಜಯದೇವ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕಿದ್ದು, ಬಡ ಕುಟುಂಬ ಬೆಂಗಳೂರಿಗೆ ಹೋಗೋದು ಕಷ್ಟವಾಗಿದೆ. ಹೀಗಾಗಿ ಸಂಜನಾಳ ತಂದೆ ಶ್ರೀಮಂತ ಮಾವಿನ ಹಾಗೂ ತಾಯಿ ಅನೀತಾ ಮಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.

ವೈದ್ಯರು ಚಿಕಿತ್ಸೆ ತುರ್ತಾಗಿ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟದಾಯಕವಾಗಿದೆ. ಪ್ರಯತ್ನ ಮಾಡುವುದು ತಮ್ಮಿಚ್ಚೆ ಮುಂದಿನದ್ದು ದೈವಿಚ್ಚೆ ಎಂದಿದ್ದಾರೆ.

ಬಡ ಆಟೋ ಚಾಲಕರ ಕಷ್ಟ ಹಾಗೂ ಬಡತನ ಕಂಡ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರು ಆಗಿರುವ ಕೆಕೆಆರ್ ಡಿಬಿ ಅಧ್ಯಕ್ಷರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಶಸ್ತ್ರಚಿಕಿತ್ಸೆ ಚಿಕಿತ್ಸೆ ಉಚಿತವಾಗುತ್ತದೆ.‌ ಆದರೆ ಇತರ ಖರ್ಚು ವೆಚ್ಚಗಳು ಬರುತ್ತವೆ. ವಿದ್ಯಾರ್ಥಿನಿ ಸಂಜನಾ ಪ್ರತಿಭಾನ್ವಿತೆ ಹೊಂದಿದ್ದು ಹಾಗೂ ಕುಟುಂಬ ಸಂಕಷ್ಟ ಕಂಡು ವೈಯಕ್ತಿಕವಾಗಿ ಸಹಾಯ ಕಲ್ಪಿಸಲಾಗಿದೆ ಎಂದು ಅಪ್ಪುಗೌಡ ಈ ಸಂದರ್ಭದಲ್ಲಿ ತಿಳಿಸಿದರು.

Advertisement

ಸಹಾಯ ಮಾಡಲಿಚ್ಚಿಸುವರು ಅನಿತಾ ತಂದೆ ಪರಶುರಾಮ

ಬ್ಯಾಂಕ್ ಖಾತೆ ನಂ 40342631166

ಎಸ್ ಬಿಐ ಹುಸೇನ್ ಗಾರ್ಡನ್ ಶಾಖೆಯ ಖಾತೆಗೆ ಆರ್ಥಿಕ ಸಹಾಯ ಕಲ್ಪಿಸಬಹುದು ಎಂದು ಕುಟುಂಬದವರು ಕೋರಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ 9663934315 ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next