Advertisement

ಹಾಜರಿಯಲ್ಲಿ ಸಹಿ ಮಾಡಿ ಕರ್ತವ್ಯಕ್ಕೆ ಗೈರು : ಹೊಳಲು ವೈದ್ಯಾಧಿಕಾರಿಯ ಕಳ್ಳಾಟಕ್ಕೆ ಆಕ್ರೋಶ

07:19 PM May 10, 2021 | Team Udayavani |

ಮಂಡ್ಯ: ತಾಲೂಕಿನ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಎಂ.ವಿ.ರವಿಕುಮಾರ್ ಕಳೆದ ಐದು ದಿನಗಳಿಂದ ಗೈರಾಗಿದ್ದು, ಹೊಳಲು ಗ್ರಾಮಸ್ಥರು ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದಾರೆ.

Advertisement

ಕಳೆದ 5 ದಿನಗಳಿಂದ ವೈದ್ಯ ರವಿಕುಮಾರ್ ಆಸ್ಪತ್ರೆಗೆ ಬಾರದಿದ್ದರೂ ಹಾಜರಾಗಿ ಪುಸ್ತಕದಲ್ಲಿ ಮೇ 11ರವರೆಗೂ ಸಹಿ ಹಾಕಿ ನಾಪತ್ತೆ ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಎಚ್.ಡಿ.ರವಿಕುಮಾರ್ ಮತ್ತು ಕೆಲ ಸದಸ್ಯರು ಆಸ್ಪತ್ರೆ ಬಳಿ ತೆರಳಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ, ವೈದ್ಯರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ವೈದ್ಯರನ್ನು ಬದಲಿಸುವಂತೆ ಆಗ್ರಹಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಅಭಿನಂದನ್ ಮಾತನಾಡಿ, ಈ ಕೋವಿಡ್ ಸಂದರ್ಭದಲ್ಲೂ ಸಹ ಆಸ್ಪತ್ರೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಲಸಿಕೆ ಸಹ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೂ ಒಂದು ಮಾಸ್ಕ್ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ, ತಾಲೂಕು ವೈದ್ಯಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರು. ದೂರಿನ ನಂತರ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ಜವರೇಗೌಡ ಅವರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ :ಮೇ. 11ರಿಂದ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ; ಕಾರವಾರ ಜಿಲ್ಲಾಧಿಕಾರಿ 

Advertisement

ಡಾ.ಜವರೇಗೌಡ ಮಾತನಾಡಿ, ವೈದ್ಯರ ಗೈರು ಹಾಜರಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಿಸ್ತು ಕ್ರಮ ಜರುಗಿಸುವಂತೆ ಡಿಎಚ್‌ಒ ಅವರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಮಾಜಿ ಸದಸ್ಯ ಸಂತೋಷ್ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next