Advertisement

ಜಲಮೂಲ ರಕ್ಷಣೆಗೆ ಆದ್ಯತೆ

03:28 PM May 29, 2020 | Naveen |

ಹೊಳಲ್ಕೆರೆ: ನೂರು ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿನ ಜಲಮೂಲಗಳ ರಕ್ಷಣೆಗೆ ಆದ್ಯತೆ ನೀಡಿದೆ. ನೀರಿನ ಸಂರಕ್ಷಣೆ ಮಾಡದಿದ್ದಲ್ಲಿ ಜೀವಸಂಕುಲದ ಬದುಕು ದುಸ್ತರವಾಗಲಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

Advertisement

ತಾಲೂಕಿನ ಮಲ್ಲಾಡಿಹಳ್ಳಿ-ಶಿವಪುರ ಮಾರ್ಗದಲ್ಲಿ ಹರಿಯುವ ಹಿರೇಹಳ್ಳದ ನೀರು ತಡೆಗಟ್ಟಲು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್‌ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಹಿರೇಹಳ್ಳ ರೈತರ ಜೀವನಾಡಿಯಾಗಿದ್ದು, ಮಳೆಗಾಲದಲ್ಲಿ ಸಾಕಷ್ಟು ನೀರು ಹಳ್ಳದಲ್ಲಿ ಹರಿದು ಹೋಗುತ್ತದೆ. ಆ ನೀರಿನ ಬಳಕೆಗೆ ಬ್ಯಾರೇಜ್‌ ನಿರ್ಮಿಸಲಾಗುತ್ತಿದೆ. ಗಂಗಸಮುದ್ರ, ರಾಮಗಿರಿ, ಹೊಸೂರು, ತಾಳಿಕಟ್ಟೆ, ಹನುಮಲಿ, ದೊಗ್ಗನಾಳ್‌, ಮಲ್ಲಾಡಿಹಳ್ಳಿ, ಶಿವಪುರ ಭಾಗದಲ್ಲಿ ಹರಿಯುವ ಹಿರೇಹಳ್ಳ ನೂರಾರು ಗ್ರಾಮಗಳ ಮೂಲಕ ಶಾಂತಿಸಾಗರವನ್ನು ಸೇರುತ್ತದೆ. ನೀರಿನ ಸದ್ಬಳಕೆಗೆ ಅಲ್ಲಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗುತ್ತದೆ. ಇದರಿಂದ ತೋಟಗಾರಿಕೆ ಕೃಷಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಪಿ. ರಮೇಶ್‌, ತಾಪಂ ಸದಸ್ಯೆ ಗಿರಿಜಾ ಅಜ್ಜಯ್ಯ, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್‌. ಶಿವಕುಮಾರ್‌, ಮುಖಂಡರಾದ ಪರಮೇಶ್ವರಪ್ಪ, ಮರುಳಸಿದ್ಧೇಶ್ವರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next