Advertisement

ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

09:15 PM May 17, 2021 | Team Udayavani |

ನವದೆಹಲಿ: ರಾಜಕೀಯ ನಾಯಕರು ಕೊರೊನಾ ಸೋಂಕಿತರಿಗೆ ನೀಡಲಾಗುವ ಔಷಧ ಸಂಗ್ರಹಿಸಿ ಇರಿಸಿದ್ದಾರೆ ಎಂಬ ಬಗ್ಗೆ “ಖಚಿತ’ವಲ್ಲದ ಮತ್ತು ತಪ್ಪು ಮಾಹಿತಿಯಿಂದ ಕೂಡಿದ ತನಿಖೆ ನಡೆಸಲಾಗಿದೆ. ಹೀಗೆಂದು ದೆಹಲಿ ಪೊಲೀಸ್‌ ವಿಭಾಗದ ಅಪರಾಧ ವಿಭಾಗವನ್ನು ದೆಹಲಿ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

Advertisement

ಜತೆಗೆ, ರಾಜಕೀಯ ಪಕ್ಷಗಳ ಮುಖಂಡರು ಅಂಥ ಔಷಧಗಳನ್ನು ಸಂಗ್ರಹಿಸಿಟ್ಟಿದ್ದರೆ, ಕೂಡಲೇ ಅದನ್ನು ದೆಹಲಿ ಆರೋಗ್ಯ ಇಲಾಖೆಗೆ ವಾಪಸ್‌ ನೀಡಬೇಕು ಎಂದು ನ್ಯಾ.ವಿಪಿನ್‌ ಸಾಂ ಮತ್ತು ನ್ಯಾ.ಜಸ್ಮೀರ್ ಸಿಂಗ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಸೋಮವಾರ ತಾಕೀತು ಮಾಡಿದೆ.

ಈ ಸಂದರ್ಭದಲ್ಲಿ ದೆಹಲಿ ಪೊಲೀಸರ ಪರ ವಕೀಲರು, ರಾಜಕೀಯ ಮುಖಂಡರ ಹೇಳಿಕೆ ದಾಖಲಿಸಿ ತನಿಖೆ ಪೂರ್ಣಗೊಳಿಸಲು ಆರು ವಾರಗಳ ಅವಕಾಶ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ : ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಶ್ರೀನಿವಾಸ್‌ಗೆ ಕ್ಲೀನ್‌ ಚಿಟ್‌:
ಕಾಂಗ್ರೆಸ್‌ ನಾಯಕ, ಕನ್ನಡಿಗ ಬಿ.ವಿ.ಶ್ರೀನಿವಾಸ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಬಳಿ ಯಾವುದೇ ಔಷಧ ಅಥವಾ ಆಕ್ಸಿಜನ್‌ನ ದಾಸ್ತಾನು ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್‌ ಅಧಿಕಾರಿಗಳು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಶ್ರೀನಿವಾಸ್‌ ಬಿ.ವಿ, ಹರೀಶ್‌ ಖುರಾನಾ, ಸಂಸದ ಗೌತಮ್‌ ಗಂಭೀರ್‌, ಆಪ್‌ನ ದಿಲೀಪ್‌ ಪಾಂಡೆ, ಮಾಜಿ ಸಂಸದ ಶಾಹಿದ್‌ ಸಿದ್ಧಿಕಿ ಅವರನ್ನು ವಿಚಾರಣೆ ನಡೆಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next