Advertisement

ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಜನನಾಯಕನನ್ನಾಗಿ ಮಾಡಿತ್ತು

09:42 AM Oct 01, 2019 | keerthan |

ಬೆಂಗಳೂರು: ಎಸ್ ಟಿ ಸೋಮಶೇಖರ್ ರದ್ದು ನಾಲಿಗೆಯಾ ಅಥವಾ ಬೇರೆನಾ ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಜನನಾಯಕನನ್ನಾಗಿ ಮಾಡಿತ್ತು ಎಂದು ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ಎಚ್ ಎಂ ರೇವಣ್ಣ ವಾಗ್ದಾಳಿ ನಡೆಸಿದರು.

Advertisement

ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್ ಬಿ ಎಂ ಮೂವರು ಆಡಿದ ಆಟ ಗೊತ್ತಿಲ್ವಾ? ಸೋಮಶೇಖರ್, ಭೈರತಿ, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ರಿ ಈಗ ನಾಲಿಗೆಗೆ ಏನಾಗಿದೆ.? ಎಲ್ಲಾ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದ್ರಾ ಮಾನ ಮರ್ಯಾದೆ ಇದೆಯಾ? ಎಂದು ಎಚ್ ಎಂ ರೇವಣ್ಣ ಅನರ್ಹರ ವಿರುದ್ಧ ಹರಿಹಾಯ್ದರು.

ಮುಂದೆ ಮಾತನಾಡಿದ ಅವರು ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಮಾತನಾಡ್ತೀರಲ್ಲ. ಸಿದ್ದರಾಮಯ್ಯ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡ್ತೀರಲ್ಲ ನಾಚಿಕೆ ಆಗಲ್ವಾ ಎಂದು ಖಾರವಾಗಿ ನುಡಿದರು.

ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸ್ತೀವಿ ಅಂದಿರಲ್ಲ. ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯೋದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಚ್ ಎಂ ರೇವಣ್ಣ ಹೆಳಿದರು.

Advertisement

Udayavani is now on Telegram. Click here to join our channel and stay updated with the latest news.

Next