Advertisement

ಎಚ್‌.ಕೆ.ಪಾಟೀಲ್‌, ಸಚಿವ ಸುಧಾಕರ್‌ ಟ್ವೀಟ್‌ ವಾರ್‌

10:19 PM Mar 22, 2020 | Lakshmi GovindaRaj |

ಬೆಂಗಳೂರು: ಕೋವಿಡ್-‌19 ಸೋಂಕಿತರು ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವವರ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್‌ ನಡುವೆ ಟ್ವೀಟ್‌ ವಾರ್‌ ನಡೆದಿದೆ. ಕಳೆದ 2 ದಿನದಲ್ಲಿ ವಿದೇಶಗ ಳಿಂದ ಬೆಂಗಳೂರಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಸರ್ಕಾರ ಅವರನ್ನು ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಎಚ್‌.ಕೆ.ಪಾಟೀಲ್‌ ಟ್ವೀಟ್‌ ಮಾಡಿದ್ದರು.

Advertisement

ಅವರ ಟ್ವೀಟ್‌ ಗೆ ಪ್ರತಿಕ್ರಿಯಿಸಿದ್ದ ಸುಧಾಕರ್‌, ವಿದೇಶಗಳಿಂದ ಅಷ್ಟೊಂದು ಪ್ರಮಾಣದಲ್ಲಿ ಜನರು ಆಗಮಿಸುತ್ತಿಲ್ಲ. ಹಿರಿಯ ನಾಯಕರಿಗೆ ಸಂಖ್ಯೆಯ ಸಮಸ್ಯೆ ಇದ್ದ ಹಾಗಿದೆ ಎಂದು ಟಾಂಗ್‌ ನೀಡಿದ್ದರು. ಇದಕ್ಕೆ ಪಾಟೀಲ್‌ ಖಾರವಾಗಿ ಪ್ರತಿಕ್ರಿಯಿಸಿ, ಮಾಹಿತಿ ಕೊರತೆಯಿಂದ ಹೇಳಿದ್ದಲ್ಲ. ಇಂಥ ಗಂಭೀರ ಸ್ಥಿತಿಯಲ್ಲಿ ಸತ್ಯ ಹೇಳಿ, ಸತ್ಯ ಹೇಳದಿದ್ದರೆ ಸರ್ಕಾರದ ದಾಖಲೆಗ ಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next