Advertisement
ಕಳೆದ ವರ್ಷ ಶ್ರೀನಗರದ ಆಸ್ಪತ್ರೆಯಿಂದ ಲಷ್ಕರ್-ಎ-ತೊಯ್ಬಾ ಉಗ್ರ ನವೀದ್ ಜಟ್ನನ್ನು ಎಸ್ಕೇಪ್ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವನೇ ಈ ಹಿಲಾಲ್ ಅಹ್ಮದ್. ತಪಾಸಣೆಗಾಗಿ ಜಟ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹೇಗೆ ಆತನನ್ನು ಪರಾರಿಯಾಗಿಸುವುದು ಎಂಬ ಬಗ್ಗೆ ಸಂಪೂರ್ಣ ಸಂಚು ರೂಪಿಸಿದ್ದು ಈತನೇ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಈತನಿಗಾಗಿ ಹಲವು ತಿಂಗಳುಗಳಿಂದ ಭದ್ರತಾ ಪಡೆ ಬಲೆಬೀಸಿತ್ತು. ಮಂಗಳವಾರ ಈತನ ಇರುವಿಕೆ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದಾಗ, ಉಗ್ರರು ಗುಂಡು ಹಾರಿಸಿದ್ದು, ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಯೋಧ ಬಲ್ಜೀತ್ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. Advertisement
ಲಷ್ಕರ್ ಉಗ್ರನ ಎಸ್ಕೇಪ್ ಮಾಡಿಸಿದ್ದ ಹಿಲಾಲ್ ಎನ್ಕೌಂಟರ್ಗೆ ಬಲಿ
12:30 AM Feb 13, 2019 | |
Advertisement
Udayavani is now on Telegram. Click here to join our channel and stay updated with the latest news.