Advertisement
ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ಲೋಕಸಭೆ ಚುನಾವಣೆ ಹತ್ತಿರವಿದ್ದಾಗಲೇ ನಡೆಯುತ್ತವೆ. ಇತಿಹಾಸವನ್ನು ನೋಡಿದರೆ, ಯಾವ ಪಕ್ಷ ವಿಧಾನಸಭೆಯಲ್ಲಿ ಬಹು ಘಮತ ಪಡೆ ಯುತ್ತದೋ, ಅದೇ ಪಕ್ಷವೇ ಲೋಕಸಭೆ ಯಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದಿರುವುದು ಕಾಣಿಸುತ್ತದೆ. ಹೀಗಾಗಿ, ಲೆಕ್ಕಾಚಾರದ ಪ್ರಕಾರ, 2018ರ ಡಿಸೆಂಬರ್ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವೇ ಲೋಕಸಭಾ ಚುನಾವಣೆಯನ್ನೂ ಮೇಲುಗೈ ಸಾಧಿಸಬೇಕು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಅದರ ಪರ್ಫಾರ್ಮೆನ್ಸ್ ಏನೂ ಹೇಳಿಕೊಳ್ಳುವಂತೆ ಇರಲಿಲ್ಲ. 200 ಸ್ಥಾನಗಳ ವಿಧಾನಸಭೆಯಲ್ಲಿ 100 ಸ್ಥಾನ ಪಡೆದರೆ ಬಹುಮತ ಸಿಗುತ್ತದೆ. ಆದರೆ ಕಾಂಗ್ರೆಸ್ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸಿ, ಹಾಗೂ ಹೀಗೂ 101 ಸ್ಥಾನಗಳನ್ನು ಪಡೆಯಿತು. ಹಾಗಾಗಿ, ಬಿಜೆಪಿ ರಾಜ್ಯದಲ್ಲಿ ದುರ್ಬಲವಾಗಿದೆ ಎಂದೇನೂ ಇಲ್ಲ.
Related Articles
Advertisement
ಹೊಸ ಮುಖಗಳನ್ನು ಹುಡುಕುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಬಿಜೆಪಿಯ ಮತ್ತೂಬ್ಬ ನಾಯಕ. ಹಾಗಿದ್ದರೆ ಬಿಜೆಪಿಗೆ ಈ ಬಾರಿಯ ಚುನಾವಣೆ ವಿಪರೀತ ಕಷ್ಟವಾಗಲಿದೆಯೇ? “ಇಲ್ಲ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಅಶೋಕ್ ಚೌಧರಿ. ಮೋದಿ ಮೇಲೆ ಮುನಿಸಿಲ್ಲ, ರಾಜೆಯನ್ನು ಬಿಡೋಲ್ಲ: ರಾಜಸ್ಥಾನದ ಜನರಿಗೆ ಈಗಲೂ ಮೋದಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎನ್ನಲಾಗುತ್ತಿ¤ದೆ. 2018ರ ವಿಧಾನಸಭಾ ಚುನಾವಣೆಗಳಲ್ಲೂ ಜನರು “ಮೋದಿ ತುಝೆÕà ಬೇರ್ ನಹೀ, ವಸುಂಧರಾ ತೇರಿ ಖೈರ್ ನಹೀ'(ನಿಮ್ಮ ಮೇಲೆ ನಮಗೆ ಮುನಿಸಿಲ್ಲ ಮೋದಿ. ಆದರೆ ವಸುಂಧರಾ ರಾಜೆಯನ್ನು ಮಾತ್ರ ಬಿಡುವುದಿಲ್ಲ) ಎಂದು ಘೋಷಣೆ ಕೂಗುತ್ತಿದ್ದದ್ದು ಸಹಜವಾಗಿತ್ತು. ಹಿರಿಯ ಪತ್ರಕರ್ತ, ಚುನಾವಣಾ ಪರಿಣತ ನಾರಾಯಣ ಬರೇತ್ ಅವರು “ಮೋದಿ ಅಲೆ 2014ರಲ್ಲಿದ್ದಷ್ಟು ಪ್ರಬಲವಾಗಿ ಇಲ್ಲದಿರಬಹುದು, ಆದರೆ ಅಲೆಯಂತೂ ಇದೆ’ ಎನ್ನುತ್ತಾರೆ. ಭಾರತೀಯ ಟ್ರೈಬಲ್ ಪಾರ್ಟಿ: ಕಾಂಗ್ರೆಸ್ ಈ ಬಾರಿ ಬುಡಕಟ್ಟು ಜನರ ಪ್ರಾಬಲ್ಯವಿರುವ ಮೇವಾರ್ ಪ್ರದೇಶದ ನಾಲ್ಕು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಭಾರತೀಯ ಟ್ರೈಬಲ್ ಪಾರ್ಟಿಯ ಉಗಮ, ಅದಕ್ಕೆ ಈಗ ಬಹುದೊಡ್ಡ ಅಡಚಣೆಯಾಗಿ ಬದಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಟಿಪಿ ಯೋಚಿಸುತ್ತಿದೆ. “ಈ ಬಾರಿಯ ಚುನಾವಣೆಯನ್ನು ನಾವು ಅಶೋಕ್ ಗೆಹೊÉàಟ್ ಸರ್ಕಾರದ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎದುರಿಟ್ಟುಕೊಂಡು ಎದುರಿಸಲಿದ್ದೇವೆ. ಮೋದಿ ಕ್ಯಾಬಿನೆಟ್ನಲ್ಲಿ ರಾಜಸ್ಥಾನದ ಐವರು ಸಚಿವರಿದ್ದರು, ಅವರಿಂದ ರಾಜ್ಯಕ್ಕೆ ಲಾಭವಾಗಿಲ್ಲ’ ಅಂತಾರೆ ಕಾಂಗ್ರೆಸ್ ವಕ್ತಾರ ಸತ್ಯೇಂದ್ರ ರಾಘವ್. ತಗ್ಗಿದ ವಸುಂಧರಾ ರಾಜೆ ಧ್ವನಿ: ರಾಜಸ್ಥಾನ ಬಿಜೆಪಿಗೆ ಪರ್ಯಾಯ ಹೆಸರಾಗಿದ್ದವರು ವಸುಂಧರಾ ರಾಜೆ ಅವರು. ಎರಡು ಬಾರಿ ಸಿಎಂ ಆಗಿ, ಐದು ಬಾರಿ ಸಂಸದೆ ಮತ್ತು ಐದು ಬಾರಿ ಶಾಸಕಿಯಾಗಿ ಮಿಂಚಿದ್ದ ರಾಜೆ ರಾಜಸ್ಥಾನ ರಾಜಕೀಯದ ಶಕ್ತಿಕೇಂದ್ರವಾಗಿದ್ದವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ, ಪ್ರಚಾರ ಕಾರ್ಯಗಳಲ್ಲೆಲ್ಲ ಪ್ರಮುಖ ನಿರ್ಧಾರ ರಾಜೆಯವರದ್ದೇ ಆಗಿತ್ತು. ಆದರೆ 2018ರ ವಿಧಾನಸಭಾ ಚುನಾವಣೆಯ ಸೋಲಿನ ನಂತರ, ರಾಜೆ ಅವರ ಧ್ವನಿ ತಗ್ಗಿದೆ. ರಾಜೆ ಈಗ ಹೈಕಮಾಂಡ್ ಹೇಳಿದಂತೆ ಕೇಳುತ್ತಿದ್ದಾರೆ. “ಮೋದಿ ಮತ್ತು ಅಮಿತ್ ಶಾ ಜೋಡಿ ಈಗ ಅನ್ಯ ನಾಯಕರತ್ತ ಚಿತ್ತ ಹರಿಸಿದ್ದಾರೆ. ದೆಹಲಿ ನಾಯಕತ್ವದಿಂದಲೂ ಅವರಿಗಷ್ಟು ಬೆಂಬಲವಿಲ್ಲ’ ಎನ್ನುತ್ತಾರೆ ಪಕ್ಷದ ನಾಯಕರೊಬ್ಬರು. “ರಾಜೆ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕೇಂದ್ರ ತಂಡದ ಭಾಗವಾದರೆ ಅವರ ಆಡಳಿತ ಕೌಶಲವನ್ನು ಕೇಂದ್ರಮಟ್ಟದಲ್ಲಿ ಬಳಸಿಕೊಳ್ಳಬಹುದು ಎನ್ನುವ ಇರಾದೆ ಮೋದಿ-ಶಾ ಜೋಡಿಗಿದೆ. ಆದರೆ ರಾಜಸ್ಥಾನವನ್ನು ಬಿಟ್ಟುಹೋಗಲು ರಾಜೆ ಸಿದ್ಧರಿಲ್ಲ. ಬದಲಾಗಿ ತಮ್ಮ ಮಗ-ಪ್ರಸಕ್ತ ಸಂಸದ ದುಶ್ಯಂತ್ ಸಿಂಗ್ ಝಾಲ್ವರ್-ಬರನ್ ಸ್ಥಾನದಿಂದ ಸ್ಪರ್ಧಿಸಬೇಕು ಎಂದು ರಾಜೆ ಬಯಸುತ್ತಾರೆ’ ಎಂದೂ ಹೇಳುತ್ತಾರವರು. ಗಾಂಧಿನಗರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಜಾಗದಲ್ಲಿ ಅಮಿತ್ ಶಾ ಸ್ಪರ್ಧಿಸಲಿದ್ದಾರೆ. ಅಂತೂ ಬಿಜೆಪಿಯಲ್ಲಿ ಅಡ್ವಾಣಿಯವರ ಅವಧಿ ಅಧಿಕೃತವಾಗಿ ಕೊನೆಗೊಂಡಿದೆ.
– ಅಶುತೋಷ್ ಅಶುತೋಷ್ ಅವರೇ ಅಡ್ವಾಣಿಯವರಿಗೀಗ 91 ವರ್ಷವಾಗಿದೆ.ಅವರ ವಿಷಯ ಬಿಡಿ, ನಿಮ್ಮ ರಾಜಕಾರಣ ಆರಂಭವಾಗುವ ಮೊದಲೇ ಅಂತ್ಯವಾಯಿತಲ್ಲ?!
– ಅಮಿತೇಂದು ಮಜುಂದಾರ್