Advertisement

ಕೋದಂಡರಾಮ ಸನ್ನಿಧಿಯಲ್ಲಿ ನರಸಿಂಹ ಜಯಂತಿ- ಪೂಜೆ

07:35 PM May 10, 2020 | Naveen |

ಚಿಕ್ಕಮಗಳೂರು: ಹಿರೇಮಗಳೂರು ಶ್ರೀಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಅಂಗವಾಗಿ ದೇವರ ಮೂರ್ತಿಗೆ ಕ್ಷೀರಾಭಿಷೇಕದೊಂದಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು.

Advertisement

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ನೇತೃತ್ವದಲ್ಲಿ ಅರ್ಚಕ ವೈಷ್ಣವ ಸಿಂಹ ತಂಡದವರು ಸಾವಿರ ವರ್ಷ ಇತಿಹಾಸವಿರುವ ಯೋಗಾನರಸಿಂಹ ಸ್ವಾಮಿ ದೇವರಿಗೆ ಕ್ಷೀರಾಭಿಷೇಕ, ಅರಿಸಿನ ಅಭಿಷೇಕ ಮಾಡಿ ವಿವಿಧ ಮಂತ್ರ ಘೋಷದೊಂದಿಗೆ ಪುಷ್ಪಾಲಂಕಾರ ಮಹಾ ಮಂಗಳಾರತಿ ನೆರವೇರಿತು.

ಕೊರೊನಾ ಹಿನ್ನೆಲೆಯಲ್ಲಿ ಕೆಲವೇ ಭಕ್ತರ ಸಮ್ಮುಖದಲ್ಲಿ ಪೂಜಾ ವಿಧಿ- ವಿಧಾನ ಜರುಗಿತು. ಹಿರೇಮಗಳೂರು ಕಣ್ಣನ್‌ ಮಾತನಾಡಿ, ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಅಂಗವಾಗಿ ಸರ್ಕಾರದ ಆದೇಶದಂತೆ ಹೆಚ್ಚು ಭಕ್ತಾದಿಗಳನ್ನು ಜಮಾವಣೆ ಮಾಡದೆ. ಸಾಂಪ್ರದಾಯವಾಗಿ ನೆಡೆಯ ಬೇಕಾದಂತಹ ಪ್ರತಿಯೊಂದು ಶಾಸ್ತ್ರೋಕ್ತವಾದ ಕಾರ್ಯಕ್ರಮ ಸನ್ನಿಧಿಯಲ್ಲಿ ನೆಡೆದಿದೆ ಎಂದರು. ಅರ್ಚಕರಾದ ಮೋಹನ್‌, ಸಾಯಿನಂದನ್‌ ಅಯ್ಯಂಗಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next