Advertisement

ರಕ್ತದ ಪರಿಚಯ ಇಲ್ಲದವರಿಗೆ ರಕ್ತದ ಪರಿಚಯವಾಗಲು ಶುರುವಾಗಿದೆ!

02:35 PM Feb 14, 2018 | |

ಶಿರಸಿ:ರಕ್ತದ ಪರಿಚಯ ಇಲ್ಲದವರಿಗೆ ಈಗ ರಕ್ತದ ಪರಿಚಯವಾಗಲು ಶುರುವಾಗಿದೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಮತ್ತು ದೇಗುಲಗಳ ಭೇಟಿ ಕುರಿತು ವ್ಯಂಗ್ಯವಾಡಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಗಡೆ ‘ಚುನಾವಣೆ ಹತ್ತಿರ ಬಂದಿದ್ದು, ಕೋಟಾ ಹಿಂದುತ್ವವಾದಿಗಳು ಹುಟ್ಟಿಕೊಳ್ಳುತ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಅವರಿಗೆ ಟಾಂಗ್‌ ನೀಡಿದರು. 

‘ಹಿಂದುತ್ವ ನೆನಪಾದರೆ ಸಾಲದು,ಬಾಯಲ್ಲಿ ಹೇಳಿದರೆ ಸಾಲದು ಆಚರಣೆಗೆ ತನ್ನಿ’ ಎಂದು ಸವಾಲು ಹಾಕಿದರು. 

ರಾಹುಲ್‌ ರಾಜ್ಯದಲ್ಲಿ  ಓಡಾಡಿದಷ್ಟು ಬಿಜೆಪಿಗೆ ಒಳ್ಳೆಯದು. ರಾಹುಲ್‌ ನೋಡಿ  ಜನರಿಗೆ ಮನೋರಂಜನೆ ಸಿಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next