Advertisement

ಡಾ.ಪ್ರಭಾ ಅತ್ರೆಗೆ ಪಂ.ರಾಜ ಗುರು ರಾಷ್ಟ್ರೀಯ ಪ್ರಶಸ್ತಿ

06:25 AM Aug 18, 2017 | |

ಧಾರವಾಡ: ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ನೀಡುವ 2017ನೇ
ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನ ಖ್ಯಾತ ಗಾಯಕಿ, ಸ್ವರಯೋಗಿನಿ ಡಾ|ಪ್ರಭಾ ಅತ್ರೆ ಹಾಗೂ ಯುವ ಪ್ರಶಸ್ತಿಗೆ
ಸಾಂಗ್ಲಿ ಮೂಲದ ವಿದುಷಿ ಮಂಜೂಷಾ ಪಾಟೀಲ ಹಾಗೂ ಹುಬ್ಬಳ್ಳಿಯ ಕೃಷ್ಣೇಂದ್ರ ವಾಡೀಕರ ಭಾಜನರಾಗಿದ್ದಾರೆ.
 
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ರಾಷ್ಟ್ರೀಯ ಪ್ರಶಸ್ತಿ ಲಕ್ಷ ರೂ. ಮೊತ್ತ ಹೊಂದಿದ್ದರೆ, ಯುವ ಪ್ರಶಸ್ತಿ ತಲಾ 25 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಆ.24 ರಂದು ಸಂಜೆ 6 ಗಂಟೆಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದು,ಶಾಸಕ ಅರವಿಂದ
ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next