Advertisement

Hubli; ಕೋವಿಡ್ ವೇಳೆ ಹಿಂದೂಗಳ ಶವ ಸಂಸ್ಕಾರ ಮಾಡಿದ್ದು ಮುಸ್ಲಿಮರು…: ಸಂತೋಷ್ ಲಾಡ್

02:47 PM Jan 08, 2024 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಐಸಿಸ್ ಆಡಳಿತ ಎನ್ನುವುದಕ್ಕೆ ಇವರಿಗೆ ನಾಚಿಕೆಯಾಗಬೇಕು. ಪಾಕಿಸ್ತಾನದಲ್ಲಿ ನವಾಜ್ ಶರೀಫ್ ಮನೆಗೆ ಬಿರ್ಯಾನಿ ತಿನ್ನಲು ಹೋದವರು ಯಾರು ಎಂಬುದನ್ನು ಕೇಂದ್ರ ಸಚಿವರು ಹೇಳಲಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

Advertisement

ರಾಜ್ಯ ಸರ್ಕಾರ ಐಸಿಸ್ ನಂತೆ ಆಡಳಿತ ನಡೆಸುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಸಚಿವ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ವೇಳೆ ಹಿಂದೂಗಳ ಶವ ಸಂಸ್ಕಾರ ಮಾಡಿದ್ದು ಮುಸ್ಲಿಮರು, ಆಗ ಹಿಂದೂವಾದಿಗಳು ಎಲ್ಲಿ ಹೋಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿಎಂ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಕ್ಕೆ ಕೇಸ್ ಮಾಡಲಾಗಿದೆ. ಶ್ರೀಕಾಂತ ಪೂಜಾರಿ ಮಹಾನ್ ವ್ಯಕ್ತಿನಾ? ಆತನ ಹಿನ್ನೆಲೆ ಗೊತ್ತಿದ್ದರೂ ಬಿಜೆಪಿಯವರು ಆತನ ಹೋರಾಟಕ್ಕಿಳಿದಿದ್ದಾರೆ ಎಂದು ಸಂತೋಷ ಲಾಡ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next