Advertisement

ಹಿಂದೂ ನಾಯಕರು ಕೈ ಕಟ್ಟಿ ಕುಳಿತಿಲ್ಲ: ಶ್ರೀರಾಮುಲು

11:31 PM Feb 21, 2020 | Team Udayavani |

ಬಳ್ಳಾರಿ: ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದು ಘೋಷಣೆ ಕೂಗಿದಾಕ್ಷಣ ಯಾರೂ ದೊಡ್ಡ ಮನುಷ್ಯರಾಗಲ್ಲ. ಹಾಗಂತ ಹಿಂದೂ ನಾಯಕರು ಕೈ ಕಟ್ಟಿ ಕುಳಿತಿಲ್ಲ. ನಮಗೂ ಘೋಷಣೆ ಕೂಗಿಸೋದು ಗೊತ್ತು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನಕ್ಕೆ ಜಿಂದಾಬಾದ್‌ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಭಾರತದಲ್ಲಿ ಇದ್ದವರು ಭಾರತ್‌ ಮಾತಾಕಿ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್‌ ಕೀ ಜೈ ಅನ್ನಬಾರದು. ಪಾಕಿಸ್ತಾನಕ್ಕೆ ಜಿಂದಾಬಾದ್‌ ಎನ್ನುವವರನ್ನು ಕಾಂಗ್ರೆಸ್‌ ಮುಖಂಡರು ಬೆಂಬಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next