Advertisement

“ಧರ್ಮದ ಏಳಿಗೆಗೆ ಹಿಂದೂ ಸಂಘಟನೆಗಳು ದುಡಿಯಬೇಕು’

05:40 AM Jul 21, 2017 | |

ಸುರತ್ಕಲ್: ಹಿಂದೂ ಧರ್ಮದ ಏಳಿಗೆಗೆ ಹಿಂದೂ ಸಂಘಟನೆಗಳ ಅಗತ್ಯ ಇದೆ. ಅದಕ್ಕಾಗಿ ಹಿಂದೂ ಸಂಘಟನೆಗಳು ದುಡಿಯಬೇಕು ಎಂದು ಶ್ರೀಕ್ಷೇತ್ರದ ಅರ್ಚಕ  ಕೃಷ್ಣ ಮೂರ್ತಿ ಭಟ್‌ ಹೇಳಿದರು.

Advertisement

ಸುರತ್ಕಲ್‌ ನಗರ ವ್ಯಾಪ್ತಿಯ ಮಧ್ಯ ಸಮೀಪ ಹಿಂದೂ ಜಾಗರಣ ವೇದಿಕೆ ಖಡೆYàಶ್ವರಿ ನೂತನ ಘಟಕದ ಉದ್ಘಾಟನ ಕಾರ್ಯಕ್ರಮವು ಖಡೆYàಶ್ವರಿ ದೇವಸ್ಥಾನದಲ್ಲಿ ಜರಗಿದ್ದು, ಈ ಸಂದರ್ಭ ಅವರು ಮಾತನಾಡಿದರು.

ಸುರತ್ಕಲ್‌ ಹಿಂಜಾವೇ ನಗರ ಸಂಚಾಲಕ ಪುಷ್ಪರಾಜ್‌ ಕುಳಾಯಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆ ಮತ್ತು ಹಿಂದೂ ಸಮಾಜದ ರಕ್ಷಣೆ ಹಿಂದೂಗಳ ಜವಾಬ್ದಾರಿಯಾಗಿದ್ದು, ನಾವೆಲ್ಲ ಸೇರಿ ನಮ್ಮತನವನ್ನು ಉಳಿಸಿ ಕೊಳ್ಳಬೇಕಿದೆ ಎಂದರು. 

ಪ್ರಧಾನ ಭಾಷಣ ಮಾಡಿದ ಹಿಂಜಾವೇ ಕಾರ್ಯದರ್ಶಿ ಸುಭಾಷ್‌ ಪಡೀಲ್‌ ಮಾತನಾಡಿ, ಹಿಂದೂ ಜಾಗರಣ ವೇದಿಕೆ ದೇಶದ್ರೋಹಿಗಳ ವಿರುದ್ಧ ಹೋರಾಡಲಿದೆ ಎಂದರು. 

ಮಂಗಳೂರು ಮಹಾನಗರ ಸಹ ಸಂಚಾಲಕ ಬಾಲಕೃಷ್ಣ  ಮುಂಚೂರು ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ನಾವು ಬದ್ಧ ಎಂದರು.

Advertisement

ವಜ್ರಾಕ್ಷಿ ಶೆಟ್ಟಿ, ರಾಜೇಶ್‌, ನೂತನ ಘಟಕದ ಸಂತೋಷ್‌, ಪುಷ್ಪರಾಜ್‌, ಮಹೇಶ, ಸುಹಾನ್‌ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next