Advertisement

NIA;ಕೊಯಮತ್ತೂರು ಹಿಂದೂ ನಾಯಕನ ಹತ್ಯೆ ಕೇಸ್: ಪಿಎಫ್‌ಐ ಸದಸ್ಯನ ಆಸ್ತಿ ಜಪ್ತಿ

11:32 PM Jun 07, 2024 | Team Udayavani |

ಚೆನ್ನೈ: 2016ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಹಿಂದೂ ಮುನ್ನಾನಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯನ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಜಪ್ತಿ ಮಾಡಿದೆ.

Advertisement

ಚೆನ್ನೈನ ಪೂನಮಲ್ಲಿಯ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿ ಸುಬೈರ್‌ನ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಸುಬೈರ್, ಇತರ ಸಹ-ಆರೋಪಿಗಳೊಂದಿಗೆ ಕೊಯಮತ್ತೂರಿನ ಹಿಂದೂ ಫ್ರಂಟ್‌ನ ವಕ್ತಾರ ಸಿ ಶಶಿಕುಮಾರ್ ಅವರ ಭೀಕರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

2016 ಸೆಪ್ಟೆಂಬರ್ 22 ರಂದು ಪಕ್ಷದ ಕಚೇರಿಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಶಶಿಕುಮಾರ್‌ರನ್ನು ತುಡಿಯಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್ರ ವಿನಾಯಕ ದೇವಾಲಯದ ಎದುರು ಮಾರಣಾಂತಿಕವಾಗಿ ಕತ್ತರಿಸಿ ಹತ್ಯೆಗೈಯಲಾಗಿತ್ತು.

ಹತ್ಯೆಯಲ್ಲಿ ಭಾಗಿಯಾದ ಎಲ್ಲ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ದಾಖಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next