Advertisement

ದೇಶದ ಮಣ್ಣಿನಲ್ಲಿ ಹಿಂದುತ್ವದ DNA ಇದೆ:ಸ್ವಾಮಿ

12:28 PM Nov 14, 2017 | |

ನಾಸಿಕ್‌: ಹಿಂದೂಸ್ಥಾನ ಹಿಂದೂ ರಾಷ್ಟ್ರ ವಾಗಿದ್ದು, ಈ ದೇಶದ ಮಣ್ಣಿನಲ್ಲಿ ಹಿಂದುತ್ವದ ಡಿಎನ್‌ಎ ಇದೆ ಎಂದು ಇಲ್ಲಿ ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಹೇಳಿದ್ದಾರೆ.

Advertisement

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೇ ಹೊರತೂ ಅದಕ್ಕೆ ಅಡ್ಡಿಪಡಿಸಬಾರದು ಎಂದು ಕರೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲ ಸದಸ್ಯರಿಗೆ ತಿಹಾರ್‌ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಅಣಕವಾಡಿದ್ದಾರೆ.

ಸ್ವಾಮಿ ಅವರು ನಾಸಿಕ್‌ನ ಶ್ರೀ ರಾಧಾ ಮದನ್‌ ಗೋಪಾಲ ಇಸ್ಕಾನ್‌ ದೇವಾಲಯದಲ್ಲಿ ಭಗವದ್ಗೀತಾ ಪ್ರಜ್ಞಾಶೋಧ್‌ ಪರೀಕ್ಷಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ  ಮಾತನಾಡಿದರು. ವೇದಿಕೆಯಲ್ಲಿ ಶಾಸಕ ದೇವಯಾನಿ ಫರಾಂದೆ, ಮಂದಿರದ ವಿಶ್ವಶ§ ಶಿಕ್ಷಾಷ್ಟಕಮ್‌ ಪ್ರಭು ಅವರು ಉಪಸ್ಥಿತರಿದ್ದರು.

ಹಿಂದಿಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಅಯೋಧ್ಯೆ ಸೇರಿದಂತೆ ಮಥುರಾ ಮತ್ತು ವಾರಾಣಸಿಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ  ಶೀಘ್ರ ಹೈಕೋರ್ಟ್‌ ತನ್ನ 
ತೀರ್ಪು ಪ್ರಕಟಿಸಲಿದೆ. ಈ ಕೆಲಸದಲ್ಲಿ ಮುಸ್ಲಿಮರು ಕೂಡ ಸಹಕರಿಸ ಬೇಕು ಹಾಗೂ ಮಂದಿರ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಬೇಕು ಎಂದರು.

ಮೊಘಲರು  ಸುಮಾರು 750 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಆಳ್ವಿಕೆ ನಡೆಸಿದ್ದರು. ಇದರ ಹೊರತಾಗಿಯೂ ದೇಶದಲ್ಲಿ ಹಿಂದೂ ಧರ್ಮದ ಅಸ್ತಿತ್ವವು ದೃಢವಾಗಿ ನಿಂತಿದ್ದು, ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ರಾಜಸ್ಥಾನದ ಮಹಾರಾಣಾ ಪ್ರತಾಪ್‌ ಅವರಂಥ  ವಿವಿಧ ಯೋಧರ ಮೂಲಕ ಮಾಡಲಾದ ಯುದ್ಧಗಳು ಇದಕ್ಕೆ ಏಕಮಾತ್ರ ಕಾರಣವಾಗಿದೆ ಎಂದವರು ಹೇಳಿದರು.

Advertisement

ಹಿಂದೂ ಭಯೋತ್ಪಾದನೆ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಈ ಧರ್ಮದ ಧರ್ಮಗ್ರಂಥ ಭಗವದ್ದೀತೆ ಆಗಿದ್ದು, ಗೀತೆಯು ಭಯೋತ್ಪಾದನೆಯನ್ನು ಕಲಿಸುವುದಿಲ್ಲ. ಆದರೆ,  ನಿಜವಾದ ಹಿಂದೂ ಭಯೋತ್ಪಾದನೆ ಏನೆಂಬುದು, ಚಿದಂಬರಂ ಜೈಲಿಗೆ ಹೋದ ಬಳಿಕ ಅನುಭವವಾಗಲಿದೆ ಎಂದು ಅವರು ಕಿಡಿಕಾರಿದರು.

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರಿಗೆ ತಿಹಾರ್‌ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು. ಪಿ. ಚಿದಂಬರಂಗೆ ಹಿಂದೂ ಭಯೋತ್ಪಾದನೆ ಹೇಳಲು ಹಕ್ಕಿಲ್ಲ. ನಾನು ಧರ್ಮ-ಸಂಸ್ಕೃತಿಯ ರಕ್ಷಕನಾಗಿದ್ದೇನೆ ಮತ್ತು ಸತ್ಯವನ್ನು ಹೇಳುತ್ತೇನೆ. ದೇಶದಲ್ಲಿರುವ ಎಲ್ಲಾ ಭ್ರಷ್ಟಾಚಾರಿಗಳು ಹಾಗೂ ಜಾತ್ಯತೀತರಿಗೆ ಜೈಲಿನಲ್ಲಿ ವ್ಯವಸ್ಥೆ ಮಾಡಬೇಕಾದ ಆವಶ್ಯಕತೆಯಿದೆ ಎಂದು ಸ್ವಾಮಿ ಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next