Advertisement

Hindalaga Jail: ತಂಬಾಕು, ಗುಟ್ಕಾ ಕೊಡಿ: ಬೆಳಗಾವಿ ಜೈಲು ಕೈದಿಗಳ ರಂಪ

12:54 AM Sep 02, 2024 | Team Udayavani |

ಬೆಳಗಾವಿ: ಕಾರವಾರ ಜೈಲಿನಲ್ಲಿ ತಂಬಾಕು ಸಿಗುತ್ತಿಲ್ಲ ಎಂದು ಆಕ್ರೋಶಗೊಂಡು ಕೈದಿಗಳಿಬ್ಬರು ರಂಪಾಟ ಮಾಡಿ ಕಲ್ಲಿನಿಂದ ತಲೆಗೆ ಜಜ್ಜಿಕೊಂಡ ಘಟನೆ ಮಾಸುವ ಮುನ್ನವೇ, ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೂ ತಂಬಾಕು, ಪಾನ್‌ ಬೀಡಾ, ಗುಟ್ಕಾ ನೀಡುವಂತೆ ಆಗ್ರಹಿಸಿ ಜೈಲಿನ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ರವಿವಾರ ಬೆಳಗಿನ ಉಪಾಹಾರ ತ್ಯಜಿಸಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದರಿಂದ ವಿವಾದಕ್ಕೀಡಾದ ಬಂಧಿಖಾನೆ ಇಲಾಖೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೂ ಕಠಿನ ನಿಯಮ ಜಾರಿ ಮಾಡಿದೆ. ಜೈಲಿನಲ್ಲಿ ಪೂರೈಕೆ ಆಗುತ್ತಿದ್ದ ಗುಟ್ಕಾ, ತಂಬಾಕು, ಪಾನ್‌ ಬೀಡಾ ನಿಷೇ ಧಿಸಿದ್ದರಿಂದ ತಮಗೆ ಊಟ, ಉಪಾಹಾರ ಬೇಡ. ಆದರೆ ಕಡ್ಡಾಯವಾಗಿ ತಂಬಾಕು, ಪಾನ್‌ ಬೀಡಾ ನೀಡುವಂತೆ ಆಗ್ರಹಿಸಿದ್ದಾರೆ.

ತಂಬಾಕು, ಪಾನ್‌ ಬೀಡಾ ಇಲ್ಲದಿದ್ದರೆ ನಾವು ಬದುಕುವುದು ಕಷ್ಟ. ಊಟ, ಉಪಾಹಾರ ಬಿಡುತ್ತೇವೆ, ಹೊರತು ಪಾನ್‌ ಬೀಡಾ, ತಂಬಾಕು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜೈಲಿನಲ್ಲಿ ಪಾನ್‌ ಬೀಡಾ, ತಂಬಾಕು ಒದಗಿಸದಿದ್ದರೆ ಜೈಲಿನ ಹೊರಗೂ ಅವುಗಳನ್ನು ನಿಷೇಧಿಸಬೇಕು.

ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಈಗಾಗಲೇ ಇಂಥ ಕ್ರಮ ಕೈಗೊಳ್ಳಲಾಗಿದೆ. ಅದೇ ಕ್ರಮವನ್ನು ರಾಜ್ಯದಲ್ಲೂ ಅನುಸರಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನೂ ತ್ಯಜಿಸುತ್ತೇವೆ ಎಂದು ಕೈದಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next