Advertisement

Bellary Jail; ದರ್ಶನ್ ಜತೆ ಅರ್ಧ ಗಂಟೆ ಮಾತನಾಡಿದ ಪತ್ನಿ, ಸಹೋದರ

05:07 PM Sep 05, 2024 | Team Udayavani |

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ಅವರು ಗುರುವಾರ(ಸೆ 5) ಮಾತುಕತೆ ನಡೆಸಿದರು.

Advertisement

ವಿಜಯಲಕ್ಷ್ಮೀ ಅವರು ವಾರದೊಳಗೆ ಎರಡನೇ ಬಾರಿಗೆ ಪತಿಯನ್ನು ನೋಡಲು ಬಳ್ಳಾರಿ ಜೈಲಿಗೆ ಆಗಮಿಸಿದರು. ಈ ವೇಳೆ ವೇಳೆ ಜೈಲು ಅಧಿಕಾರಿಗಳು ಚಾಚೂ ತಪ್ಪದೆ ನಿಯಮಗಳನ್ನು ಪಾಲನೆ ಮಾಡಿದರು. ಸಂಜೆ 4.30ರಿಂದ 5.30ಕ್ಕೆ ಭೇಟಿಗೆ ಅವಕಾಶ ನೀಡಲಾಗಿತ್ತು. 20 ನಿಮಿಷ ಮುಂಚಿತವಾಗಿಯೇ ಬಂದು ವಿಸಿಟರ್ಸ್ ರೂಂ ನಲ್ಲಿ ವಿಜಯಲಕ್ಷ್ಮೀ ಅವರು ಕಾದು ಕುಳಿತಿದ್ದರು.

ದರ್ಶನ್ ರನ್ನು 4.29ಕ್ಕೆ ಹೈ ಸೆಕ್ಯೂರಿಟಿ ಸೆಲ್ ನಿಂದ ವಿಸಿಟರ್ಸ್ ರೂಮ್ ಗೆ ಕರೆತರಲಾಯಿತು. ಈ ವೇಳೆ ಮುಖ ಭಾವ ನೊಂದ ಹಾಗೆ ಕಂಡು ಬಂದಿದೆ. 4.30ರಿಂದ 5 ಗಂಟೆಯ ವರೆಗೆ ದರ್ಶನ್ ದಂಪತಿ ಮಾತುಕತೆ ನಡೆಸಿದ್ದು, ಪ್ರಕರಣದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೈಲು ನಿಯಮದ ಪ್ರಕಾರ ಕೇವಲ 30 ನಿಮಿಷ ಮಾತನಾಡಲು ಅವಕಾಶವಿದೆ. ಹೆಚ್ಚಿನ ಸಮಯ ಮಾತನಾಡಬೇಕಾದರೆ ಜೈಲು ಅಧೀಕ್ಷಕರ ಅನುಮತಿ ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next