Advertisement

Highway Service Road: ಸ್ಥಳೀಯರಿಗೆ ಶಾಪವಾದ ಹೆದ್ದಾರಿ ಸರ್ವಿಸ್‌ ರಸ್ತೆ

02:51 PM Aug 22, 2023 | Team Udayavani |

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್‌ ರಸ್ತೆಯು ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳು ಸೇರಿದಂತೆ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. 6 ಪಥದ ಹೈವೇ ರಸ್ತೆ ನಿರ್ಮಾಣದಲ್ಲಿ ವಹಿ ದಷ್ಟು ಮುತು ವರ್ಜಿ ಸರ್ವಿಸ್‌ ರಸ್ತೆ ನಿರ್ಮಾಣ ದಲ್ಲಿ ತೋರದ ಹಿನ್ನೆಲೆ ಯಲ್ಲಿ ಸರ್ವಿಸ್‌ ರಸ್ತೆ ಸಂಚಾರ ಜೀವಭಯ ಹುಟ್ಟಿ ಸುವಂತಾಗಿದೆ.

Advertisement

ಹೆದ್ದಾರಿಯ 2 ಕಡೆ ತಲಾ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ಗ್ರಾಮಮಿತಿಗಳಲ್ಲಿ ಪಾದಚಾರಿ ರಸ್ತೆ ನಿರ್ಮಿಸದೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಜಾನುವಾರು ಗಳ ಓಡಾಟ ದುಸ್ತರವಾಗಿದೆ. ಶಾಲೆ, ಅಸ್ಪತ್ರೆ, ಹೊಲಗದ್ದೆಗಳಿಗೆ ನಡೆದುಕೊಂಡು ಹೋಗಲು ಪಾದಚಾರಿ ರಸ್ತೆ ಅಗತ್ಯದ ಕುರಿತು ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದರೂ ಪ್ರಾ ಕಾರ ಮೌನ ವಹಿಸಿದೆ.

ಸರ್ವಿಸ್‌ ರಸ್ತೆಯುದ್ದಕ್ಕೂ ಒಂದೇ ಒಂದು ಪ್ರಯಾಣಿಕರ ತಂಗುದಾಣವಿಲ್ಲ. ಪ್ರಯಾಣಿಕರು ಮಳೆ ಗಾಳಿ, ಬಿಸಿಲಿನಲ್ಲಿ ನಿಂತು ವಾಹನಗಳಿಗೆ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ. ಅವೈಜಾnನಿಕ ರಸ್ತೆ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಲ್ಲುವ ಸೂಚನೆ ಅರಿತ ಹೈವೇ ಕಾಮಗಾರಿ ಡಿಬಿಎಲ್‌ ಕಂಪನಿ ರಸ್ತೆಯಲ್ಲೇ ಕಿಂಡಿ ನಿರ್ಮಿಸಿದೆ. ಪಾದಚಾರಿಗಳು ಕಿಂಡಿಯಲ್ಲಿ ಕಾಲು ಹಾಕಿದರೆ ಮುರಿಯುವುದಂತೂ ಪಕ್ಕವಾಗಿದೆ. ಸರ್ವಿಸ್‌ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ ಅಂಡರ್‌ ಪಾಸ್‌ಗೆ ತೆರಳಲು ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವವರ ಸಂಖ್ಯೆ ನಿತ್ಯ ಹೆಚ್ಚುತ್ತಿದ್ದು, ಇದರ ಪರಿಣಾಮ ಅಪಘಾತ ನಿತ್ಯ ಸಾಮಾನ್ಯವಾಗಿದೆ.

ಸರ್ವಿಸ್‌ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ:

ಸರ್ವಿಸ್‌ ರಸ್ತೆಯುದ್ದಕ್ಕೂ ಸಂಚಾರ ನಿಯಮ ಪಾಲನೆ ನಿಟ್ಟಿನಲ್ಲಿ ನಿರ್ಮಿಸಿರುವ ರಸ್ತೆ ಉಬ್ಬುಗಳಂತೂ ಅವೈಜ್ಞಾನಿಕವಾಗಿದ್ದು, ಸ್ವಲ್ಪ ಯಾಮಾರಿದರೆ ವಾಹನದ ಜೊತೆಗೆ ಸವಾರರ ಜೀವಕ್ಕೂ ಕುತ್ತು ಬರುವಂತಿದೆ. ರಸ್ತೆ ಉಬ್ಬು ನಿರ್ಮಾಣ ಮಾಡಿದ್ದರೂ ಅದಕ್ಕೆ ತಕ್ಕಂತೆ ಸೂಚನಾ ಫಲಕ ಅಳವಡಿಸದೆ ಸವಾರರು ವೇಗವಾಗಿ ಬಂದು ಉಬ್ಬು ಹತ್ತಿಸಿ ಬೀಳುವ ಪ್ರಸಂಗಗಳು ಹೆಚ್ಚಾಗಿದೆ.

Advertisement

ಅಪಾಯಕಾರಿಯಾದ ಸರ್ವಿಸ್‌ ರಸ್ತೆಯ ಸಂಚಾರ: ಆಕ್ರೋಶ: 

ಸರ್ವಿಸ್‌ ರಸ್ತೆ ನಿರ್ಮಾಣವಾಗಿ ವರ್ಷ ಕಳೆದರೂ ಕೆಲವು ಕಡೆ ರಸ್ತೆ ಬದಿ, ಕಾಲುವೆ, ಕೆರೆಕಟ್ಟೆಗಳಿಗೆ ತಡೆಗೋಡೆ ನಿರ್ಮಿಸಲು ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬೂದನೂರು ಬಳಿ ಕೆರೆ, ಕಾಲುವೆ, ಗುಂಡಿಗಳಿಗೆ ಸರಿಯಾದ ಭದ್ರತೆ ಒದಗಿಸಿಲ್ಲ. ಇದರಿಂದ ರಾತ್ರಿ ವೇಳೆ ಸಂಚಾರ ದುಸ್ತರವಾಗಿದೆ. ಇನ್ನೂ ಹೈವೇ ಪ್ರಾ ಕಾರ ಕೇಂದ್ರದಿಂದ 150 ಕೋಟಿ ರೂ. ಅನುದಾನ ಬರಲಿದ್ದು, ಬಳಿಕ ಕಾಮಗಾರಿ ಮಾಡುವುದಾಗಿ ತಿಳಿಸಿದೆ. ಆದರೆ ಯಾವಾಗ ಅನುದಾನ ಬರುತ್ತದೆಯೋ ಗೊತ್ತಿಲ್ಲ. ಇದರಿಂದ ಕಾಮಗಾರಿ ಮಾಡುವ ಸೂಚನೆಯೂ ಗೋಚರಿಸುತ್ತಿಲ್ಲ. ಅಲ್ಲಿಯ ವರೆಗೂ ಮುಂಜಾಗ್ರತೆಯಾಗಿ ಸರ್ವಿಸ್‌ ರಸ್ತೆಗೆ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಮುಂದೆ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

ರಸ್ತೆಯ ಬಹುತೇಕ ಕಡೆ  ಪೂರ್ಣ ಗೊಳ್ಳದ ಕಾಮಗಾರಿ:

ಸರ್ವಿಸ್‌ ರಸ್ತೆಯ ಬಹುತೇಕ ಕಡೆ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಚರಂಡಿ ಸ್ಥಳೀಯ ಕೆರೆ ಕಟ್ಟೆ ಕಾಲುವೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುವ ಆತಂಕ ಸೃಷ್ಟಿಯಾಗಿದೆ. ಆದರೆ ಹೆದ್ದಾರಿ ಪ್ರಾ ಧಿಕಾರದವರು ಕಾಮಗಾರಿ ನಿಲ್ಲಿಸಿದ್ದಾರೆ. ಹೆದ್ದಾಗಿ ಕಾಮಗಾರಿಗೆ ಆಗಮಿಸಿ ಅಲ್ಲಲ್ಲಿ ವಾಸ ಮಾಡುತ್ತಿದ್ದ ಕಾರ್ಮಿಕರು ಸಹ ಜಾಗ ಖಾಲಿ ಮಾಡಿದ್ದಾರೆ. ಇದರಿಂದ ಮುಂದೆ ಅಲ್ಲಲ್ಲಿ ಉಳಿದಿರುವ ಕಾಮಗಾರಿ ನಡೆಯುವುದು ಅನುಮಾನವಾಗಿದೆ.

-ಎಚ್‌.ಶಿವರಾಜು

 

Advertisement

Udayavani is now on Telegram. Click here to join our channel and stay updated with the latest news.

Next